ಬೋಟ್ ಗಳಿಗೆ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಿ: ಗಣಪತಿ ಮಾಂಗ್ರೆ

ಉಡುಪಿ: ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಅವಘಡಕ್ಕೆ ಸಿಲುಕುವ ಮೀನುಗಾರರ ಜೀವ ರಕ್ಷಣೆ ಹಾಗೂ‌ ಬೋಟ್‍ಗಳನ್ನು ರಕ್ಷಿಸುವ ಸಲುವಾಗಿ ಎಲ್ಲ ಬೋಟ್‍ಗಳಿಗೆ ಟ್ರ್ಯಾಕರ್ ಮಾದರಿಯ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಾಧುನಿಕ ಸಂಪರ್ಕ ತಂತ್ರಜ್ಞಾನದ ಕೊರತೆಯಿಂದ ನೂರಾರು ಮಂದಿ ಮೀನುಗಾರರು ದುರಂತಕ್ಕೆ ಸಿಲುಕಿ, ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೋಟ್ ಗಳಿಗೆ ಟ್ರ್ಯಾಕರ್ ಗಳನ್ನು ಅಳವಡಿಸಿದ್ದಲ್ಲಿ […]

ಸುವರ್ಣ ತ್ರಿಭುಜ ಬೋಟ್ ದುರಂತ: ಕೇಂದ್ರ ಸರ್ಕಾರ ನೌಕಾಪಡೆಯನ್ನು ರಕ್ಷಿಸಲು ಹೋಗಿ‌ ಮೀನುಗಾರರಿಗೆ ಅನ್ಯಾಯ ಮಾಡಿದೆ-ಗಣಪತಿ ಮಾಂಗ್ರೆ

ಉಡುಪಿ: ಏಳು ಮಂದಿ ಮೀನುಗಾರರು ಸಹಿತ ಸುವರ್ಣ ತ್ರಿಭುಜ ಬೋಟ್ ದುರಂತದಲ್ಲಿ ಸತ್ಯವನ್ನು ಮುಚ್ಚಿಡಲಾಗಿತ್ತು. ನೌಕಾಪಡೆಯನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನ್ಯಾಯ ಎಸಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿದರು. ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾಪಡೆಯ ಅಜಾಗರೂಕತೆಯಿಂದಲೇ ಈ ದುರ್ಘಟನೆ ನಡೆದಿತ್ತು. ಇದರಿಂದ ನೌಕಾಪಡೆಯ ನೌಕೆಗೂ ಹಾನಿಯಾಗಿತ್ತು. ಆದರೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ಅಂದು ಮುಚ್ಚಿಡಲಾಗಿತ್ತು. ಅವಘಡವನ್ನು ಮರೆಮಾಚುವ […]

ಉಡುಪಿ: ಬಹುಮಾನದ ಆಸೆಗೆ ಬಿದ್ದು ಬರೋಬ್ಬರಿ 26 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಉಡುಪಿ: 12 ಲಕ್ಷ ರೂ. ಬಹುಮಾನದ ದುರಾಸೆಗೆ ಹೋಗಿ ವ್ಯಕ್ತಿಯೊಬ್ಬರು 26 ಲಕ್ಷ ರೂ. ಕಳೆದುಕೊಂಡ ಘಟನೆ ಒಂದೂವರೆ ವರ್ಷದ ಬಳಿಕ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಉಡುಪಿಯ ಕೆ. ನಾಗರಾಜ ಭಟ್ ಹಣ ಕಳೆದುಕೊಂಡ ವ್ಯಕ್ತಿ. ಇವರಿಗೆ 2019ರ ಮಾರ್ಚ್ 29ರಂದು ವಂಚಕನೊಬ್ಬ ಕರೆ ಮಾಡಿ, ‘ನಿಮಗೆ ನ್ಯಾಪ್ಟಾಲ್ ಕಂಪನಿ ಹೆಸರಿನಲ್ಲಿ ಸ್ಕ್ರಾಚ್ ಕೂಪನ್ ಬಂದಿದ್ದು, ನೀವು 12 ಲಕ್ಷ ರೂ. ವಿಜೇತರಾಗಿದ್ದೀರಿ ಎಂದು ಹೇಳಿದ್ದಾನೆ. ಬಳಿಕ ಆ ವ್ಯಕ್ತಿ ಹಣವನ್ನು ಪಡೆಯಬೇಕಾದರೆ ರಿಜಿಸ್ಟ್ರೇಶನ್ ಚಾರ್ಜ್ ಪಾವತಿಸುವಂತೆ […]

ಹತ್ರಾಸ್ ಗ್ಯಾಂಗ್ ರೇಪ್; ಸಂತ್ರಸ್ತೆಗೆ ಆರೋಪಿಯೊಂದಿಗೆ ಸಂಬಂಧ ಇತ್ತು: ಬಿಜೆಪಿ ನಾಯಕ

ಬಾರಾಬಂಕಿ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಯ ಚಾರಿತ್ರ್ಯ ಹರಣದ ಹೇಳಿಕೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ಬಿಜೆಪಿ ನಾಯಕ ರಣ್ಜೀತ್ ಬಹದ್ದೂರ್ ಶ್ರೀವಾಸ್ತವ ‘ಸಂತ್ರಸ್ತ ಯುವತಿ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು’ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. 19 ವರ್ಷದ ದಲಿತ ಯುವತಿಯ ಮೇಲೆ ಭೀಕರ ದೌರ್ಜನ್ಯ ಎಸಗಿದ ಮೇಲ್ವರ್ಗದ ಯುವಕರು ಮುಗ್ಧರು. ಇದರಲ್ಲಿ ಯುವತಿಯೇ ದಾರಿತಪ್ಪಿದ್ದಳು ಎಂದು ಗಂಭೀರ ಆರೋಪ ಮಾಡಿದ್ದಾರೆ. ಯುವತಿಯೇ ಆರೋಪಿಯನ್ನು ಬರಲು ಹೇಳಿದ್ದಳು. ಇಂತಹ ಹೆಣ್ಣುಮಕ್ಕಳೇ ಕಬ್ಬಿನ ಗದ್ದೆ […]

ಉಡುಪಿ: ಅತ್ಯಾಧುನಿಕ ವಿನ್ಯಾಸದೊಂದಿಗೆ ‘ಎ ಟು ಝೆಡ್ ಕಾರ್ ಎಕ್ಸೆಸೇರಿಯಸ್ ಶೋರೂಮ್’ ನಾಳೆ ಶುಭಾರಂಭ

ಉಡುಪಿ: ಕಳೆದ 25 ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ‌ ಉಡುಪಿಯ ಎ ಟು ಝೆಡ್ ಕಾರ್ ಎಕ್ಸೆಸೇರಿಯಸ್ ಸಂಸ್ಥೆ ಇದೀಗ ಹೊಸ ಅತ್ಯಾಧುನಿಕ ವಿನ್ಯಾಸದೊಂದಿಗೆ ಗುರುವಾರ (ಅ.8) ಶುಭಾರಂಭಗೊಳ್ಳಲಿದೆ. ಉಡುಪಿ ಕಿನ್ನಿಮೂಲ್ಕಿಯ ಸ್ವಾಗತ ಗೋಪುರದ ಸಮೀಪದ ಮಿಸ್ಬಾ ಟವರ್ ನಲ್ಲಿ ಶುಭಾರಂಭಗೊಳ್ಳಲಿರುವ ಸಂಸ್ಥೆಯಲ್ಲಿ ಜನತೆಗೆ ಮತ್ತಷ್ಟು ಸೌಲಭ್ಯಗಳು ದೊರೆಯಲಿವೆ. ಗ್ರಾಹಕರಿಗೆ ಸಿಗುವ ಸೇವೆಗಳು: ಎಕ್ಸೆಸೇರಿಯಸ್, ಅಲೋಯ್ ವೀಲ್, ಬಾಡಿ ಕಿಟ್ಸ್, ಬ್ರಾಂಡೆಡ್ ಟಯರ್ಸ್, ಪಾಲಿಶಿಂಗ್, ಇಂಟೀರಿಯರ್ ವರ್ಕ್ಸ್, ವೀಲ್ ಅಲೈನ್ ಮೆಂಟ್, ಬ್ಯಾಲೆನ್ಸಿಂಗ್, ಆಡಿಯೋ ಸಿಸ್ಟಮ್, […]