ಪಡುಕೆರೆ ಕಡಲ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲ ಪತ್ತೆ

ಉಡುಪಿ: ಕುತ್ಪಾಡಿ ಗ್ರಾಮದ ಪಡುಕೆರೆ ಕಡಲತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲ ಮೀನು ಪತ್ತೆಯಾಗಿದೆ. ಸಮುದ್ರದಲ್ಲಿ ತೇಲಿಬಂದ ಭಾರಿ ಗಾತ್ರದ ತಿಮಿಂಗಿಲ ಮೀನಿಗೆ ಸಮುದ್ರದ ದಡದಲ್ಲಿ ಈಜಲು ನೀರು ಸಾಲದೆ ಅಸುನೀಗಿದೆ. ಕಡಲತೀರದಲ್ಲಿ ಪತ್ತೆಯಾದ ಮೀನನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಈ ಮೀನು ಸುಮಾರು 25 ಅಡಿ ಉದ್ದವಿದ್ದು, ತೀರ ಪ್ರದೇಶದಲ್ಲಿ ಕಾಣ ಸಿಗುವುದು ಬಹಳ ಅಪರೂಪ. ತಿನ್ನಲು ಯೋಗ್ಯವಲ್ಲದ ಈ ಮೀನನ್ನು ಜೆಸಿಬಿಯ ಮೂಲಕ ಕಡಲ ತೀರ ಪ್ರದೇಶದಲ್ಲಿ ಬೃಹತ್ ಗುಂಡಿ ತೆಗೆದು ಹೂಳಲಾಯಿತು‌.

ಅಪಘಾತದಲ್ಲಿ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಸಾವು

ರಾಮನಗರ: ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಎಟಿಎಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಹನುಮಂತ ಕಳೆದ 6 ವರ್ಷಗಳಿಂದ ರಾಮನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ವರ್ಷದ ಮಗುವಿದೆ.

ಕಟಪಾಡಿ: ಪಾಳುಬಿದ್ದ ಮನೆಯಲ್ಲಿ ವಾಸಿಸುತ್ತಿದ್ದವರಿಗೆ ಆಹಾರ ವಸ್ತು ವಿತರಣೆ

ಉಡುಪಿ: ಕಟಪಾಡಿಯ ಏಣಗುಡ್ಡೆ ಬಳಿ ಪಾಳುಬಿದ್ದ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಮುದ್ದು ಪೂಜಾರಿ ಅವರ ಮನೆಗೆ ಬಿಜೆಪಿಯ ನಯನಾ ಗಣೇಶ್ ಅವರು ಭೇಟಿ ನೀಡಿ ಆಹಾರ ವಸ್ತುಗಳನ್ನು ವಿತರಿಸಿದರು.

ಬೆಂಗಳೂರು: ರಾಜ್ಯದಲ್ಲಿಂದು‌ 7 ಕೊರೊನಾ ಪಾಸಿಟಿವ್ ಪತ್ತೆ: ಓರ್ವ ಸಾವು

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 7 ಕೊರೊನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು, ಹೀಗಾಗಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 415 ಕ್ಕೆ ಏರಿಕೆಯಾಗಿದ್ದು, ಕಲಬುರ್ಗಿಯಲ್ಲಿ 80 ವರ್ಷದ ಓರ್ವ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾದಿಂದ ರಾಜ್ಯದಲ್ಲಿ‌ಒಟ್ಟು 17 ಜನರು ಸಾವನ್ನಪ್ಪಿದ್ದು, ಒಟ್ಟು 114 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲಾವಾರು ಸೋಂಕಿತರನ್ನು ಗಮನಿಸುವುದಾದದರೆ ಇಂದು ಪತ್ತೆಯಾದ 7 ಜನರಲ್ಲಿ ತಲಾ ಮೂವರು ವಿಜಯಪುರ ಹಾಗೂ ಕಲಬುರಗಿಯವರಾಗಿದ್ದಾರೆ. ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇದರಲ್ಲಿ ಮೂವರು […]

ಬಂಟ್ವಾಳದಲ್ಲಿ ‌ಮತ್ತೊಂದು‌ ಕೊರೊನಾ ಪಾಸಿಟಿವ್; ಮೃತಪಟ್ಟ ಮಹಿಳೆಯಿಂದ ವೃದ್ದೆಗೆ ಕೊರೊನ ಹರಡಿರುವ ಸಾಧ್ಯತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಮತ್ತೊಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಬಂಟ್ವಾಳ ಭಾಗದ 67 ವರ್ಷದ ವೃದ್ದೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಭಾನುವಾರ ಮೃತಪಟ್ಟ ಬಂಟ್ವಾಳದ ಮಹಿಳೆಯ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಂಟ್ವಾಳದಲ್ಲಿ ಕೊರೊನಾ ಪರಿಣಾಮದಿಂದ 45 ವರ್ಷದ ಮಹಿಳೆ ಭಾನುವಾರ ಮೃತಪಟ್ಟಿದ್ದು, ಮಹಿಳೆಯ ನೆರೆ ಮನೆಯಲ್ಲಿ ಈ ವೃದ್ದೆ ವಾಸವಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ವೃದ್ದೆಗೆ ಚಿಕಿತ್ಸೆ ನೀಡಲಾಗುತ್ತಿದೆ. ದ‌.ಕ ಜಿಲ್ಲೆಯಲ್ಲಿ ಒಟ್ಟು 16 […]