ಏಪ್ರಿಲ್ 17 -18 ರಂದು ಪತ್ರಿಕೆಗಳಲ್ಲಿ ಚುನಾವಣಾ ಜಾಹೀರಾತು: ಪೂರ್ವಾನುಮತಿ ಅಗತ್ಯ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಏಪ್ರಿಲ್ 18 ಮತದಾನ ನಡಯಲಿದ್ದು, ಮತದಾನ ನಡೆಯುವ 48 ಗಂಟೆಗಳ ಮುಂಚೆ (ಏಪ್ರಿಲ್ 17 ಮತ್ತು 18)  ದಿನಪತ್ರಿಕೆ ಸೇರಿದಂತೆ ಯಾವುದೇ ಮುದ್ರಣ ಮಾಧ್ಯಮದಲ್ಲಿ, ರಾಜಕೀಯ ಪಕ್ಷಗಳು, ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರ  ಯಾವುದೇ ಸಂಸ್ಥೆ , ವ್ಯಕ್ತಿಗಳು ಜಾಹೀರಾತು ಪ್ರಕಟಿಸುವ ಮುನ್ನ, ಜಾಹೀರಾತಿನಲ್ಲಿನ ವಿಷಯಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಮಾದ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ) ಯ ಪೂರ್ವಾನುಮತಿಯನ್ನು ಕಡ್ಡಾಯವಾಗಿ  ಪಡೆದು ಪ್ರಕಟಿಸಬೇಕಾಗಿದೆ. ಪೂರ್ವಾನುಮತಿ ಇಲ್ಲದೇ […]

ಪಕ್ಷದ ಟೀಶರ್ಟ್ ವಿತರಿಸುತ್ತಿದ್ದ ಮರ್ಸಿಡೆಸ್ ಬೆಂಝ್ ಕಾರ್ ವಶ

ಉಡುಪಿ: ಅನುಮತಿ ಇಲ್ಲದೇ ಬಿಜೆಪಿ ಪಕ್ಷದ  ಟೀಶರ್ಟ್‍ಗಳನ್ನು ತಂದು ವಿತರಿಸುತ್ತಿದ್ದ ಮರ್ಸಿಡೆಸ್ ಬೆಂಝ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಉಡುಪಿಯಲ್ಲಿ ನಡೆದ ಬಿಜೆಪಿ ಪಕ್ಷದ ಸೈಕಲ್ ಜಾಥಾ ಪ್ರಾರಂಭ ಸಂದರ್ಭದಲ್ಲಿ, ಬನ್ನಂಜೆ ಸಮೀಪ ಅನುಮತಿ ಇಲ್ಲದೇ ಕಾರಿನಲ್ಲಿ ಟೀಶರ್ಟ್, ಟೋಪಿ ತಂದು ವಿತರಿಸಲಾಗುತಿತ್ತು. ಈ ಸಂದರ್ಭದಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ, ಸೊತ್ತುಗಳನ್ನು ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ನಾಗರಾಜ್ ಅವರು ಈ ಸಂಬಂಧ ಉಡುಪಿ […]

ಸದ್ದು ಮಾಡಿತು ಫ್ಯಾಮಿಲಿ ಸೆಂಟಿಮೆಂಟು ಮತ್ತು ಕಾಮಿಡಿ ಪೆಪ್ಪರ್ ಮಿಂಟಿನ “ಗರ” ಪೋಸ್ಟರ್

ನಟ , ಕನ್ನಡದ ಖ್ಯಾತ ನಿರೂಪಕ, ಬಿಗ್ ಬಾಸ್ ಖ್ಯಾತಿಯ ರೆಹಮಾನ್ ನಾಯಕ ನಟನಾಗಿ ಅಭಿನಯಿಸಿರುವ, ಕೆ.ಆರ್. ಮುರಳೀಕೃಷ್ಣ ನಿರ್ದೇಶನದ  “ಗರ” ಚಿತ್ರ ಏಪ್ರಿಲ್ 26 ರಂದು ತೆರೆಗಪ್ಪಳಿಸಲು ಸಿದ್ದವಾಗಿದೆ. ಈಗಾಗಲೇ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸರುವ ಗರ ಚಿತ್ರದಲ್ಲಿ ಬಾಲಿವುಡ್ ನಟ ಜಾನಿ ಲಿವರ್, ಹಾಘೂ ಸಾಧುಕೋಕಿಲ ಅವರ  ಕಾಮಿಡಿ ಕಿಚಡಿ ಚಿತ್ರದಲ್ಲಿ ಸಖತ್ ಹೈಲೈಟ್ ಆಗಿದ್ದು,ನಿರ್ದೇಶಕ ಕಮ್ ವಕೀಲರಾದ ಮುರಳೀಕೃಷ್ಣ ಅವರ ಚೊಚ್ಚಲ ಚಿತ್ರವೂ ಇದಾಗಿದೆ.ಈ ಮೊದಲು ಹಲವು ಚಿತ್ರಗಳ ನಿರ್ಮಾಪಕರಾಗಿ ಮಿಂಚಿದ್ದ ಮುರಳೀಕೃಷ್ಣ  […]