‘ಬ್ರಹ್ಮಶ್ರೀ ನಾರಾಯಣಗುರು ಜಂಕ್ಷನ್‌’ ನಾಮಕರಣ ಮತ್ತು ನಾಮಫ‌ಲಕ ಅನಾವರಣ

ಬೆಂಗಳೂರು : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಿ.ಡಿ.ಮರ ಜಂಕ್ಷನ್‌ಗೆ ‘ಬ್ರಹ್ಮಶ್ರೀ ನಾರಾಯಣಗುರು ಜಂಕ್ಷನ್‌’ ನಾಮಕರಣ ಮತ್ತು ನಾಮಫ‌ಲಕ ಅನಾವರಣ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಉದ್ಘಾಟನೆ ನೆರವೇರಿಸಿದ ಬಿಬಿಎಂಪಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹಾಗುರುಗಳ ಹೆಸರನ್ನು ಈ ಜಂಕ್ಷನ್‌ಗೆ ಇಟ್ಟಿರುವುದು ಮಹಾನಗರ ಪಾಲಿಕೆಗೆ ಗೌರವ ತಂದು ಕೊಟ್ಟಿದೆ ಎಂದರು. ಶಾಸಕಿ ಸೌಮ್ಯಾರೆಡ್ಡಿ, ಪಾಲಿಕೆ ಸದಸ್ಯೆಯರಾದ ಲಕ್ಷ್ಮೀ ನಟರಾಜ್‌, ಭಾಗ್ಯಲಕ್ಷ್ಮೀ  ಮುರಳಿ ಮಾತನಾಡಿದರು. ಬಿಬಿಎಂಪಿಯ ಜಂಟಿ ಆಯುಕ್ತರಾದ ಡಾ| ಸೌಜನ್ಯ, […]

ಅಕ್ಷಯ್ ಕುಮಾರ್ ಅಭಿನಯದ “ಕೇಸರಿ” ಚಿತ್ರ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಇದೇ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ನೈಜ ಕಥೆಗಳಿಗೆ ನಾನೇ ದಿ ಬೆಸ್ಟ್ ಎಂದು ಮತ್ತೊಮ್ಮೆ ಅಕ್ಷಯ್ ಕುಮಾರ್ ತೋರಿಸಲು ಹೊರಟಂತಿದೆ ಈ ಟ್ರೈಲರ್. 1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿರುವ ಕೇಸರಿ ಸಿನಿಮಾ ಅತ್ಯಂತ ರೋಚಕವಾಗಿ ಮೂಡಿಬಂದಿದೆ ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಆ ದೃಶ್ಯಗಳು […]

ಯುದ್ಧ ಸ್ಮಾರಕ ನಿರ್ಮಾಣದ ಬಗ್ಗೆ ಐಡಿಯಾ ಬಂದಿದ್ದು, ಉಡುಪಿಯ ಓಂಕಾರ ಶೆಟ್ಟಿಯಿಂದ :ಮೋದಿ

ಉಡುಪಿ: ಹುತಾತ್ಮರಿಗೆ ಗೌರವ ನೀಡಲೆಂದೇ ನಿರ್ಮಿಸಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಣೆ ಮಾಡಿದರು . ಈ ಬಗ್ಗೆ ನರೇಂದ್ರ ಮೋದಿ ಸಂತೋಷ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡ್ತಿರೋದು ನನಗೆ ಹೆಮ್ಮೆಯೆನಿಸುತ್ತದೆ. ನನಗೆ ಯುದ್ಧ ಸ್ಮಾರಕ ನಿರ್ಮಾಣದ ಬಗ್ಗೆ ಐಡಿಯಾ ಬಂದಿದ್ದು, ಕರ್ನಾಟಕದ ಉಡುಪಿ ಮೂಲದ ಓಂಕಾರ ಶೆಟ್ಟಿ ಅವರಿಂದ ಎಂದು  ಮೋದಿ ಹೇಳಿದ್ದಾರೆ. ಮನ್​​ ಕೀ ಬಾತ್​​ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಮೋದಿ, ‘ಪಿಎಂ ನರೇಂದ್ರ ಮೋದಿ’ ಆ್ಯಪ್‌ನಲ್ಲಿ ಉಡುಪಿಯ ಓಂಕಾರ […]

ಚಕ್ರವರ್ತಿ ಸೂಲಿಬೆಲೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾಡಿರುವ ಭಾಷಣ ರಾಜಕೀಯಪ್ರೇರಿತವಾಗಿದೆ

ಕುಂದಾಪುರ: ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾಡಿರುವ ಭಾಷಣ ರಾಜಕೀಯಪ್ರೇರಿತವಾಗಿದೆ ಎಂದು ಆರೋಪಿಸಿ ಭಾಷಣಕ್ಕೆ ಅವಕಾಶ ಮಾಡಿಕೊಟ್ಟ ಕಾಲೇಜು ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರು ಶುಕ್ರವಾರ ಸಭೆ ನಡೆಸಿ ಮುಂದಿನ ಹೋರಾಟಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ, ಪತ್ರಕರ್ತ ಶಶಿಧರ ಹೆಮ್ಮಾಡಿ, ಚಕ್ರವರ್ತಿ ಸೂಲಿಬೆಲೆ ಕಳೆದ ಹದಿನೈದು ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಸೂಲಿಬೆಲೆ ಎಂದರೆ ಓರ್ವ ದೇಶಭಕ್ತ, ಪ್ರಖರ […]