ಸಿಂಹದ ಮರಿ  ಅಭಿನಂದನ್ ವರ್ಧಮಾನ್ ರವರಿಗೆ ಅಭಿನಂದನೆ

ಶ್ರೀ ರಾಮಸೇನೆ ಉಡುಪಿ ಜಿಲ್ಲೆ ಮತ್ತು ಶ್ರೀ ರಾಮಸೇನೆ ಮಣಿಪಾಲ ಘಟಕ ವತಿಯಿಂದ. ಇಂದು ಸಂಜೆ  5:00ಗಂಟೆಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ  ಮೆರವಣಿಗೆ ಮೂಲಕ ಸಾಗಿ ಬಂದು ಟೈಗರ್  ಸರ್ಕಲ್ ನಲ್ಲಿ, ಭಾರತದ ವಾಯುಪುತ್ರ ಸಿಂಹದ ಮರಿ  ಅಭಿನಂದನ್ ವರ್ಧಮಾನ್ ರವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು, ಮಧುಕರ ಮುದ್ರಾಡಿ,  ನವೀನ್ ರಾವ್ ಮಾತನಾಡಿದ್ದರು.  ಈ ಸಂದರ್ಭದಲ್ಲಿ  ಮಣಿಪಾಲಘಟಕಾಧ್ಯಕ್ಷರಾದ ಹರೀಶ್ ಪೂಜಾರಿ,ಶ್ರೀ ರಾಮಸೇನೆಯ ಮುಖಂಡರಾದ ಶರತ್ […]

ಅಭಿನಂದನ್ ಭಾರತಕ್ಕೆ ವಾಪಾಸ್ ಬಂದಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು: ಶೋಭಾ ಕರಂದ್ಲಾಜೆ

ಉಡುಪಿ: ಅಭಿನಂದನ್ ವರ್ಧಮಾನ್ ಭಾರತಕ್ಕೆ ವಾಪಾಸ್ ಬಂದಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು. ನಮ್ಮ ಪ್ರಧಾನಿ ಮೋದಿ ಸಿಂಹದ ಮರಿ ಆಗಿರುವುದಕ್ಕೆ ಇದೆಲ್ಲ ಸಾಧ್ಯವಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಂಗ್ ಕಮಾಂಡರ್ ಅಭಿನಂದನ್ ಅಭಿನಂದನಾರ್ಹರು. ಸಾಹಸದ ಕೆಲಸ ಮಾಡಿ ಭಾರತಕ್ಕೆ ಬರುತ್ತಿದ್ದಾರೆ. ಜಿನೀವಾ ಒಪ್ಪಂದದ ಪ್ರಕಾರ ಸೈನಿಕರಿಗೆ ಹಾನಿ ಮಾಡಬಾರದು. ಆದರೆ ಪಾಕ್ ಹಲ್ಲೆ ನಡೆಸಿ ವಿಡಿಯೋ ಬಿಡುಗಡೆ ಮಾಡಿತು. ಭಾರತ ಒತ್ತಡ ತಂದ ಪರಿಣಾಮ ಅವರ ಬಿಡುಗಡೆ […]

ಭಾರತಕ್ಕೆ ಮರಳಿದ ವೀರಯೋಧ ಅಭಿನಂದನ್: ಧೀರನಿಗೆ ಉಘೇ ಉಘೇ ಎಂದರು ಭಾರತೀಯರು

ರಾಷ್ಟ್ರ: ಪಾಕ್ ವಶದಲ್ಲಿದ್ದ ವಿಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಅಧೀಕೃತವಾಗಿ ಹಸ್ತಾಂತರಿಸಿದೆ.ಇದೀಗ ವಾಘಾ ಗಡಿಯತ್ತ ಬಂದಿರುವ ಅಭಿನಂದನ್ ಅವರನ್ನು ಸೇನಾಧಿಕಾರಿಗಳು, ಸರಕಾರಿ‌ ಮುಖ್ಯಸ್ಥರು, ಭರಮಾಡಿಕೊಂಡಿದ್ದಾರೆ.ಅಭಿನಂದನ್ ಅವರನ್ನು ಸದ್ಯ ಸಾರ್ವಜನಿಕ‌ರ ಎದುರು ಮುಖಾಮುಖಿಯಾಗಿಸದೇ, ವಿವಿಧ ಆರೋಗ್ಯ ತಪಾಸಣೆ ಸೇರಿದಂತೆ,ಇತರ ಪ್ರಕ್ರಿಯೆಗೊಳಪಡಿಸುತ್ತೇವೆ, ಇದಕ್ಕೋಸ್ಕರ ವಿಮಾನದಲ್ಲಿ‌ ಅಭಿನಂದನ್ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಮುಂದೆಯೂ ಅಭಿನಂದನ್ ಅವರು ವಿಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಅಭಿನಂದನ್ ತೋರಿದ ಸಾಹಸದಿಂದ ದೇಶದ ಗೌರವ ಹೆಚ್ಚಿದೆ: ಪೇಜಾವರ ಶ್ರೀ

ಉಡುಪಿ: ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು, ಶತ್ರು (ಪಾಕಿಸ್ತಾನ) ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವವನ್ನು ಹೆಚ್ಚಿಸಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭಿನಂದನ್ ಜೇಬಲ್ಲಿದ್ದ ಭದ್ರತೆಗೆ ಸಂಬಂಧಿಸಿದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ. ಅವರು ಸಾಹಸಕ್ಕೆ ಪ್ರತಿಯೊಬ್ಬ ಭಾರತೀಯರು ಸೆಲ್ಯೂಟ್ ಹೊಡೆಯಬೇಕು. ಅವರಿಗೆ ಸಾವಿರ ಸಾವಿರ ಅಭಿನಂದನೆಗಳು ಎಂದರು. ಯುದ್ಧ ಬೇಡ: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಯುದ್ಧದಿಂದ […]

ಯೋಧರಿಗೆ ಬೆಂಬಲ ನೀಡಲು ಚಿತ್ರ ವೀಕ್ಷಣೆ: ಪೇಜಾವರ ಶ್ರೀ

ಉಡುಪಿ: ಪೇಜಾವರದ ಮಠದ ವಿಶ್ವೇಶತೀರ್ಥರು, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಗುರುವಾರ ರಾತ್ರಿ ಮಣಿಪಾಲದ ಚಿತ್ರಮಂದಿರದಲ್ಲಿ ” ಉರಿ ” ಚಿತ್ರವನ್ನು ವೀಕ್ಷಿಸಿದರು. ಸ್ವಾಮೀಜಿಗಳಿಗಾಗಿ ಚಿತ್ರ ವೀಕ್ಷಣೆಗೆಂದು ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು. ಸಿನಿಮಾ ವೀಕ್ಷಿಸಿ ಮಾತನಾಡಿದ ಶ್ರೀಗಳು, ಸೈನಿಕರ ವೀರಗಾಥೆಯನ್ನು ಬಿಂಬಿಸುವ ದೇಶಪ್ರೇಮದ ಕಥಾನಕ ಈ ಚಿತ್ರ ಎಂದು ಹೇಳಿದರು. ಸೈನಿಕ ಮತ್ತು ಸಂತನ ಬದುಕು ಸಮಾಜಕ್ಕೆ ಮುಡಿಪಾಗಿರುತ್ತದೆ. ಸೈನಿಕರ ವೀರತ್ವಕ್ಕೆ ನೈತಿಕ ಬೆಂಬಲ ಕೊಡುವುದು ಕರ್ತವ್ಯ ಆಗಬೇಕೆಂಬ ಆಶಯದಿಂದ […]