ಡಿ.25ರಂದು ಮೂವರು ಸಾಧಕರಿಗೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳಿಂದ ಸನ್ಮಾನ

ಉಡುಪಿ: ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ಮೂವರು ಸಾಧಕರಿಗೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಇದೇ ಬರುವ ಡಿ.25ರಂದು ಮಧ್ಯಾಹ್ನ 2.30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಕೃಷ್ಣರಾಜ ಸರಳಾಯ ಹಾಗೂ ಸರಳಾ ಬಿ.ಕಾಂಚನ್‌ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗಿದೆ. ಬಡಗುಬೆಟ್ಟು ಕೋ ಆಪರೇಟಿವ್ […]

ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗೆ ₹100 ಮುಖಬೆಲೆಯ ನಾಣ್ಯ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ವಿಶೇಷ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಡಿ.24ರಂದು ಬಿಡುಗಡೆ ಮಾಡಲಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ, ಸಂಸತ್ತಿನಲ್ಲಿ ಶೀಘ್ರ ವಾಜಪೇಯಿ ಅವರ ಪ್ರತಿಮೆ ಸ್ಥಾಪಿಸಲು ಸಂಸದೀಯ ಸಮಿತಿ ಒಪ್ಪಿಕೊಂಡಿದೆ. ₹100 ಮೌಲ್ಯದ ಈ ನಾಣ್ಯವು 35 ಗ್ರಾಂ ತೂಕವಿರುತ್ತದೆ. ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಭಾವಚಿತ್ರವಿದ್ದು ದೇವನಾಗರಿ ಲಿಪಿಯಲ್ಲಿ ಅವರ ಹೆಸರಿರುತ್ತದೆ. ಭಾವಚಿತ್ರದ ಕೆಳಗೆ ಜನನ–ಮರಣದ ಇಸವಿ ಇರಲಿದೆ ಹಾಗೂ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ವಾಜಪೇಯಿ ಅವರ ಪುತ್ಥಳಿ […]

ನಿದ್ದೆ ಮಾಡೋದಕ್ಕೆ ಇರೋ ಈ ನಿಯಮ ಪಾಲಿಸಿದ್ರೆ ನೀ  ಗೆದ್ದೆ : ಸುಖವಾಗಿ ಮಲಗಲು ಇಲ್ಲಿದೆ ಟಿಪ್ಸ್

ಮಲಗಿದಾಗೆಲ್ಲಾ ನಿದ್ದೆ ಬರುತ್ತದೆಯೇ…? ಸಂತೆಯಲ್ಲೂ ಮಲಗಿದರೆ ನಿದ್ರಾದೇವಿ ಮುತ್ತಿಕೊಳ್ಳುತ್ತಾಳಾ? ಅಬ್ಬಾ ಈ ತರ ಮಲಗೋದು ಎಷ್ಟ್ ಮಜಾ ಅಲ್ವಾ, ಆಹಾ ನಿದ್ದೆ! ಅಂತ ಖುಷಿ ಪಡೋದಲ್ಲ ನೀವು, ಹೊತ್ತು ಗೊತ್ತು ಇಲ್ಲದೇ ನಿದ್ದೆ ಮಾಡೋದು  ತಪ್ಪು ಅನ್ನುತ್ತೆ ಆಯುರ್ವೇದ. ಸಾಮಾನ್ಯವಾಗಿ ಹಲವರು ಮಧ್ಯಾಹ್ನದ ಹೊತ್ತಲ್ಲಿ  ಗಡದ್ದಾಗಿ ನಿದ್ದೆ ಹೊಡಿಯುತ್ತಾರೆ. ಅದು ಕೂಡ ಆಯುರ್ವೇದದಲ್ಲಿ ನಿಷಿದ್ಧ ಅಂತಿದೆ. ಹಾಗಂತ ನೀವು ಕೂತು ಮಲಗಬಹುದಂತೆ ! ಆದ್ರೆ ಇದಕ್ಕೂ ಒಂದಷ್ಟು ನಿಯಮ ಫಾಲೋ ಮಾಡಿದ್ರೆ  ಬೆಸ್ಟ್. ಮಲಗೋಕೂ ಇದೆ ರೂಲ್ಸು, […]