ಉಡುಪಿ‌ XPRESS.COM ಉಡುಪಿ ಪರ್ಯಾಯ ವಿಶೇಷ ಸಂಚಿಕೆ “ಪರ್ಯಾಯ ಚರಿತೆ”ಬಿಡುಗಡೆ

ಉಡುಪಿ: ಉಡುಪಿ‌ xpress.com ಡಿಜಿಟೆಲ್ ಸುದ್ದಿ ಮಾಧ್ಯಮ, ಉಡುಪಿಯ ಶೀರೂರು ಪರ್ಯಾಯ ಮಹೋತ್ಸವದ ಕುರಿತು ಸಿದ್ಧಪಡಿಸಿದ ವಿಶೇಷ ಸಂಚಿಕೆ “ಪರ್ಯಾಯ ಚರಿತೆ” ಯನ್ನು ಶೀರೂರು ಮಠದ ಪರ್ಯಾಯ ಪೀಠವೇರಲಿರುವ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಶನಿವಾರ ಶೀರೂರು ಮಠದಲ್ಲಿ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ Xprss.Com ಸಂಪಾದಕರಾದ ಪ್ರಸಾದ್ ಶೆಣೈ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಸ್ವರೂಪ್ ಶ್ರೀಯನ್, ಅಶೋಕ್ ಆಚಾರ್ಯ ಕೊಂಡಾಡಿ ಉಪಸ್ಥಿತರಿದ್ದರು. ಸಂಚಿಕೆಯ ಕುರಿತ ವಿಡಿಯೋ ನೋಡಲು ಈ ಕೆಳಗಿನ ಫೇಸ್ಬುಕ್ ಲಿಂಕ್ […]

ರೈಲು ಸಾರಿಗೆಗೆ ಟ್ವಿಸ್ಟ್ ಕೊಡಲಿದೆ ಈ ಹೈಡ್ರೋಜನ್ ಚಾಲಿತ ರೈಲು:ಶೀಘ್ರದಲ್ಲಿ ಭಾರತದಲ್ಲಿ ಸಂಚಾರ ಶುರು ಮಾಡೋ ಈ ರೈಲಲ್ಲಿ ಏನೇನಿದೆ?

ರೈಲು ತಂತ್ರಜ್ಞಾನದಲ್ಲಿ ಭಾರತ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ವಿಶ್ವದ ಅಗ್ರಗಣ್ಯ ರೈಲು ರಾಷ್ಟ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ದೇಶದ ಮೊದಲ ಹಾಗೂ ವಿಶ್ವದ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ. ಶಬ್ದ ಮತ್ತು ಮಾಲಿನ್ಯವಿಲ್ಲದ ಈ ರೈಲು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. ಈ ಹೈಡ್ರೋಜನ್ ರೈಲು ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ಪ್ರಥಮವಾಗಿ ಸಂಚರಿಸಲಿದೆ. ಗಂಟೆಗೆ 110 ರಿಂದ 140 ಕಿಲೋಮೀಟರ್ ವೇಗದಲ್ಲಿ […]

ನೋಡಿದ  ಕ್ಷಣಗಳನ್ನು ನೆನಪಿಟ್ಟುಕೊಳ್ಳುತ್ತೆ ಈ ಅಚ್ಚರಿಯ ಕನ್ನಡಕ :AI ಕನ್ನಡಕದ ಮಹಿಮೆ ಕೇಳಿ!

ಮನುಷ್ಯನು ಕಣ್ಣಾರೆ ಕಂಡದ್ದನ್ನೇ ಕೆಲವೊಮ್ಮೆ ಮರೆತುಬಿಡುತ್ತಾನೆ. ಆದರೆ ಇನ್ನು ಮುಂದೆ ಅಂತಹ ಮರೆವಿನ ಸಮಸ್ಯೆಗೆ ಪರಿಹಾರ ಸಿಗುವ ದಿನಗಳು ದೂರವಿಲ್ಲ. ಅಮೆರಿಕದ ವಿಜ್ಞಾನಿಗಳು ನೋಡಿದ ಪ್ರತಿಯೊಂದು ಕ್ಷಣವನ್ನೂ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ವಿಶಿಷ್ಟ ಸ್ಮಾರ್ಟ್ ಕನ್ನಡಕವನ್ನು ಅಭಿವೃದ್ಧಿಪಡಿಸಿದ್ದಾರೆ. ವಾಷಿಂಗ್ಟನ್‌ನ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಹೊಸ ತಂತ್ರಜ್ಞಾನ ಆಧಾರಿತ ಕನ್ನಡಕಕ್ಕೆ ‘ಪಿಕ್ಸ್’ಎಂಬ ಹೆಸರನ್ನು ನೀಡಿದ್ದಾರೆ. ಈ ಕನ್ನಡಕವನ್ನು ಧರಿಸಿದ ವ್ಯಕ್ತಿ ನೋಡಿದ ಮುಖಗಳು, ಸ್ಥಳಗಳು ಹಾಗೂ ವಸ್ತುಗಳನ್ನು ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ (ಎಐ) […]

ಈ ವರ್ಷ ಮನೆಯಲ್ಲೇ ಕೂತು ಜನರು ಚಪ್ಪರಿಸಿದ ಖಾದ್ಯಗಳಿವು , 3.25 ಮಿಲಿಯನ್ ಬಿರಿಯಾನಿ ಆರ್ಡರ್, ಬರ್ಗರ್ ಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್

2025 ಮುಗಿಯುತ್ತ ಬಂದಿದೆ. ಈ ವರ್ಷದಲ್ಲಿ ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಿದೆ. ಈ ವರ್ಷದ ಮನೆಗೆ ಡೆಲಿವರಿ ಮಾಡಿಕೊಂಡು ತರಿಸಿದ ತಿಂಡಿಗಳ ಪೈಕಿ ಬಿರಿಯಾನಿಯೇ ಫಸ್ಟ್ ಪ್ಲೇಸ್ ಪಡೆದುಕೊಂಡಿದೆ. ಹೌದು. ದೇಶದ ಪ್ರಮುಖ ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ದಶಕದಿಂದಲೂ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದು, 2025 ರಲ್ಲಿ 93 ಮಿಲಿಯನ್ ಯೂನಿಟ್‌ ಬಿರಿಯಾನಿ ಆರ್ಡರ್‌ಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಸತತ 10ನೇ ವರ್ಷವೂ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಪ್ರಥಮ ಸ್ಥಾನ […]

ನಮ್ಮ ಈ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಟ್ಟರೆ  ಹೃದಯವನ್ನು ಸೇಫಾಗಿಡಬಹುದು!

ನಾವು ತಿನ್ನುವ ಆಹಾರ ಮತ್ತು ನಮ್ಮ ಮನಸ್ಸಿನ ಒತ್ತಡದ ಮಟ್ಟ ಹೃದಯದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ದಿನನಿತ್ಯ ಉತ್ತಮ ಅಭ್ಯಾಸಗಳನ್ನು ಅನುಸರಿಸಿದರೆ ಹೃದಯ ಬಲವಾಗಿರುತ್ತದೆ. ಹೃದ್ರೋಗ ತಜ್ಞರಾದ ಡಾ. ಜೆರೆಮಿ ಲಂಡನ್ ಅವರು ಕೆಲ ತಪ್ಪು ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವು ನಮ್ಮ ಆರೋಗ್ಯವನ್ನು ನಿಧಾನವಾಗಿ ಹಾನಿಗೊಳಿಸುತ್ತವೆ. ಅವನ್ನು ಬಿಟ್ಟುಬಿಟ್ಟರೆ ಹೃದಯವನ್ನು ರಕ್ಷಿಸಬಹುದು. 1. ಧೂಮಪಾನ ಮತ್ತು ಇ-ಸಿಗರೇಟ್ ಅನ್ನು ತ್ಯಜಿಸಿ ಧೂಮಪಾನ ಮಾಡುವವರಲ್ಲಿ ಹೃದಯರೋಗದ ಅಪಾಯ ಹೆಚ್ಚು. ತಂಬಾಕಿನಲ್ಲಿರುವ ರಾಸಾಯನಿಕಗಳು ರಕ್ತನಾಳಗಳಲ್ಲಿ […]