ಉಡುಪಿ ಜಿಲ್ಲೆಯಲ್ಲೂ ಪ್ಲಾಸ್ಟಿಕ್ ಫ್ಲೆಕ್ಸ್, ನಿಷೇಧಕ್ಕೆ ಹೆಚ್ಚಿತು ಒತ್ತಡ, ಕಾರ್ಕಳ, ಕುಂದಾಪುರದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳಿಗೆ ಲೆಕ್ಕವೇ ಇಲ್ಲ, ಪರಿಸರ ಸ್ನೇಹಿ ಬಟ್ಟೆ ಫ್ಲೆಕ್ಸ್ ಗಳಿಗೆ ಸಾರ್ವಜನಿಕರ ತಾಕೀತು

ಮಂಗಳೂರು ಮಹಾನಗರಪಾಲಿಕೆ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ನಿಷೇಧಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬೆನ್ನಲ್ಲಿಯೇ ಉಡುಪಿ ಜಿಲ್ಲೆಯಲ್ಲೂ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ನಿಷೇಧಿಸಬೇಕು ಎನ್ನುವ ಕೂಗು ಬಲವಾಗಿ ಎದ್ದಿದೆ. ಲೋಡುಗಟ್ಟಲೇ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ವಿಲೇವಾರಿಮಾಡದೇ ಅಲ್ಲಲ್ಲಿ ಎಸೆಯುವ ದೃಶ್ಯಗಳು ಕಾರ್ಕಳ, ಉಡುಪಿ, ಕುಂದಾಪುರ ಭಾಗಗಳಲ್ಲಿ ಅತೀಯಾಗಿ ಕಂಡುಬಂದಿರುವ ಕುರಿತು ಸಾರ್ವಜನಿಕ ದೂರುಗಳು ದಾಖಲಾಗಿದೆ. ಅಲ್ಲದೇ ಈ ಪ್ಲಾಸ್ಟಿಕ್ ಫ್ಲೆಕ್ಸ್ ಗಳೆ ಮಣ್ಣನ್ನು ಸೇರಿ, ನೀರನ್ನು ಸೇರಿ ಪರಿಸರವನ್ನು ಹಾನಿಗೊಳಿಸುದಷ್ಟೇ ಅಲ್ಲದೇ ಬರೋಬ್ಬರಿ 400 ವರ್ಷ […]
ಈ ವೀಕೆಂಡ್ ನಲ್ಲಿ ನಿಮಗೆ ಅದ್ಬುತ ಮನರಂಜನೆ ಕೊಡಲು ಒಟಿಟಿಗೆ ಬಂದಿವೆ ಕನ್ನಡದ ಈ ಮೂರು ಸಿನಿಮಾಗಳು:

ಕನ್ನಡದಲ್ಲಿ ಕೆಲವೊಮ್ಮೆ ಒಳ್ಳೆಯ ಸಿನಿಮಾಗಳು ಬಂದರೂ ಸರಿಯಾದ ಥಿಯೇಟರ್ ಮತ್ತು ಪ್ರೇಕ್ಷಕರು ಸಿಗದೇ ಸೋಲುತ್ತದೆ. ಆದರೆ ಓಟಿಟಿಯಲ್ಲಿ ರಿಲೀಸ್ ಆದ ಮೇಲೆ ಪ್ರೇಕ್ಷಕರು ಅಂತಹ ಸಿನಿಮಾಗಳನ್ನು ಹೊಗಳುವ ಸನ್ನಿವೇಶ ಕೂಡ ಇದೆ. ಅಂತದ್ದೇ ಒಳ್ಳೆಯ ಕನ್ನಡ ಸಿನಿಮಾಗಳು ಒಟಿಟಿಗೆ ಬಂದಿವೆ. ಒಟ್ಟು ಮೂರು ಹೀರೋಗಳನ್ನ ಒಳಗೊಂಡಿರುವ ಒಂದೊಳ್ಳೆ ಕತೆಯ ಹೂರಣ ಹೊಂದಿರುವ ಫಾರೆಸ್ಟ್ ಸಿನಿಮಾ ಇದೀಗ ಒಟಿಟಿಗೆ ಬಂದಿದ್ದುಚಿಕ್ಕಣ್ಣ ಈ ಸಿನಿಮಾದಲ್ಲಿ ಹೀರೋ ಆಗಿದ್ದಾರೆಫಸ್ಟ್ Rank ರಾಜು ಖ್ಯಾತಿಯ ಗುರುನಂದನ್ ಈ ಚಿತ್ರದಲ್ಲೂ ಹೀರೋ ಆಗಿದ್ದಾರೆ. ಅಂದ […]
ಈ ಸಿಹಿತಿಂಡಿಯ ಬೆಲೆ ಬರೋಬ್ಬರಿ 50,000 ರೂಪಾಯಿ, ಅಂತದ್ದೇನಿದೆಯಪ್ಪಾ ಇದ್ರಲ್ಲಿ ಅಂತೀರಾ?

ಉತ್ತರ ಭಾರತದ ಕಡೆ ಹೋಳಿ ಹಬ್ಬಕ್ಕೇ ತುಸು ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಅದರಲ್ಲೂ ಈ ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗೆ ಇರುವಷ್ಟು ಬೇಡಿಕೆ ಬೇರೆ ಯಾವುದಕ್ಕೂ ಇಲ್ಲ. ಇದೀಗ ಉತ್ತರಪ್ರದೇಶದ ಗುಜಿಯಾ ಎಂದು ಕರೆಯಲಾಗುವ ಒಂದು ಬಗೆಯ ಫೇಮಸ್ ಸಿಹಿತಿಂಡಿ ಬೆಲೆಯ ಕಾರಣಕ್ಕೆ ಭಾರೀ ಸುದ್ದಿಯಲ್ಲಿದೆ. ಅಂದ ಹಾಗೆ ಈ ಸಿಹಿತಿಂಡಿಯ ರೇಟು ಬರೋಬ್ಬರಿ ಪ್ರತಿ ಕಿಲೋಗೆ 50,000 ರೂಪಾಯಿ. ಹೌದು ಅಂದರೆ ಒಂದು ಪೀಸ್ ನ ಬೆಲೆ 1,300, ಅಂತದ್ದೇನಿದೆಯಪ್ಪಾ ಈ ಸಿಹಿತಿಂಡಿಯಲ್ಲಿಎಂದು ನೀವು ಕೇಳಬಹುದು. ಉತ್ತರ […]
ಬದಲಾಗುತ್ತಿದೆ ಕಾಲ: ಮಾಧ್ಯಮದಲ್ಲಿ ಹೊಸ ಕ್ರಾಂತಿಗೆ ಇದು ಸಕಾಲ: ಕುದ್ಯಾಡಿ ಸಂದೇಶ್ ಸಾಲ್ಯಾನ್ ಬರಹ

ಪತ್ರಿಕೆಗೆ ಕಳುಹಿಸಿದ ವರದಿಯೊಂದು ಪ್ರಕಟವಾಗಿದೆಯೇ ಎಂದು ಆ ಪತ್ರಿಕೆಯ ವರದಿಗಾರರನ್ನು ಕೇಳಿದರೆ ಅವರಿಗೆ ಸಂತೋಷವೇನೂ ಆಗಲಿಕ್ಕಿಲ್ಲ. “ಬಂದಿರಬಹುದು, ನೋಡಿ” ಎನ್ನಬಹುದು ಅವರು. ಏಕೆಂದರೆ ತಮ್ಮ ಪತ್ರಿಕೆಯನ್ನು ಎಲ್ಲರೂ ಖರೀದಿಸಿ ಓದುತ್ತಾರೆ ಅಥವಾ ಓದಲಿ ಎಂಬ ನಿರೀಕ್ಷೆಯಲ್ಲಿ ಅವರಿರುತ್ತಾರೆ. ಬೇಕಾದರೆ ಕೊಂಡುಕೊಂಡು ಓದಲಿ ಎನ್ನುವುದು ಪತ್ರಿಕಾ ಕಚೇರಿಯ ಧೋರಣೆ. ಏಕೆಂದರೆ ಪತ್ರಿಕೆ ಇರುವುದು ಖರೀದಿಸಿ ಓದುವುದಕ್ಕಾಗಿಯೇ! ಉತ್ಪಾದನಾ ವೆಚ್ಚಕ್ಕಿಂತ ಹಲವು ಪಟ್ಟು ಕಡಿಮೆ ದರಕ್ಕೆ ಸಿಗುವ ಉತ್ಪನ್ನವೊಂದಿದ್ದರೆ ಅದು ಪತ್ರಿಕೆ. ಬಂದಿರಬಹುದು ನೋಡಿ ಎಂದರೆ ಖರೀದಿಸಿ ನೋಡಿ ಎಂದರ್ಥ. […]
ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗೆ ಮತ್ತೆ ಗಡುವು ವಿಸ್ತರಣೆ ಮಾ. 31 ಕೊನೆಯ ದಿನ

ಬೆಂಗಳೂರು, ಫೆಬ್ರವರಿ 24: ಸತತವಾಗಿ ಮತ್ತೆ ಮತ್ತೆ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಗೆ ಗಡುವು ಮತ್ತೆ ಮತ್ತೆ ವಿಸ್ತರಣೆಯಾಗುತ್ತಲೇ ಇದೆ. ಇದೀಗ ಮತ್ತೆ ವಿಸ್ತರಣೆಯಾಗಿದ್ದು ಮಾ.31 ಕೊನೆಯ ದಿನವಾಗಿದೆ.ಈ ಕುರಿತು ರಾಜ್ಯ ಸರಕಾರ ಘೋಷಿಸಿದೆ. ಈವರೆಗೆ 6 ಬಾರಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆಯಾಗಿದೆ. ಜನವರಿ 31ರವರೆಗೆ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಇದೀಗ ಸಾರಿಗೆ ಇಲಾಖೆ ಮತ್ತೆ ಮಾರ್ಚ್ 31ರವರೆಗೆ ಗಡುವು ವಿಸ್ತರಿಸಿದೆ. ಕರ್ನಾಟಕದಲ್ಲಿ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳಿವೆ. […]