ತೆಂಕುಪೇಟೆ: ಶಾರದಾ ಮಾತೆಯ ಮೂರ್ತಿ ವಿಸರ್ಜನೆ

ತೆಂಕುಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ದೇವಿಗೆ ವಿಸರ್ಜನಾ ಪೂಜೆಯನ್ನು ದೇವಳದ ಅರ್ಚಕರಾದ ದಯಾಘನ್ ಭಟ್ ನೆರವೇರಿಸಿದರು. ನರಸಿಂಹ ಕಿಣಿ ಬಳಗದವರಿಂದ ಭಜನೆ ಸೇವೆ ನಡೆಯಿತು. ಬಳಿಕ ತೆಪ್ಪೋತ್ಸವ ನೆಡೆಸಿ ಮಂಗಳಾ ವಾದ್ಯ ವೇದ ಘೋಶದೊಂದಿಗೆ ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ಮುರಳೀಧರ್ ಭಟ್ , ಮಟ್ಟಾರ್ ಗಣೇಶ ಕಿಣಿ , ನರಹರಿ ಪೈ, ವಿಶಾಲ್ ಶೆಣೈ, ,ಶಾಮ್ ಪ್ರಸಾದ್ […]

ತೆಂಕುಪೇಟೆ ನೂತನ ಸುಬ್ರಹ್ಮಣ್ಯ ಮಠದ ನಿರ್ಮಾಣಕ್ಕೆ ಶಂಕುಸ್ಥಾಪನೆ

ಉಡುಪಿ: ಇಲ್ಲಿನ ತೆಂಕುಪೇಟೆಯಲ್ಲಿರುವ ಸುಬ್ರಹ್ಮಣ್ಯ ಮಠದ ನಿವೇಶನದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನೂತನ ಸುಬ್ರಹ್ಮಣ್ಯ ಮಠದ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ರತ್ನಕುಮಾರ್, ಡಾ.ವ್ಯಾಸರಾಜ ತಂತ್ರಿ, ಮಟ್ಟು ಲಕ್ಷ್ಮೀನಾರಾಯಣ ರಾವ್, ವಿಶ್ವನಾಥ ಭಟ್ ಕೊಡವೂರು, ಶ್ರೀಧರ ಭಟ್, ಶಾಂತ ಎಲೆಕ್ಟ್ರಿಕಲ್ಸಿನ ಶ್ರೀಪತಿ ಭಟ್, ಏಸ್ ಕನ್ಸಲ್ಟೆಂಟಿನ ರಾಜೇಂದ್ರ ಮಯ್ಯ, ಶ್ರೀವತ್ಸ ಆಚಾರ್ಯ, ವಿಷ್ಣು ಪಾಡಿಗಾರ್, ಸುಬ್ರಹ್ಮಣ್ಯ ಸಾಮಗ, ಮಧುಕರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.