ತೆಂಕುಪೇಟೆ: ಶಾರದಾ ಮಾತೆಯ ಮೂರ್ತಿ ವಿಸರ್ಜನೆ

ತೆಂಕುಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ದೇವಿಗೆ ವಿಸರ್ಜನಾ ಪೂಜೆಯನ್ನು ದೇವಳದ ಅರ್ಚಕರಾದ ದಯಾಘನ್ ಭಟ್ ನೆರವೇರಿಸಿದರು. ನರಸಿಂಹ ಕಿಣಿ ಬಳಗದವರಿಂದ ಭಜನೆ ಸೇವೆ ನಡೆಯಿತು. ಬಳಿಕ ತೆಪ್ಪೋತ್ಸವ ನೆಡೆಸಿ ಮಂಗಳಾ ವಾದ್ಯ ವೇದ ಘೋಶದೊಂದಿಗೆ ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ಮುರಳೀಧರ್ ಭಟ್ , ಮಟ್ಟಾರ್ ಗಣೇಶ ಕಿಣಿ , ನರಹರಿ ಪೈ, ವಿಶಾಲ್ ಶೆಣೈ, ,ಶಾಮ್ ಪ್ರಸಾದ್ ಕುಡ್ವಾ , ಪ್ರದೀಪ್ ರಾವ್ , ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.