ಕೃಷ್ಣಮಠಕ್ಕೆ ಸ್ವರ್ಣ ಗೋಪುರ ಸಮರ್ಪಣೆ ಜೂ. 1ರಂದು ಭವ್ಯ ಮೆರವಣಿಗೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಸ್ವರ್ಣಕವಚ ಹೊದಿಸಿಸಮರ್ಪಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೂನ್‌ 1ರಂದು ನಗರದ ಜೋಡುಕಟ್ಟೆಯಿಂದಶ್ರೀಕೃಷ್ಣ ಮಠದವರೆಗೆ ಬಹೃತ್‌ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.ಅಂದು ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯ ಪ್ರಮುಖಆಕರ್ಷಣೆಯಾಗಿ ಶ್ರೀಕೃಷ್ಣಮಠದ ಸೇವಾರ್ಥಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ೧೦೦೮ರಜತಕಲಶಗಳನ್ನು ಆಕರ್ಷಕವಾಗಿ ಜೋಡಿಸಿಟ್ಟು, ಮೆರವಣಿಗೆ ನಡೆಸಲಾಗುವುದು. ಅಲ್ಲದೆ,ಸ್ಟಾರ್‌ಪ್ಲಸ್‌ ವಾಹಿನಿಯಲ್ಲಿ ಪ್ರಸಾರವಾಗುವ ಮಹಾಭಾರತ ಧಾರವಾಹಿಯ ಕೃಷ್ಣಾರ್ಜುನರಪಾತ್ರಧಾರಿಗಳಾದ ಸೌರಭ್‌ ಜೈನ್‌ ಮತ್ತು ಶಾಹಿರ್‌ ಶೇಖ್‌ ಭಾಗಹಿಸಲಿದ್ದು, ಚಾರಿತ್ರಿಕಪೋಷಾಕಿನಲ್ಲಿ ಕಾಣಿಸಿಕೊಳ್ಳುವ ಅವರು ಮೆರವಣಿಗೆಯ ವೈಭವಕ್ಕೆ ಮತ್ತಷ್ಟು ಮೆರಗುನೀಡಲಿದ್ದಾರೆ.೧೫೦ ಭಜನಾ […]