ಹೊಂಬಾಳೆ ಫಿಲಮ್ಸ್ ನಿರ್ಮಾಣಗಳ ಪೈಕಿ ಅತಿ ಹೆಚ್ಚು ಜನ ವೀಕ್ಷಿಸಿದ ಚಿತ್ರ ಕಾಂತಾರ: ಕೆ.ಜಿ.ಎಫ್ ದಾಖಲೆ ಧೂಳೀಪಟ!!

ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕ.. ಈ ರೀತಿಯಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮಧ್ಯೆ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದೆ. ತಮಿಳು ಚಿತ್ರರಂಗದ ದಿಗ್ಗಜ ತಲೈವಾ ರಜನಿಕಾಂತ್ ಕೂಡಾ ಕಾಂತಾರ ಕಂಡು ತಮ್ಮ ಮೆಚ್ಚುಗೆ […]

ಕೆಜಿಎಫ್ ಬ್ಯಾನರ್, ಲೂಸಿಯಾ ಡೈರೆಕ್ಟರ್ ಜೊತೆಗೂಡಿದ ಫಹಾದ್ ಫಾಸಿಲ್: ಅ.9 ರಂದು ಸೆಟ್ಟೇರಲಿದೆ ‘ಧೂಮಮ್’

ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ನಂತರ, ಫಹದ್ ಫಾಸಿಲ್ ನಾಯಕರಾಗಿ ‘ಧೂಮಮ್’ ಎಂಬ ಹೊಸ ಚಲನಚಿತ್ರವನ್ನು ನಿರ್ಮಿಸುವ ಬಗ್ಗೆ ಹೊಂಬಾಳೆ ಫಿಲಂಸ್ ಟ್ವಿಟರ್ ನಲ್ಲಿ ಘೋಷಿಸಿದೆ. ಹೊಂಬಾಳೆ ಫಿಲಂಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೂಮಮ್ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರವನ್ನು ಈ ಹಿಂದೆ ಲೂಸಿಯಾ ಮತ್ತು ಯು-ಟರ್ನ್ ಚಿತ್ರಗಳನ್ನು ಬರೆದು, ನಿರ್ದೇಶಿಸಿದ್ದ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಧೂಮಮ್ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದಾರೆ. […]

ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ ಪ್ರಭಾಸ್ ನಟನೆಯ ಸಲಾರ್: ಕೆ.ಜಿ.ಎಫ್ ಕಮಾಲ್ ಗೆ ಮನಸೋತ ಜನ ಸಲಾರ್ ಗೂ ಜೈ ಎನ್ನುವರೆ?

ಭಾರತೀಯ ಚಿತ್ರರಂಗದ ಬಾಹುಬಲಿ, ದಕ್ಷಿಣದ ಖ್ಯಾತ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಸೆಪ್ಟೆಂಬರ್ 28 ರಂದು ತೆರೆಗಪ್ಪಳಿಸಲಿದೆ. ಕೆ.ಜಿ.ಎಫ್ ಖ್ಯಾತಿಯ ಪ್ರಖ್ಯಾತ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ, ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಬತ್ತಳಿಕೆಯಿಂದ ಹೊರಟಿರುವ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಮತ್ತು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೆ.ಜಿ.ಎಫ್ ಕಮಾಲಿಗೆ ಮನಸೋತು ಕ್ರೇಜ್ ಹುಟ್ಟಿಸಿಕೊಂಡ ಸಿನಿಪ್ರಿಯರು ಸಲಾರ್ ಗೂ ಸೋಲುವರೆ? ಸಿನಿಮಾ ಗೆಲ್ಲಿಸುವರೆ ಎನ್ನುವುದನ್ನು ಕಾಲವೆ […]

ಪುಷ್ಪಾ ತಂಡವನ್ನು ಟ್ರೋಲ್ ಮಾಡಿದ ರಾಕಿ ಭಾಯ್ ಅಭಿಮಾನಿಗಳು: ಕೆ.ಜಿ.ಎಫ್ ಅಭಿಮಾನಿಗಳಿಂದ ಪುಷ್ಪಾಗೆ ಟಾಂಗ್!

ದೇಶಾದ್ಯಂತ ಧೂಳೆಬ್ಬಿಸಿದ ಎರಡು ಮಾಸ್ ಸಿನಿಮಾಗಳು ಎದುರು ಬದುರಾಗಿ ನಿಂತಿವೆ. ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ನಟ ಫಹಾದ್ ಫಾಸಿಲ್ ಅವರು ಭವಿಷ್ಯದಲ್ಲಿ `ಪುಷ್ಪ 3` ತೆರೆಮೇಲೆ ಮೂಡಿ ಬರುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದ್ದರು. ಒಂದನೇ ಭಾಗದಲ್ಲಿ ಫಹಾದ್ ಭಾಗವಿದ್ದ ಪೊಲೀಸ್ ಸ್ಟೇಷನ್ ದೃಶ್ಯಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದ ಬಳಿಕ ನಿರ್ಮಾಪಕರು ಪುಷ್ಪಾ-2 ಅನ್ನು ತೆರೆಗೆ ತರುವ ನಿರ್ಧಾರ ಮಾಡಿದ್ದರು. ಇದೀಗ ನಿರ್ಮಾಪಕರು ಚಿತ್ರವನ್ನು ಮೂರು […]

ಬಿಹಾರದ ಜಮುಯಿಯಲ್ಲಿ 230 ಮಿಲಿಯನ್ ಟನ್ ಚಿನ್ನದ ನಿಕ್ಷೇಪ? ಇರುವೆಗಳಿಂದ ಬಯಲಾಯಿತು ಚಿನ್ನದ ರಹಸ್ಯ!!

ಬಿಹಾರ: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸುಮಾರು 230 ಮಿಲಿಯನ್ ಟನ್ ಚಿನ್ನ ಇರುವ ಬಗ್ಗೆ ಸಮೀಕ್ಷೆಯನ್ನು ಹೊಂದಿದೆ. ಚಿನ್ನದ ಜೊತೆಗೆ ಸುಮಾರು 37.6 ಟನ್ ಖನಿಜ ಅದಿರು ಕೂಡ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲೆಯಲ್ಲಿ ಚಿನ್ನದ ಹುಡುಕಾಟ ನಡೆಸಲು ನಿತೀಶ್ ಕುಮಾರ್ ಸರ್ಕಾರ ಇತ್ತೀಚೆಗೆ ನಿರ್ಧರಿಸಿದ್ದು, ಈ ಕುರಿತು ಕೇಂದ್ರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ದೇಶದ ಶೇ.44ರಷ್ಟು ಚಿನ್ನದ ನಿಕ್ಷೇಪ ಈ ಪ್ರದೇಶವೊದರಲ್ಲೆ ಇದೆ ಎಂದು […]