ಕರಾವಳಿಯಿಂದ ಕ್ಯಾಲಿಫೋರ್ನಿಯಾದವರೆಗೆ ಕಾಂತಾರ ಕಂಪು: ಸೀಮೆಸುಣ್ಣ ಕಲೆಯಲ್ಲಿ ಮೂಡಿಬಂತು ಪಂಜುರ್ಲಿ ದೈವ

ಕರಾವಳಿಯ ದೈವಾರಾಧನೆಯ ಕಂಪು ದೂರದ ಕ್ಯಾಲಿಫೋರ್ನಿಯಾದಲ್ಲೂ ಪಸರಿಸಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ಸೀಮೆಸುಣ್ಣ(ಚಾಕ್)ದಲ್ಲಿ ಕಾಂತಾರಾ ಪಂಜುರ್ಲಿ ದೈವದ ಚಿತ್ರವು ಕಲಾವಿದೆಯ ಕೈಚಳಕದಲ್ಲಿ ಮೂಡಿಬಂದಿದೆ. ಈ ಪ್ರತಿಭಾವಂತ ಕಲಾವಿದೆಯ ಹೆಸರು ಶಿಲ್ಪಾ ಎಂದಾಗಿದ್ದು, ಅಮೇರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿ ವಾಸಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರದೀಪ್ ಗೌಡ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಯುಕೆಯ ಕೇಂಬ್ರಿಡ್ಜ್ ನಲ್ಲೂ ಕಾಂತಾರ ಕಲರವ: ಕನ್ನಡಿಗರ ತಂಡದಿಂದ ಕಾಂತಾರ ವೀಕ್ಷಣೆ

ಕೇಂಬ್ರಿಡ್ಜ್: ಯುನೈಟೆಡ್ ಕಿಂಗ್ಡಮ್ ನ ಕೇಂಬ್ರಿಡ್ಜಿನ ವ್ಯೂ ಸಿನಿಮಾ ಹಾಲ್ ನಲ್ಲಿ ಮಂಗಳವಾರ ರಾತ್ರಿಯಂದು 50 ಜನರ ಕನ್ನಡಿಗರ ತಂಡವು ಕಾಂತಾರ ಸಿನಿಮಾವನ್ನು ವೀಕ್ಷಿಸಿ ಆನಂದಿಸಿದೆ. ಯುಕೆ ನ ಕೇಂಬ್ರಿಡ್ಜ್ ನಲ್ಲಿ ನೆಲೆಸಿರುವ ಕನ್ನಡಿಗರ ತಂಡವು ಖಾಸಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಿದ್ದು, ನೆಲ-ಜಲದಿಂದ ದೂರವಿದ್ದರೂ ಬೇರುಗಳನ್ನು ಭದ್ರವಾಗಿ ಹಿಡಿದಿಟ್ಟಿದ್ದರ ಕುರುಹಾಗಿ ಕಾಂತಾರ ಚಿತ್ರ ನೋಡಿ ಸಂಭ್ರಮಿಸಿದ್ದಾರೆ. ಗುರುವಾರದಂದು ಮಗದೊಂದು ಪ್ರದರ್ಶನವನ್ನು ಏರ್ಪಾಡು ಮಾಡಿದ್ದು, ತಂಡವು ಕಾಂತಾರ ಗುಂಗಿನಿಂದ ಹೊರಬಂದಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೃಪೆ: ನವೀನ್ ಕ್ಯಾಸ್ಟಲೀನೊ
ಕಾಂತಾರ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡವುದು ಸಾಧ್ಯವಿಲ್ಲ: ರಿಷಭ್ ಶೆಟ್ಟಿ

ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಿರುವ ಕಾಂತಾರ ಚಿತ್ರವು ಚಿತ್ರರಂಗದ ಎಲ್ಲ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಕಾಂತಾರದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಇದು ತಾನಾಗಿಯೆ ಸಂಭವಿಸಿತು. ಸಿನಿಮಾಗೆ ಒಂದು ನಿರ್ದಿಷ್ಟ ಶಕ್ತಿಯಿದೆ ಮತ್ತು ಚಿತ್ರದಲ್ಲಿ ನಮ್ಮ ಸಂಸ್ಕೃತಿ ಮತ್ತು ಜನಪದದ ಬಗ್ಗೆ ಮಾತನಾಡಿದ್ದೇವೆ. ಹಾಗಾಗಿ, ದೇವರ ಆಶೀರ್ವಾದದಿಂದ ಚಿತ್ರವು ಪ್ಯಾನ್-ಇಂಡಿಯಾದಲ್ಲಿ ಬಿಡುಗಡೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಸಂಸ್ಕೃತಿ ಮತ್ತು ಜನಪದದ […]
ಶಕಲಕ ಬೂಮ್ ಬೂಮ್ ರಸಪ್ರಶ್ನೆ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಮಾನಸಿ ಸುಧೀರ್

ಉಡುಪಿ: ತುಳುನಾಡಿನ ಮೊಟ್ಟಮೊದಲ ತುಳು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶಕಲಕ ಬೂಮ್ ಬೂಮ್ ಪೋಸ್ಟರಿನಲ್ಲಿರುವ ವ್ಯಕ್ತಿಯನ್ನು ಗುರುತಿಸಿ ಬಹುಮಾನ ಗೆಲ್ಲಿ ಎನ್ನುವ ರಸಪ್ರಶ್ನೆಯನ್ನು ಆಯೋಜಿಸಲಾಗಿದ್ದು, ಇದಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿತ್ತು. ಭಾನುವಾರದಂದು ನರಸಿಂಗೆಯಲ್ಲಿ ಕಾಂತಾರಾ ಖ್ಯಾತಿಯ ಮಾನಸಿ ಸುಧೀರ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಸರಿ ಉತ್ತರ ನೀಡಿದ ವಿಜೇತರ ಹೆಸರನ್ನು ಬಹಿರಂಗಪಡಿಸಿದರು. ಚಿತ್ರದ ಪೋಸ್ಟರಿನಲ್ಲಿ ನಟ ಅರವಿಂದ ಬೋಳಾರ್ ಅವರು ಜೀನೀ ಪಾತ್ರದಲ್ಲಿದ್ದು, ಎರಡೂ ಸರಿ ಉತ್ತರ ನೀಡಿದವರಲ್ಲಿ ಪವನ್ ಮಡಿವಾಳ ಮತ್ತು ಒಂದು ಸರಿ […]
ಕಾಂತಾರ ವರಾಹರೂಪಂ ಹಾಡಿಗೆ ಕಂಟಕ: ಕೃತಿಚೌರ್ಯದ ಆಧಾರದ ಮೇಲೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ವಿಶ್ವದಾದ್ಯಂತ ಸಂಚಲನ ಮೂಡಿಸಿದ ಕಾಂತಾರ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ. ಬೆಳಗ್ಗಿನ ಸುಪ್ರಭಾತದಂತೆ ಕಾಂತಾರ ಚಿತ್ರದ ಪಂಜುರ್ಲಿ ದೈವದ ‘ವರಾಹ ರೂಪಂ’ ಹಾಡು ಮನಸೂರೆಗೊಳಿಸುವಂತಿದ್ದು, ನಿತ್ಯವೂ ಎಲ್ಲರ ಮನೆಯಲ್ಲೂ ಕೇಳಿಸುತ್ತಿದೆ. ಇದೀಗ ಚಿತ್ರತಂಡವು ಈ ಹಾಡನ್ನು ಬಳಸದಂತೆ ಕೇರಳದ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಕೇರಳ ಮೂಲದ ರಾಕ್ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಮ್ ಬ್ರಿಡ್ಜ್’ ಸಲ್ಲಿಸಿದ ಮೊಕದ್ದಮೆಯಲ್ಲಿ ಕೋಝಿಕ್ಕೋಡ್ನ ಪ್ರಧಾನ ಜಿಲ್ಲಾ ನ್ಯಾಯಾಲಯವು ಮಧ್ಯಂತರ ಆದೇಶವನ್ನು ನೀಡಿದೆ. ವರಾಹ ರೂಪಂ ಅನ್ನು ತೈಕ್ಕುಡಮ್ ಬ್ರಿಡ್ಜ್ ಬ್ಯಾಂಡ್ ನ […]