ಕರ್ನಾಟಕದಲ್ಲೇ ಮೊದಲ ಬಾರಿಗೆ ಅನ್ನನಾಳದ ರಂಧ್ರಕ್ಕೆ ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಪ್ರಕ್ರಿಯೆಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ ಚಿಕಿತ್ಸೆ ನಡೆಸಿದ ಕೆಎಂಸಿ ಆಸ್ಪತ್ರೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಮೊದಲ ಬಾರಿಗೆ ಅನ್ನನಾಳದ ರಂಧ್ರ ಕ್ಕೆ ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಪ್ರಕ್ರಿಯೆಗೆ ಅಪರೂಪದ ಹಾಗೂ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಂಡೋಸ್ಕೋಪಿ ಸ್ಪಾಂಜ್ (ಎಂಡೋವಾಕ್) ಚಿಕಿತ್ಸೆಯನ್ನು ನಡೆಸಿತು. ಶಸ್ತ್ರಚಿಕಿತ್ಸಾ ಅನಾಸ್ಟೊಮೊಸಿಸ್ ವಿಫಲವಾದಾಗ ಮತ್ತು ಶಸ್ತ್ರಚಿಕಿತ್ಸಾ ಸಂಪರ್ಕದಿಂದ ಮರುಸಂಪರ್ಕಿತ ದೇಹದ ಚಾನಲ್‌ನ ವಿಷಯಗಳು ಸೋರಿಕೆಯಾದಾಗ ಅನಾಸ್ಟೊಮೊಟಿಕ್ ಸೋರಿಕೆ ಸಂಭವಿಸುತ್ತದೆ. ಇದು ಕರುಳಿನ ಛೇದನದ ಶಸ್ತ್ರಚಿಕಿತ್ಸೆಯ ಅತ್ಯಂತ ಗಂಭೀರ ತೊಡಕುಗಳಲ್ಲಿ ಒಂದಾಗಿದೆ. 51 ವರ್ಷದ ವ್ಯಕ್ತಿಗೆ ಅನ್ನನಾಳದ […]

ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ವತಿಯಿಂದ ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಅಭಿಯಾನ

ಉಡುಪಿ: ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ಸಹಯೋಗದಲ್ಲಿ ರಾಷ್ಟ್ರೀಯ ಸಂಸ್ಥೆಯಾದ ಕ್ಯಾರಿಟಾಸ್ ಇಂಡಿಯಾ ಜೊತೆ ಕೈಜೋಡಿಸಿ ಕ್ಯಾನರ್ ಪೀಡಿತರಿಗಾಗಿ ಕೇಶ ದಾನ ಮಾಡುವ ಅಭಿಯಾನವನ್ನು ಹಮ್ಮಿಕೊಂಡಿದೆ. ದೇಶದಲ್ಲಿ ಹಲವಾರು ಕ್ಯಾನ್ಸರ್ ಪೀಡಿತ ರೋಗಿಗಳಿದ್ದು ಚಿಕಿತ್ಸೆಯ ಸಂದರ್ಭದಲ್ಲಿ ಇವರು ತಮ್ಮ ಕೇಶವನ್ನು ಕಳೆದುಕೊಂಡು ಮುಜುಗರ ಪಟ್ಟುಕೊಳ್ಳುತ್ತಾರೆ ಅಥವಾ ಖಿನ್ನತೆಗೆ ಜಾರುತ್ತಾರೆ. ಇಂತಹವರಿಗಾಗಿ ವಿಗ್ ಗಳನ್ನು ತಯಾರಿಸಲು ಕೂದಲಿನ ಅವಶ್ಯಕತೆ ಇರುತ್ತದೆ. ಕ್ಯಾನ್ಸರ್ ಪೀಡಿತರು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಕೇಶದಾನ ಮಾಡುವ ಇಚ್ಛೆ […]

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಮಕ್ಕಳ ಅಸ್ಥಿ ಮಜ್ಜೆ ಕಸಿಯ ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಅಂಕೋಲಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ ಸೌಲಭ್ಯದ ಯಶಸ್ಸನ್ನು ಆಚರಿಸುವ ಕಾರ್ಯಕ್ರಮವನ್ನು ಆಗಸ್ಟ್ 3 ರಂದು ನಗರದ ಓಶಿಯನ್ ಪರ್ಲ್ ಹೋಟೆಲಿನಲ್ಲಿ ಆಯೋಜಿಸಲಾಗಿತ್ತು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರತ್ ಕುಮಾರ್ ರಾವ್ ಮಕ್ಕಳ ಅಸ್ಥಿಮಜ್ಜೆ ಕಸಿ ಕ್ಲಿನಿಕ್ ನ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ ಅಸ್ಥಿಮಜ್ಜೆ ಕಸಿ ವಿವಿಧ ಬಗೆಯ […]

ಕ್ಯಾನ್ಸರ್ ಪೀಡಿತ ಮಕ್ಕಳ ಆಸೆ ಪೂರೈಸಿದ ಬೆಂಗಳೂರು ಆಗ್ನೇಯ ಪೊಲೀಸ್: ಖಾಕಿ ತೊಟ್ಟು ಡಿಸಿಪಿ ಆದ ಮಕ್ಕಳು

ಬೆಂಗಳೂರು: ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಶನಿವಾರ ಕೇರಳದ ಮೊಹಮ್ಮದ್ ಸಲ್ಮಾನ್ ಮತ್ತು ಬೆಂಗಳೂರಿನ ಮಿಥಿಲೇಶ್ ಎಂಬ ಇಬ್ಬರು ಬಾಲಕರನ್ನು ಕೆಲವು ಗಂಟೆಗಳ ಕಾಲ ಉಪ ಪೊಲೀಸ್ ಆಯುಕ್ತರನ್ನಾಗಿ (ಡಿಸಿಪಿ) ಮಾಡಲಾಯಿತು ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಇದು ಪೊಲೀಸ್ ಅಧಿಕಾರಿಗಳಾಗುವ ಅವರ ಆಸೆಯನ್ನು ಈಡೇರಿಸುವ ಸಣ್ಣ ಪ್ರಯತ್ನವಾಗಿತ್ತು. ಈ ಇಬ್ಬರು ಹುಡುಗರು ಕ್ಯಾನ್ಸರ್‌ ರೋಗಿಗಳಾಗಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಮಕ್ಕಳ ಬದುಕಿನ ಬಗ್ಗೆ ಏನೂ ಹೇಳಲಾಗದಿದ್ದರೂ ಭವಿಷ್ಯದಲ್ಲಿ ಪೊಲೀಸರಾಗುವ ಅವರ ಕನಸನ್ನು ಕೆಲವೆ ಗಂಟೆಗಳ […]

ಮಾಹೆಯ ಸಂಶೋಧಕರಿಂದ ಮೈಕ್ರೋಫ್ಲೂಯಿಡಿಕ್ ಕ್ಯಾನ್ಸರ್-ಆನ್-ಚಿಪ್ ತಂತ್ರಜ್ಞಾನ ಅಭಿವೃದ್ಧಿ

ಮಣಿಪಾಲ: ಮಾಹೆಯ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ ನ ಸಹಾಯಕ ಪ್ರಾಧ್ಯಾಪಕ ಮತ್ತು ಯುವ ಸಂಶೋಧಕ ಡಾ. ಸಂಜಿಬನ್ ಚಕ್ರಬರ್ತಿ, ಮೈಕ್ರೋಫ್ಲೂಯಿಡಿಕ್ ಕ್ಯಾನ್ಸರ್-ಆನ್- ಚಿಪ್ ಎನ್ನುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕ್ಯಾನ್ಸರ್ ರೋಗಿಯಿಂದ ಬಯಾಪ್ಸಿ ಮೂಲಕ ಪಡೆದ ಗೆಡ್ಡೆಯಲ್ಲಿ ಔಷಧ ಪ್ರತಿಕ್ರಿಯೆಯ ನೇರ ಮೌಲ್ಯಮಾಪನವನ್ನು ಮಾಡಲು ಸಹಾಯ ಮಾಡುತ್ತದೆ. ಇದು ಔಷಧ-ಸೂಕ್ಷ್ಮ ಮತ್ತು ಔಷಧ-ನಿರೋಧಕ ಗೆಡ್ಡೆಗಳನ್ನು ಗುರುತಿಸಲು ಕ್ರಿಯಾತ್ಮಕ ಓದುವಿಕೆಗಳನ್ನು ಒದಗಿಸುತ್ತದೆ. ವೈಯಕ್ತಿಕ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ನಿರ್ವಹಿಸುವಾಗ ಈ ಸಂಶೋಧನೆಗಳು […]