ದಕ್ಷ, ಪ್ರಾಮಾಣಿಕ ಅರಣ್ಯ ಅಧಿಕಾರಿಗೆ ಉಡುಪಿ ತಾ.ಪಂ‌ಸಭೆಯಲ್ಲಿ ಅಗೌರವ “ದುರಹಂಕಾರಿ” ಎಂದ್ರು ಶಾಸಕರು!-ಅಧಿಕಾರಿಯ ಧ್ವನಿ ಹತ್ತಿಕ್ಕಲು ಸಭೆಯಲ್ಲಿ ಪ್ರೀ ಪ್ಲಾನ್, ಮೂರೇ ತಿಂಗಳಲ್ಲಿ ಅಧಿಕಾರಿಯ ವರ್ಗಾವಣೆ

ಪ್ರಾಮಾಣಿಕವಾಗಿ ಜಿಲ್ಲೆಯ ಅರಣ್ಯ ಸಂಪತ್ತು ಉಳಿಸಬೇಕು, ಅರಣ್ಯ ಹಾಳು ಮಾಡುವ ಎಲ್ಲರಿಗೂ ಶಿಕ್ಷೆಯಾಗಬೇಕು ಎನ್ನುವ ಕಾಳಜಿಯಿಂದ ಕೆಲಸ ಮಾಡುವ ಅಧಿಕಾರಿಗೆ, ಮೀಸಲು ಅರಣ್ಯವನ್ನು ಅಭಿವೃದ್ಧಿಯ ನೆಪ ಹೇಳಿ ಹಾಳು ಮಾಡಲು ಓರ್ವ ಅರಣ್ಯ ಅಧಿಕಾರಿಯಾಗಿ ಕಾನೂನಿನ ಪ್ರಕಾರ ನಾನು ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂದು ಅರಣ್ಯ ಸಂರಕ್ಷಣೆಯೇ ತನ್ನ ಧ್ಯೇಯ ಎನ್ನುವ ಅಧಿಕಾರಿಗೆ ಸೋಮವಾರ ತಾ.ಪಂ ಸಭೆಯಲ್ಲಿ ಶಾಸಕರು ಮತ್ತು ಸದಸ್ಯರಗಳು ಸೇರಿ ಅವಮಾನಿದ ವಿಡಿಯೋ ತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ. ದುರಹಂಕಾರಿ,ಬೇಜವಾಬ್ದಾರಿ,ಎಂದು ಅಧಿಕಾರಿಯ ಮೇಲೆ […]