ಮತಾಂತರದ‌ ಮೂಲಕ‌ ಹಿಂದೂ ಧರ್ಮಕ್ಕೆ ಮೋಸ ಮಾಡಬೇಡಿ: ಬೆಳ್ಮಣ್ ಚಲೋ ಸಭೆಯಲ್ಲಿ ಡಾ.‌ ಪ್ರಭಾಕರ ಭಟ್ 

ಕಾರ್ಕಳ: ಹಿಂದೂ ಸಮಾಜಕ್ಕೆ ಮತಾಂತರದ ಮೂಲಕ ಮೋಸ ಮಾಡುವ ಕೆಲಸ ಯಾರೂ ಮಾಡಬೇಡಿ. ಹಿಂದೂ ಧರ್ಮ ಇಡೀ ಜಗತ್ತಲ್ಲಿ ಸರ್ವ ಶ್ರೇಷ್ಠವಾದ ಧರ್ಮವಾಗಿದೆ. ಹೀಗಾಗಿ‌ ಬಂದರೂ ಈ ಹಿಂದೂ ದೇಶವನ್ನು ಮತಾಂತರ ಮಾಡಲು ಸಾಧ್ಯವಿಲ್ಲ. ಪದೇ ಪದೇ ಧರ್ಮವನ್ನು ಕೆಣಕುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಕೆಣಕಿದರೆ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು. ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಕಳ […]