ಮಿಜೋರಾಂನಲ್ಲಿ ಸಶಸ್ತ್ರ ಕುಕಿ ಒಳನುಸುಳುವಿಕೆ ಸಮಸ್ಯೆ: ಜಂಟಿ ಕಾರ್ಯಾಚರಣೆಗೆ ಮುಂದಾದ ಭಾರತ ಮತ್ತು ಬಾಂಗ್ಲಾದೇಶ

ನವದೆಹಲಿ: ಈಶಾನ್ಯ ಭಾರತದ ಪ್ರಕ್ಷುಬ್ಧ ಮಿಜೋರಾಂ ರಾಜ್ಯಕ್ಕೆ ಸಶಸ್ತ್ರ ಬಂಡುಕೋರರು ನಿರಾಶ್ರಿತರಾಗಿ ನುಸುಳುತ್ತಿರುವ ಆತಂಕಕಾರಿ ಸುದ್ದಿಯಿಂದ ಬಾಂಗ್ಲಾದೇಶ ಮತ್ತು ಭಾರತ ಆತಂಕಗೊಂಡಿವೆ. ದೆಹಲಿ ಮತ್ತು ಢಾಕಾ ಎರಡೂ ಪ್ರದೇಶದಲ್ಲಿನ ಹೊಸ ಭದ್ರತಾ ಸವಾಲುಗಳನ್ನು ಎದುರಿಸಲು ಗುಪ್ತಚರ ವರದಿಗಳನ್ನು ಹಂಚಿಕೊಳ್ಳುತ್ತಿದ್ದು, ಸ್ಥಳೀಯ ಪತ್ರಿಕೆ ಮತ್ತು ಸ್ಥಳೀಯ ಮೂಲಗಳಿಂದ ಮಾಹಿತಿ ಕ್ರೋಢೀಕರಿಸುತ್ತಿದೆ. ಕುಕಿ-ಚಿನ್ ರಾಷ್ಟ್ರೀಯ ಸೇನೆಯು (KNA) ಬಾಂಗ್ಲಾದೇಶ ಸೇನೆ ಮತ್ತು ಗಣ್ಯ ಅಪರಾಧ-ವಿರೋಧಿ ಪಡೆ ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ನೊಂದಿಗೆ ಹಲವಾರು ಕದನಗಳಲ್ಲಿ ತೊಡಗಿದೆ. ದಾಳಿಯ ಸಮಯದಲ್ಲಿ, […]

ಭಾರತದಿಂದ ಬಾಂಗ್ಲಾವರೆಗೆ 3,200 ಕಿ.ಮೀ ಉದ್ದದ ‘ಗಂಗಾವಿಲಾಸ’: ವಿಶ್ವದ ಅತಿ ಉದ್ದದ ನೌಕಾ ವಿಹಾರಕ್ಕೆ ಚಾಲನೆ

ನವದೆಹಲಿ: ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ವಿಶ್ವದಲ್ಲೇ ಅತಿ ಉದ್ದದ ನದಿಯ ಮೂಲಕದ ನೌಕಾ ವಿಹಾರ ‘ಗಂಗಾವಿಲಾಸ’ ಯೋಜನೆಗೆ ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಐಷಾರಾಮಿ ಕ್ರೂಸರ್ ಈ ವಾರ ತನ್ನ ಐತಿಹಾಸಿಕ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಭಾರತದ ಕೆಲವು ಪ್ರಸಿದ್ಧ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳ ಮೂಲಕ ಸುತ್ತುತ್ತಾ 27 ನದಿಗಳನ್ನು ಒಳಗೊಳ್ಳುತ್ತಾ ಭಾರತದ ಕಾಶಿಯಿಂದ ಬಾಂಗ್ಲಾ ದೇಶದವರೆಗಿನ 3,200 ಕಿ.ಮೀ. ದೂರದ ಪ್ರಯಾಣವನ್ನು 51 ದಿನಗಳಲ್ಲಿ ಸಂಪೂರ್ಣಗೊಳಿಸಲಿದೆ. […]

ಅಂಧರ ಟಿ20 ವಿಶ್ವಕಪ್‌ ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ: ಮೂರನೇ ಬಾರಿಯೂ ಕಪ್ ನಮ್ದೇ

ಬೆಂಗಳೂರು: ಶನಿವಾರ ನಡೆದ ಅಂಧರ ಟಿ20 ವಿಶ್ವಕಪ್‌ನ ಅಂತಿಮ ಹಣಾಹಣಿಯಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಈ ಬಾರಿಯೂ ಕಪ್ ನಮ್ದೇ ಎಂದು ಬೀಗಿದೆ. ಭಾರತವು ಪಂದ್ಯಾವಳಿಯಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ 120 ರನ್‌ಗಳ ಬೃಹತ್ ಅಂತರದಿಂದ ಎದುರಾಳಿಗಳನ್ನು ಸೋಲಿಸಿದೆ. ಆರಂಭದಿಂದಲೂ ಆತಿಥೇಯ ತಂಡವು ತಮ್ಮ ನೆರೆಯ ಬಾಂಗ್ಲಾದೇಶದ ವಿರುದ್ಧ ಫೈನಲ್‌ಗೆ ಹೋಗುವ ನೆಚ್ಚಿನ ತಂಡವಾಗಿತ್ತು ಮತ್ತು ಬೆಂಗಳೂರಿನ ಮೈದಾನದಲ್ಲಿ ಇತಿಹಾಸವನ್ನು ಸೃಷ್ಟಿಸಿ ಅದ್ಭುತ ವಿಜಯವನ್ನು ಪೂರ್ಣಗೊಳಿಸಿತು. #TeamIndia beat Bangladesh by […]

ಬಾಂಗ್ಲಾ ಚೆಂಡಿಗರನ್ನು ಬಗ್ಗಿಸಿದ ಭಾರತೀಯ ಬ್ಯಾಟರ್ ಇಶಾನ್ ಕಿಶನ್: ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಬಾರಿಸಿದ ಪೋರ

ಚಿತ್ತಗಾಂಗ್‌: ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ನಂತರ ಇಶಾನ್ ಕಿಶನ್ ಅವರ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ 113 ರನ್‌ಗಳ ಬೆಂಬಲದೊಂದಿಗೆ ಭಾರತವು 409/8 ರನ್ ಗಳಿಸಿದೆ. ಮೆಹಿದಿ ಹಸನ್ ಕೇವಲ ಐದನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ರೋಹಿತ್ ಶರ್ಮಾ ಗಾಯಗೊಂಡ ನಂತರ ತಂಡದಲ್ಲಿದ್ದ ಕಿಶನ್ ಇನ್ನಿಂಗ್ಸ್ ಸ್ಥಿರತೆ ಕಾಯ್ದುಕೊಳ್ಳಲು ಕೊಹ್ಲಿಯೊಂದಿಗೆ ಕೈಜೋಡಿಸಿದರು. ಮೂವತ್ತರ ಶತಕ ಬಾರಿಸುವವರೆಗೂ […]

ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ ವಿರಾಟ್ ಕೊಹ್ಲಿ

ಅಡಿಲೇಡ್: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಭಾರತದ ಗುಂಪು 2 ಪಂದ್ಯದಲ್ಲಿ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವಿರಾಟ್ ತಮ್ಮ ಅಜೇಯ ಅರ್ಧಶತಕದ ಹಾದಿಯಲ್ಲಿ ತಮ್ಮ 16 ನೇ ರನ್ ಬಾರಿಸಿದಾಗ, ಅವರು ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರ 1016 ರನ್‌ಗಳ ದಾಖಲೆಯನ್ನು ಮುರಿದು ಪ್ರಥಮ ಸ್ಥಾನವನ್ನು ಅಲಂಕರಿಸಿದರು. ಇದು ಈ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಅವರ ಮೂರನೇ ಅರ್ಧಶತಕವಾಗಿದೆ. […]