ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ!! ನೆಟ್ಟಿಗರಿಂದ ಮೆಚ್ಚುಗೆ

ಬೆಂಗಳೂರು: ಬೆಂಗಳೂರು ನಗರದ ಬಡಾವಣೆಯೊಂದರಲ್ಲಿ ಸಂಪೂರ್ಣವಾಗಿ ಸಂಸ್ಕೃತದಲ್ಲಿ ಮಾತನಾಡುವ ಮತ್ತು ಕ್ರಿಕೆಟ್ ಕಾಮೆಂಟರಿಯನ್ನೂ ಸಂಪೂರ್ಣವಾಗಿ ಸಂಸ್ಕೃತದಲ್ಲಿ ನಡೆಸುವ ವೀಡಿಯೋ ಒಂದನ್ನು ಸಂಸ್ಕೃತ ಭಾರತಿ ಸಂಸ್ಥೆಯ ಪೂರ್ಣ ಕಾಲಿಕ ಕಾರ್ಯಕರ್ತ ಲಕ್ಷ್ಮೀ ನಾರಾಯಣ್ ಬಿ.ಎಸ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Sanskrit and cricket pic.twitter.com/5fWmk9ZMZy — LAKSHMI NARAYANA B.S (BHUVANAKOTE) (@chidsamskritam) October 2, 2022

ಕಾರ್ಕಳ ಅಂಚೆ ಕಛೇರಿಯಿಂದ “ಫಿಟ್ ಇಂಡಿಯಾ ಫ್ರೀಡಂ ರನ್”

ಕಾರ್ಕಳ: ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಗಾಂಧೀ ಜಯಂಜಿಯ ದಿನವಾದ ಅಕ್ಟೋಬರ್:2 ರಂದು ಕಾರ್ಕಳ ಪ್ರಧಾನ ಅಂಚೆ ಕಛೇರಿಯ ವತಿಯಿಂದ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ ನಡೆಯಿತು. ಕಾರ್ಕಳ ಅಂಚೆ ಇಲಾಖೆಯ ಸಿಬಂಧಿಗಳು ಮುಖ್ಯ ಕಛೇರಿಯಿಂದ ಗಾಂಧೀ ಮೈಧಾನದವರೆಗೂ ಜಾಥಾ ನಡೆಸಿದರು. ಎಲ್ಲಾ ಸಿಬಂಧಿಗಳು ಈ ಜಾಥಾದಲ್ಲಿ ವಿಭಿನ್ನ ಉಡುಗೆ ಧರಿಸಿ  ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಿದರು. ಜಾಥಾದಲ್ಲಿ  ಅಂಚೆಸಾಹಾಯಕರಾದ  ರಮೇಶನಾಯ್ಕ್, ಸೌಮ್ಯಆಚಾರ್ಯ, ವಿದ್ಯಾಹೊಸಕೋಟೆ, ಶ್ರುತಿನಾಯ್ಕ್, ರಶ್ಮಿಕಾಮತ್, ಲೀನಾಕೊರ್ನೆಲಿಯೊ, ಹರೀಶ್ಪಿ, ಹೇಮಚಂದ್ರ, ತಿಪ್ಪೇಸ್ವಾಮಿ, ಅಂಚೆಪೇದೆಗಳಾದ  ಸುಚಿತ್ರಾಭಟ್, […]

ಪಿಎಫ್‌ಐ ಮತ್ತು ಸಂಬಂಧಿತ 8 ಸಂಘಟನೆಗಳು 5 ವರ್ಷಗಳ ಕಾಲ ನಿಷೇಧ: ಕೇಂದ್ರ ಗೃಹ ಸಚಿವಾಲಯದ ಮಹತ್ವದ ನಿರ್ಧಾರ

ನವದೆಹಲಿ: ದೇಶಾದ್ಯಂತ ಅನೇಕ ದಾಳಿಗಳು ಮತ್ತು ಬಂಧನಗಳ ನಂತರ, ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಆಪಾದಿತ ಸಂಬಂಧಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಗೃಹ ಸಚಿವಾಲಯ ಬುಧವಾರ ಐದು ವರ್ಷಗಳ ಕಾಲ ನಿಷೇಧಿಸಿದೆ. ಇದರ ಜೊತೆಗೆ, ಪಿಎಫ್‌ಐಯ ಸಹವರ್ತಿ ಸಂಸ್ಥೆಗಳಾದ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ […]

ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಅಪ್ಪಳಿಸಿದ ನಾಸಾ: ವಿಚಲನ ತಂತ್ರಜ್ಞಾನದ ಯಶಸ್ವಿ ಪರೀಕ್ಷೆ

ವಿಚಲನ ತಂತ್ರಜ್ಞಾನವನ್ನು ಪರೀಕ್ಷಿಸಲು ನಾಸಾ ತನ್ನ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಕಳೆದ ವರ್ಷದ ನವೆಂಬರ್‌ ನಲ್ಲಿ ಉಡಾವಣೆಯಾದ ವೆಂಡಿಂಗ್ ಮೆಷಿನ್-ಗಾತ್ರದ ಬಾಹ್ಯಾಕಾಶ ನೌಕೆ ಡಾರ್ಟ್ (DART) ಫುಟ್‌ಬಾಲ್ ಮೈದಾನದ ಗಾತ್ರದ ಕ್ಷುದ್ರಗ್ರಹ ಡೈಮಾರ್ಫಾಸ್‌ ನತ್ತ ಪ್ರಯಾಣಿಸಿದೆ ಮತ್ತು ಅದಕ್ಕೆ ಡಿಕ್ಕಿ ಹೊಡೆದಿದೆ ಮತ್ತು ಅದನ್ನು ಪಥದಿಂದ ಹೊರಕ್ಕೆ ತಳ್ಳಿದೆ. ಬಾಹ್ಯಾಕಾಶದಲ್ಲಿ 10 ತಿಂಗಳ ಹಾರಾಟದ ನಂತರ, ನಾಸಾ ದ ಡಬಲ್ ಆಸ್ಟ್ರಾಯಿಡ್ ರಿ-ಡೈರೆಕ್ಷನ್ ಟೆಸ್ಟ್ (ಡಾರ್ಟ್), ವಿಶ್ವದ ಮೊದಲ ಗ್ರಹಗಳ ರಕ್ಷಣಾ ತಂತ್ರಜ್ಞಾನ ಪ್ರದರ್ಶನವು ಸೋಮವಾರ […]

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ: ಜಿಲ್ಲೆಯಲ್ಲಿ ಸೆಪ್ಟಂಬರ್ 27 ರಂದು ಈ ಕೆಳಕಂಡ ವ್ಯಾಪ್ತಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಉಡುಪಿಯ 110/33/11 ಕೆವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಬನ್ನಂಜೆ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬ್ರಹ್ಮಗಿರಿ, ಕಾನ್ವೆಂಟ್ ರಸ್ತೆ, ಕಾಡಬೆಟ್ಟು, ಪ್ರಗತಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, 110/11ಕೆವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಕಲ್ಯಾಣಪುರ, ಶಾಂತಿವನ ಮತ್ತು ಪುತ್ತೂರು ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ, ಗೋಪಾಲಪುರ, […]