ಕಾರ್ಕಳ ಅಂಚೆ ಕಛೇರಿಯಿಂದ “ಫಿಟ್ ಇಂಡಿಯಾ ಫ್ರೀಡಂ ರನ್”

ಕಾರ್ಕಳ: ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಗಾಂಧೀ ಜಯಂಜಿಯ ದಿನವಾದ ಅಕ್ಟೋಬರ್:2 ರಂದು ಕಾರ್ಕಳ ಪ್ರಧಾನ ಅಂಚೆ ಕಛೇರಿಯ ವತಿಯಿಂದ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ ನಡೆಯಿತು. ಕಾರ್ಕಳ ಅಂಚೆ ಇಲಾಖೆಯ ಸಿಬಂಧಿಗಳು ಮುಖ್ಯ ಕಛೇರಿಯಿಂದ ಗಾಂಧೀ ಮೈಧಾನದವರೆಗೂ ಜಾಥಾ ನಡೆಸಿದರು. ಎಲ್ಲಾ ಸಿಬಂಧಿಗಳು ಈ ಜಾಥಾದಲ್ಲಿ ವಿಭಿನ್ನ ಉಡುಗೆ ಧರಿಸಿ  ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಿದರು.

ಜಾಥಾದಲ್ಲಿ  ಅಂಚೆಸಾಹಾಯಕರಾದ  ರಮೇಶನಾಯ್ಕ್, ಸೌಮ್ಯಆಚಾರ್ಯ, ವಿದ್ಯಾಹೊಸಕೋಟೆ, ಶ್ರುತಿನಾಯ್ಕ್, ರಶ್ಮಿಕಾಮತ್, ಲೀನಾಕೊರ್ನೆಲಿಯೊ, ಹರೀಶ್ಪಿ, ಹೇಮಚಂದ್ರ, ತಿಪ್ಪೇಸ್ವಾಮಿ, ಅಂಚೆಪೇದೆಗಳಾದ  ಸುಚಿತ್ರಾಭಟ್, ಆಶಾಲತಾಪಿ, ಪ್ರತಿಮಾ, ವನಿತಾ, ಅರುಣ್  ನಾಯಕ್, ಜಯಲಕ್ಷ್ಮೀ ಪೈ ,ರಮಣಿ, ಪ್ರಮೀಳಾ, ಸತೀಶ್  ಕುಮಾರ್, ದೇವದಾಸ್,  ಅಭಿಲಾಷ್  ಉಪಸ್ಥಿತರಿದ್ದರು.