ಪವರ್ ಪಾಯಿಂಟ್​ ಸಾಫ್ಟ್​ವೇರ್ ತಯಾರಕ ಡೆನ್ನಿಸ್ ಆಸ್ಟಿನ್ ವಿಧಿವಶ

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಸುಮಾರು 36 ವರ್ಷಗಳ ಹಿಂದೆ ಮತ್ತೊಬ್ಬ ಸಾಫ್ಟವೇರ್​ ಎಂಜಿನಿಯರ್​ ಜೊತೆಗೂಡಿ ಪವರ್ ಪಾಯಿಂಟ್ ಸಾಫ್ಟ್ ವೇರ್ ಅನ್ನು ರಚಿಸಿದ್ದ ಡೆನ್ನಿಸ್ ಆಸ್ಟಿನ್ ಅವರು ಅಮೆರಿಕದಲ್ಲಿ ನಿಧನರಾಗಿದ್ದಾರೆ.ಎಂಎಸ್​ ಪವರ್​ ಪಾಯಿಂಟ್​ ಸಾಫ್ಟ್​ವೇರ್ ತಯಾರಿಸಿದ ಡೆನ್ನಿಸ್ ಆಸ್ಟಿನ್ 76ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ನಿಧನರಾಗಿದ್ದಾರೆ. 76 ವರ್ಷದ ಆಸ್ಟಿನ್ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 1993 ರ ಹೊತ್ತಿಗೆ ಪವರ್​ ಪಾಯಿಂಟ್​ $ 100 ಮಿಲಿಯನ್ ಡಾಲರ್​ಗಿಂತ ಹೆಚ್ಚು ಆದಾಯ […]

3 ಮಿಲಿಯನ್ ಡಾಲರ್ ಹೂಡಿಕೆ ಪ್ರಕೃತಿ ಆಧರಿತ ಯೋಜನೆಗಳಿಗೆ ಮಾಡಲಿದೆ ಅಮೆಜಾನ್

ನವದೆಹಲಿ: ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಲ್ಲಿ 3 ಮಿಲಿಯನ್ ಡಾಲರ್ ಆರಂಭಿಕ ಹೂಡಿಕೆ ಮಾಡುವುದಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಸೋಮವಾರ ತಿಳಿಸಿದೆ. ಏಷ್ಯಾ ಪೆಸಿಫಿಕ್ (ಎಪಿಎಸಿ) ನಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗೆ ಕಂಪನಿಯು ನಿಗದಿಪಡಿಸಿದ 15 ಮಿಲಿಯನ್ ಡಾಲರ್ ನಿಧಿಯ ಭಾಗವಾಗಿ ಈ ಹೂಡಿಕೆ ಮಾಡಲಾಗುವುದು. ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗಾಗಿ ನಿಧಿಯ ಎಪಿಎಸಿ ಪಾಲಿನ ಮೊದಲ 3 ಮಿಲಿಯನ್ ಡಾಲರ್ ಬಳಸಲಾಗುವುದು ಎಂದು ಅಮೆಜಾನ್ ಹೇಳಿದೆ. ಪರಿಸರ ಸಂರಕ್ಷಣೆಯ ಯೋಜನೆಗಳಿಗಾಗಿ ಭಾರತದಲ್ಲಿ ಆರಂಭಿಕವಾಗಿ 3 ಮಿಲಿಯನ್ […]

ವಿಂಡೋಸ್​ನಿಂದ ಮೈಕ್ರೊಸಾಫ್ಟ್​ ‘ವರ್ಡ್​ಪ್ಯಾಡ್​’ಅನ್ನು ತೆಗೆದು ಹಾಕಲಿದೆ

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಇನ್ನು ಮುಂದೆ ವರ್ಡ್​ಪ್ಯಾಡ್​ಗೆ ಯಾವುದೇ ಅಪ್​ಡೇಟ್​​ ನೀಡುವುದಿಲ್ಲ ಎಂದು ಘೋಷಿಸಿದೆ. ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್​ ವರ್ಡ್ ಅನ್ನು ಬಳಸುವಂತೆ ಹೇಳಿದೆ. ವರ್ಡ್​​ ಪ್ಯಾಡ್​​ಗಿಂತ ತುಂಬಾ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಬಳಸಲು ಸುಲಭವಾದ ಎಂಎಸ್​ ವರ್ಡ್​ 1995 ರಿಂದ ವಿಂಡೋಸ್​ನೊಂದಿಗೆ ಲಭ್ಯವಾಗುತ್ತಿದೆ. ಅಲ್ಲದೆ ಸುಮಾರು 30 ವರ್ಷಗಳ ನಂತರ ವಿಂಡೋಸ್​​ನ ಭವಿಷ್ಯದ ಆವೃತ್ತಿಗಳಿಂದ ವರ್ಡ್ ಪ್ರೊಸೆಸರ್ ಅನ್ನು ತೆಗೆದುಹಾಕುವುದಾಗಿ ತಿಳಿಸಿದೆ.ಭವಿಷ್ಯದ ವಿಂಡೋಸ್​ ಅಪ್ಡೇಟ್​​ಗಳಲ್ಲಿ ವರ್ಡ್​ಪ್ಯಾಡ್​ ಇರುವುದಿಲ್ಲ ಎಂದು […]

19,400ಕ್ಕೆ ತಲುಪಿದ ನಿಫ್ಟಿ, ಬಿಎಸ್​ಇ ಸೆನ್ಸೆಕ್ಸ್​ 556 ಅಂಕ ಏರಿಕೆ

ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳು ಗಮನಾರ್ಹ ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಬಿಎಸ್‌ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 555.75 ಪಾಯಿಂಟ್ ಅಥವಾ ಶೇಕಡಾ 0.86 ರಷ್ಟು ಏರಿಕೆ ಕಂಡು 65,387.16 ಕ್ಕೆ ತಲುಪಿದ್ದರೆ, ವಿಶಾಲ ಎನ್‌ಎಸ್‌ಇ ನಿಫ್ಟಿ-50 181.50 ಪಾಯಿಂಟ್ ಅಥವಾ ಶೇಕಡಾ 0.94 ರಷ್ಟು ಏರಿಕೆ ಕಂಡು 19,400 ಕ್ಕೆ ತಲುಪಿದೆ. ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರದಂದು ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಎನ್​ಟಿಪಿಸಿ, ಜೆಎಸ್​ಡಬ್ಲ್ಯೂ ಸ್ಟೀಲ್, ಜಿಯೋ ಫೈನಾನ್ಷಿಯಲ್, ಒಎನ್​ಜಿಸಿ, ಟಾಟಾ […]

ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕರಿಂದ Aditya-L1 ಬಗ್ಗೆ ಸಂಪೂರ್ಣ ಮಾಹಿತಿ

ಬೆಂಗಳೂರು : ನಾಳೆ(ಶನಿವಾರ) ಇಸ್ರೋ ನಿರ್ಮಿತ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.ಆದಿತ್ಯ ಎಲ್​​1 ಸೂರ್ಯನನ್ನು ಅಧ್ಯಯನ ಮಾಡುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯಾಗಿದೆ. ಈ ಕುರಿತು ಈಟಿವಿ ಭಾರತಕ್ಕೆ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಿಂದುವಿನಲ್ಲಿ ಭೂಮಿಯ ಗುರುತ್ವ ಪ್ರಭಾವ ಮತ್ತು ಸೂರ್ಯನ ಗುರುತ್ವ ಪ್ರಭಾವಗಳು ಸಮತೋಲನಗೊಳ್ಳುತ್ತವೆ. ಆದಿತ್ಯ-ಎಲ್ 1 ಯೋಜನೆಯಲ್ಲಿ ಈ ಬಿಂದುವನ್ನು ಕೇಂದ್ರೀಕರಿಸಿ ಸೂರ್ಯನ ಸುತ್ತ ಪರಿಭ್ರಮಿಸಲು ಯೋಜಿಸಲಾಗಿದೆ.ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ […]