ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಮದುವೆಯನ್ನು ಮುಂದೂಡಿದ ಪಾಟಿದಾರ್! ಮಗನ ಕಥೆಯನ್ನು ಬಿಚ್ಚಿಟ್ಟ ತಂದೆ!!

ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವುದರಿಂದ ಹಿಡಿದು, ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ದೋಣಿಯನ್ನು ದಡಕ್ಕೆ ಹಾಯಿಸುವವರೆಗಿನ ಈ ಪ್ರಯಾಣದಲ್ಲಿ ಪಾಟಿದಾರ್ ನಿಜವಾಗಿಯೂ ಬಹಳ ದೂರ ಸಾಗಿದ್ದಾರೆ. ಒಂದೇ ಮ್ಯಾಚ್ ನಲ್ಲಿ ರಜತ್ ಪಾಟೀದಾರ್ ಕ್ರಿಕೆಟ್ ಮತ್ತು ಆರ್ ಸಿ ಬಿ ಪ್ರೇಮಿಗಳ ಕಣ್ಮಣಿಯಾಗಿ ಬದಲಾಗಿದ್ದಾರೆ. ಪಾಟಿದಾರ್ ಅವರ ತಂದೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಐಪಿಎಲ್ ನಲ್ಲಿ ಮಾರಾಟವಾಗದೆ ಉಳಿದ ಕಾರಣ ಅದೇ ಸಮಯದಲ್ಲಿ ಮಗ ಮದುವೆಯಾಗಬೇಕಿತ್ತು, ಆದರೆ ಲುವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ, ತನ್ನ ಮಗ ರಜತ್ ಪಾಟಿದಾರ್ […]

ಫ್ರೆಂಚ್ ಓಪನ್ 2022: 300ನೇ ಗ್ರ್ಯಾಂಡ್ ಸ್ಲಾಮ್ ಪಂದ್ಯದ ಗೆಲುವಿನೊಂದಿಗೆ ಮೂರನೇ ಸುತ್ತಿಗೆ ಜಿಗಿದ ರಫೆಲ್ ನಡಾಲ್

ಬುಧವಾರದಂದು ತಮ್ಮ 300ನೇ ಗ್ರ್ಯಾಂಡ್ ಸ್ಲಾಮ್ ಪಂದ್ಯದ ಗೆಲುವನ್ನು ಭದ್ರಪಡಿಸಿಕೊಳ್ಳಲು ಪ್ರಬಲವಾದ ಪ್ರದರ್ಶನವನ್ನು ನೀಡಿದ ಸ್ಪೇನ್ ಆಟಗಾರ ರಫಾಲ್ ನಡಾಲ್, ಫ್ರೆಂಚ್ ಓಪನ್ ನ ಮೂರನೇ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ಸ್ಥಳೀಯ ಆಟಗಾರ ಕೊರೆಂಟಿನ್ ಮೌಟೆಟ್ ಅನ್ನು 6-3, 6-1, 6-4 ಅಂತರದಿಂದ ಸೋಲಿಸಿದ್ದಾರೆ. 🎥 Grand Slam win 3️⃣0️⃣0️⃣ for No.5 @RafaelNadal 👇#RolandGarros pic.twitter.com/px9XymLlIJ — Roland-Garros (@rolandgarros) May 26, 2022 ನಡಾಲ್ ಅವರ ಒಟ್ಟಾರೆ 21 ಮೇಜರ್‌ಗಳಲ್ಲಿ 13 […]

ಟಿ20 ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು; ಪಾಕ್ ಗೆ10 ವಿಕೆಟ್ ಗಳ ಗೆಲುವು

ದುಬೈ: ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತು. ಆದರೆ ಇಂದು ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಾಣುವ ಮೂಲಕ ಅಜೇಯ ಓಟಕ್ಕೆ ಕಡಿವಾಣ […]

ಐಪಿಎಲ್ 14ನೇ ಆವೃತ್ತಿ: 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ.!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನೆರವೇರಿದೆ. ಐಪಿಎಲ್ 2021: 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು: ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆ್ಯಡಂ ಜಾಂಪಾ, ಜೋಶ್ ಪಿಲಿಪ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ. ಹರಾಜಿನಲ್ಲಿ ಖರೀದಿಸಿದ […]

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮತ್ತೆ ಎದೆನೋವು: ಆಸ್ಪತ್ರೆಗೆ ದಾಖಲು

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೃದಯಾಘಾತದ ಸೌಮ್ಯ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಗಂಗೂಲಿ ಅವರು ಬಳಿಕ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಇದೀಗ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಗಂಗೂಲಿ ಅವರು ಆರೋಗ್ಯವಾಗಿದ್ದಾರೆ. ಆದರೆ ಒಂದೆರಡು ದಿನ ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.