283 ಹುದ್ದೆಗೆ ಅರ್ಜಿ ಆಹ್ವಾನ : AIESLನಲ್ಲಿ ಪದವಿ ಪಾಸಾದವರಿಗೆ ಉದ್ಯೋಗಾವಕಾಶ

ಬೆಂಗಳೂರು: ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (ಎಐಇಎಸ್‌ಎಲ್) ವಿಮಾನ ನಿರ್ವಹಣೆ ಮತ್ತು ದುರಸ್ತಿ ಸಂಸ್ಥೆಯಾಗಿದ್ದು, (ಎಂಆರ್‌ಒ) ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಪ್ರಸ್ತುತ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ವಿದ್ಯಾರ್ಹತೆಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಲ್ಲಿ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಬಿ.ಎಸ್‌ಸಿ, ಬಿ.ಕಾಮ್, ಬಿಎ, ಏರೋನಾಟಿಕಲ್ / ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್​​​ / ಟೆಲಿಕಮ್ಯುನಿಕೇಷನ್ಸ್ / ಇನ್ಸ್​​​​​​ಟ್ರುಮೆಂಟೇಶನ್ / ಎಲೆಕ್ಟ್ರಾನಿಕ್ಸ್​​​ ಕಮ್ಯುನಿಕೇಶನ್ / ಇಂಡಸ್ಟ್ರಿಯಲ್ […]

ಕ್ಯೂ ಆರ್ ಕೋಡ್ ಸಮೇತ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಸಿದ್ಧತೆ : ಆರ್​ಸಿ, ಡಿಎಲ್ ಕಾರ್ಡ್​ಗಳು ಇನ್ನಷ್ಟು ಸ್ಮಾರ್ಟ್

ರಾಜ್ಯದಲ್ಲಿ ಸದ್ಯ ಪಿಪಿಪಿ ಮಾದರಿಯಲ್ಲಿ ಎಲ್ಲ ಆರ್​ಟಿಒ ಕಚೇರಿಗಳು ಹಾಗೂ ತನಿಖಾ ಠಾಣೆಗಳನ್ನು ಗಣಕೀಕರಣಗೊಳಿಸುವ ಮತ್ತು ಆರ್​ಸಿ, ಡಿಎಲ್​ಗೆ ಸ್ಮಾರ್ಟ್ ಕಾರ್ಡ್​ಗಳನ್ನು ವಿತರಿಸುವ ಯೋಜನೆಯನ್ನು ರೋಸ್​ವುರ್ಟ ಟೆಕ್ನಾಲಜೀಸ್ ಪೈವೇಟ್ ಲಿಮಿಟೆಡ್​ಗೆ ಗುತ್ತಿಗೆ ಕೊಡಲಾಗಿತ್ತು. ಈ ಗುತ್ತಿಗೆ ಅವಧಿ 2024ರ ಫೆಬ್ರವರಿಗೆ ಮುಕ್ತಾಯವಾಗುತ್ತಿದೆ. ನಂತರ ಹೊಸದಾಗಿ ಟೆಂಡರ್ ಆಹ್ವಾನಿಸುವ ಮೂಲಕ ಸ್ಮಾರ್ಟ್​ಕಾರ್ಡ್ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಇಲಾಖೆ ಸಿದ್ಧತೆ ನಡೆಸಿದೆ. ಕರ್ನಾಟಕದಲ್ಲಿ 2009ರಿಂದಲೇ ಆರ್​ಸಿ ಹಾಗೂ ಡಿಎಲ್​ಗೆ ಸ್ಮಾರ್ಟ್ ಕಾರ್ಡ್​ಗಳನ್ನು ಕೊಡಲಾಗುತ್ತಿದೆ. ಆದರೀಗ ಜಾರಿಗೆ ತರಲು ಉದ್ದೇಶಿಸಿರುವ […]

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ವಿ.‌ಸುನಿಲ್ ಕುಮಾರ್‌ ನೇಮಕ

ಕಾರ್ಕಳ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ವಿ.‌ ಸುನಿಲ್ ಕುಮಾರ್‌ ಅವರನ್ನು ನೇಮಿಸಲಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಡಿ. 23 ರಂದು ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. 10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ (ಬಾಗಲಕೋಟೆ), ಬೈರತಿ ಬಸವರಾಜ್ (ಬೆಂಗಳೂರು), ನಾಯಕರಾದ ರಾಜುಗೌಡ ನಾಯಕ್ […]

2024ರ ಚುನಾವಣೆಗೆ ಪ್ರಣಾಳಿಕೆಯಲ್ಲಿ ಸಿಎಂ ಸಿದ್ದರಾಮಯ್ಯಗೂ ಸ್ಥಾನ : ಸಮಿತಿ ರಚಿಸಿದ ಕಾಂಗ್ರೆಸ್

ಹೊಸದಿಲ್ಲಿ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರಚಿಸಲು ಕಾಂಗ್ರೆಸ್ ತನ್ನ ಸಮಿತಿಯನ್ನು ರಚಿಸಿದೆ‌. ಕಾಂಗ್ರೆಸ್‌ ಬಿಡುಗಡೆಗೊಳಿಸಿದ 16 ಮಂದಿಯ ಪಟ್ಟಿಯಲ್ಲಿ ಸಿದ್ದರಾಮಯ್ಯ ಮಾತ್ರವಲ್ಲದೆ ಪಿ. ಚಿದಂಬರಂ,‌ ಜೈರಾಂ ರಮೇಶ್, ಜಿಗ್ನೇಶ್‌ ಮೇವಾನಿ ಮೊದಲಾದವರು ಸಮಿತಿಯಲ್ಲಿ ಇರಲಿದ್ದಾರೆ. ಕಾಂಗ್ರೆಸ್‌ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಅಧ್ಯಕ್ಷ ಪಿ.ಚಿದಂಬಂ , ಸಂಚಾಲಕ ಟಿ.ಎಸ್.‌ ಸಿಂಗ್‌ ಡಿಯೊ, ಸಿದ್ದರಾಮಯ್ಯ, ಪ್ರಿಯಾಂಕ ಗಾಂಧಿ ವಾದ್ರ, ಆನಂದ್‌ ಶರ್ಮಾ, ಜೈರಾಂ ರಮೇಶ್, ಶಶಿ ತರೂರ್, ಗೈಖಂಗಮ್, ಗೌರವ್‌ ಗೊಗೊಯಿ, ಪ್ರವೀಣ್‌ ಚಕ್ರವರ್ತಿ, ಇಮ್ರಾನ್‌ ಪ್ರತಾಪ್‌ಗರಿ, ಕೆ.ರಾಜು, […]

2024ರ ಫೆಬ್ರವರಿಯಲ್ಲಿ ವಿಧಾನಮಂಡಲದ ‘ಬಜೆಟ್ ಅಧಿವೇಶನ’ ನಡೆಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ. ರಾಜ್ಯದ ಹೊರಗೆ ಠೇವಣಿ ಇಟ್ಟಿರುವ ಹಣವನ್ನು ಮರಳಿ ತರುವ ಬಗ್ಗೆಯೂ ಸಚಿವ ಸಂಪುಟ ಚರ್ಚೆ ನಡೆಸಿದೆ. ಬೇರೆಡೆ ಠೇವಣಿ ಇಟ್ಟಿರುವ ಹಣವನ್ನು ಗುರುತಿಸಿ ರಾಜ್ಯ ಖಜಾನೆಗೆ ಮರಳಿ ತರಲು ಸಂಪುಟ ಉಪಸಮಿತಿ ರಚಿಸಲು ಸಿಎಂಗೆ ಅಧಿಕಾರ ನೀಡಿತು. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಮಂಗಳೂರಿನ ಬ್ಯಾಂಕ್ ವೊಂದರಲ್ಲಿ 56 ಕೋಟಿ ರೂ.ಗಳನ್ನು ಠೇವಣಿ ಇಟ್ಟಿರುವುದು ಕಂಡುಬಂದ ನಂತರ […]