ಐಆರ್ಸಿಟಿಸಿಯಿಂದ ₹ 95 ಸಾವಿರದಲ್ಲಿ ದುಬೈ ಪ್ರವಾಸ ಯೋಜನೆ

ಜೈಪುರ: ಭಾರತೀಯ ರೈಲ್ವೆ ಸಚಿವಾಲಯದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್(ಐಆರ್‌ಸಿಟಿಸಿ) ಇದೇ ತಿಂಗಳಲ್ಲಿ ದುಬೈ ಪ್ರವಾಸದ ವಿಶೇಷ ಪ್ಯಾಕೇಜ್ ಆಯೋಜಿಸುತ್ತಿದೆ.ಈ ಪ್ರವಾಸ ಪ್ಯಾಕೇಜ್‌ಗೆ ಗಣರಾಜ್ಯೋತ್ಸವವೂ ಜೊತೆಯಾಗುತ್ತಿದೆ. ಬುಕ್ಕಿಂಗ್ ಆರಂಭವಾಗಿದ್ದು, ಜನವರಿ 6ರವರೆಗೂ ತೆರೆದಿರುತ್ತದೆ. ನಾಲ್ಕು ರಾತ್ರಿ, ಐದು ದಿನಗಳ ಪ್ರವಾಸದ ಪ್ಯಾಕೇಜ್‌ ದರ ಪ್ರತಿ ವ್ಯಕ್ತಿಗೆ ₹94,730. ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ಕೊಚ್ಚಿ ನಗರಗಳ ಪ್ರವಾಸಿಗರು ದುಬೈ ಪ್ರವಾಸಕ್ಕೆ ಹೋಗಬಹುದು. ನಾಲ್ಕಾರು ಪ್ರವಾಸಿಗರು ಒಟ್ಟಾಗಿ, ಗುಂಪು ರಚಿಸಿಕೊಂಡು ಪ್ರವಾಸ ಮಾಡಲು […]

ರೇಬಿಸ್ ರೋಗವನ್ನು ಅಧಿಸೂಚಿತ ಎಂದು ಘೋಷಿಸಲಿದೆ ದೆಹಲಿ ಸರ್ಕಾರ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೇಬಿಸ್‌ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅದನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ‘ಅಧಿಸೂಚಿತ ರೋಗ’ ಎಂದು ಘೋಷಿಸಲು ದೆಹಲಿ ಸರ್ಕಾರ ಸಿದ್ಧತೆ ನಡೆಸಿದೆ.ಈ ಕಾಯಿಲೆಯಿಂದ ಬಳಲುತ್ತಿರುವವರ ಮೇಲ್ವಿಚಾರಣೆಯನ್ನು ಬಲಪಡಿಸಲು ಹಾಗೂ ಸಕಾಲದಲ್ಲಿ ಚಿಕಿತ್ಸೆ ಒದಗಿಸುವುದನ್ನು ಖಾತ್ರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ‘ದೆಹಲಿಯಲ್ಲಿ ರೇಬಿಸ್‌ನಿಂದ ಒಂದೇ ಒಂದು ಸಾವು ಕೂಡ ಸಂಭವಿಸದಂತೆ ಗುರಿ ಸಾಧಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆ ಇದಾಗಿದೆ’ ಎಂದು ದೆಹಲಿ ಆರೋಗ್ಯ ಸಚಿವ ಪಂಕಜ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. […]

ಬ್ಯಾಂಕ್ ಆರ್ಥಿಕತೆಯಲ್ಲಿ ಸುಧಾರಣೆ: ಆರ್ ಬಿ ಐ ವರದಿ ಹೇಳೋದನು?

ಮುಂಬೈ: ಜಾಗತಿಕವಾಗಿ ಏರುತ್ತಿರುವ ಏರಿಳಿತಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ಉತ್ತಮ ಗತಿಯಲ್ಲಿದ್ದು, ಬಲವಾದ ದೇಶೀಯ ಬೇಡಿಕೆ, ದಾಖಲೆಯ ಕಡಿಮೆ ಹಣದುಬ್ಬರ ಮತ್ತು ಆರೋಗ್ಯಕರ ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ಗಳಿಂದ ಬೆಂಬಲಿತವಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ಸ್ಥಿರತೆ ವರದಿಯಲ್ಲಿ ತಿಳಿಸಿದೆ. ಅಸುರಕ್ಷಿತ ಸಾಲ, ಫಿನ್‌ಟೆಕ್ ಮಾನ್ಯತೆ, ಬಾಹ್ಯ ಅನಿಶ್ಚಿತತೆಗಳು ಮತ್ತು ಸ್ಟೇಬಲ್‌ಕಾಯಿನ್‌ಗಳಿಂದ ಅಪಾಯಗಳ ಬಗ್ಗೆಯೂ ವರದಿಯಲ್ಲಿ ಎಚ್ಚರಿಸಲಾಗಿದೆ. ಬಲವಾದ ಬ್ಯಾಲೆನ್ಸ್ ಶೀಟ್‌ಗಳು, ಸುಲಭ ಹಣಕಾಸು ಪರಿಸ್ಥಿತಿಗಳು ಮತ್ತು ಕಡಿಮೆ ಹಣಕಾಸು ಮಾರುಕಟ್ಟೆಯ ಚಂಚಲತೆಯಿಂದ ಹಣಕಾಸು ವ್ಯವಸ್ಥೆಯು “ದೃಢ […]

ಇಂದೋರ್ ಕಲುಷಿತ ನೀರು ಸೇವಿಸಿದ ಮಗು ಮೃತ್ಯು!

ಭೋಪಾಲ್‌: ಮಧ್ಯ ಪ್ರದೇಶ (Madhya Pradesh)ದ ಇಂದೋರ್‌(Indore)ನ ಭಗೀರಥಪುರ (Bhagirathpura) ಪ್ರದೇಶದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಜನರ ಜೀವಕ್ಕೆ ಕಂಟಕವಾಗಿ ಬದಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳ ಹಸುಗೂಸೊಂದು ಬಲಿಯಾಗಿದೆ. ಈ ದುರಂತದ ಬಳಿಕ ನಗರಪಾಲಿಕೆ ನಿರಂತರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಮಗುವಿನ ತಾಯಿ ಸಾಧನಾ ಸಾಹು ಅವರ ಪ್ರಕಾರ, “ಹಾಲಿಗೆ ಮನೆಯ ನೀರನ್ನು ಮಿಶ್ರಣ ಮಾಡಿ ಮಗುವಿಗೆ ಕುಡಿಸಿದ ಬಳಿಕ ತೀವ್ರ ವಾಂತಿ, ಅತಿಸಾರ ಕಾಣಿಸಿಕೊಂಡಿತು. ಕೂಡಲೇ […]

ಮತ್ತೆ ಬರಲಿದೆ “ದಿ ಕೇರಳ ಸ್ಟೋರಿ-2”: ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ!

ಮುಂಬೈ:ವಿವಾದಗಳ ನಡುವೆಯೂ ಭಾರಿ ಸಂಚಲನ ಮೂಡಿಸಿದ್ದ ದಿ ಕೇರಳ ಸ್ಟೋರಿ ಚಿತ್ರದ ಸಿಕ್ವೇಲ್‌ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ದಿ ಕೇರಳ ಸ್ಟೋರಿ 2 ಚಿತ್ರೀಕರಣ ಪೂರ್ಣಗೊಂಡಿದ್ದ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಲವ್‌ ಜಿಹಾದ್‌ ಕುರಿತ ಈ ಚಿತ್ರ ಹೆಚ್ಚು ಗಂಭೀರ ಹಾಗೂ ಕರಾಳ ಕಥೆಯನ್ನು ಹೊಂದಿದೆ. ಚಿತ್ರೀಕರಣದ ವೇಳೆ ಸಂಪೂರ್ಣ ಗುಪ್ತತೆ ಕಾಪಾಡಕೊಳ್ಳಲಾಗಿತ್ತು ಎನ್ನುವುದು ಚಿತ್ರ ಬಿಡುಗಡೆಯ ಕುತೂಹಲಕ್ಕೆ ಕಾರಣವಾಗಿದೆ. ದಿ ಕೇರಳ ಸ್ಟೋರಿ ಸಿನಿಮಾದಿಂದ ಒಂದು ಭಯಾನಕ ವಾಸ್ತವ ಬೆಳಕಿಗೆ ಬಂದಿತ್ತು. 2023ರಲ್ಲಿ […]