ಕೋಟಿ–ಚೆನ್ನಯರ ಗರೋಡಿಗಳ ದರ್ಶನ; 100ಕ್ಕೂ ಹೆಚ್ಚು ಕಂತುಗಳಲ್ಲಿ ಸಾಕ್ಷ್ಯಚಿತ್ರ ಪ್ರಸಾರ

ಉಡುಪಿ: ಸ್ವಸ್ತಿಕ್‌ ಪ್ರೊಡಕ್ಷನ್‌ ಅರ್ಪಿಸುವ ‘ತುಳುನಾಡ ಬಂಗಾರ್‌ ಗರೋಡಿಲು’ ತುಳು ಸಾಕ್ಷ್ಯಚಿತ್ರ ಡಿ. 1ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11.30ರಿಂದ 12 ಗಂಟೆಯವರೆಗೆ ನಮ್ಮ ಕುಡ್ಲ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಾಕ್ಷ್ಯಚಿತ್ರದ ನಿರ್ದೇಶಕ ಸುರೇಂದ್ರ ಮೋಹನ್‌ ಅವರು, ಈ ಸಾಕ್ಷ್ಯಚಿತ್ರದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ–ಚೆನ್ನಯರ ಗರೋಡಿ ಕ್ಷೇತ್ರದ ದರ್ಶನ ಹಾಗೂ ಪರಿಚಯ ಮಾಡಲಾಗುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ, ಕಾಸರಗೋಡು, ಕುಂದಾಪುರ, ಮಡಿಕೇರಿ ಹಾಗೂ ಮುಂಬೈ ಸೇರಿದಂತೆ 242 ಗರೋಡಿಗಳನ್ನು […]

ಸೆಟ್ಟೇರಲು ಸಿದ್ಧವಾಗ್ತಿದೆ ಕಾಮಿಡಿ ಹಾರರ್ ತುಳು ಚಿತ್ರ “ಶಕಲಕ ಬೂ0 ಬೂ0”: ಕನ್ನಡಕ್ಕೂ ಡಬ್ ಆಗ್ತಿದೆ ಈ ತುಳು ಸಿನಿಮಾ

ಮೂವಿ ಮಸಾಲ:  ನಿರ್ದೇಶಕ ಶ್ರೀಶಾ ಎಳ್ಳಾರೆ ನಿರ್ದೇಶನದಲ್ಲಿ ಕಾಮಿಡಿ ಹಾರರ್ ತುಳುಫಿಲಂ ಶಕ ಲಕ ಬೂ0 ಬೂ0 ತೆರೆಯಮೇಲೆ ಬರಲು ಸಿದ್ಧವಾಗುತ್ತಿದೆ. ವಿಶೇಷವೆಂದರೆ ಇದು ಕನ್ನಡ ಭಾಷೆಗೂ ಡಬ್ ಆಗಲಿದೆ.  ಸಿನಿಮಾ ಶೂಟಿಂಗ್ ಬೇಗ ಮುಗಿಸುವ ಯೋಚನೆ ಚಿತ್ರ ತಂಡಕ್ಕಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಕಲಾವಿದ ನೀಲ್ಕೋಡು ಶಂಕರ್ ಹೆಗಡೆಯವರು ನೆರೆವೇರಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದ್ದಾರೆ. ವಿವಿದೆಡೆ ಚಿತ್ರೀಕರಣ : ಸಿನಿಮಾ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭಗೊಳ್ಳುತ್ತಿದ್ದು ಉಡುಪಿ, ಚಿಕ್ಕಮಗಳೂರು, […]

ಡಿಸೆಂಬರ್ ನಲ್ಲಿ ‘ಶಕಲಕ ಬೂಂ ಬೂಂ’ ತುಳು-ಕನ್ನಡ ಚಿತ್ರದ ಚಿತ್ರೀಕರಣ

ಉಡುಪಿ: ಕೋಸ್ಟಲ್‌ವುಡ್‌ ಸಿನಿಮಾಸ್‌ ಪ್ರಸ್ತುತಪಡಿಸುವ ಹಾರರ್‌ ಕಾಮಿಡಿ ಮಿಶ್ರಣವುಳ್ಳ ‘ಶಕಲಕ ಬೂಂ ಬೂಂ’ ತುಳು ಮತ್ತು -ಕನ್ನಡ ಚಿತ್ರದ ಚಿತ್ರೀಕರಣ ಡಿಸೆಂಬರ್‌ ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ನಿರ್ದೇಶಕ ಶ್ರೀಶ ಎಳ್ಳಾರೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಚಿತ್ರದ ಕಥೆ ಐದು ಮಂದಿಯ ನಡುವೆ ಸಾಗಲಿದ್ದು, ಇದಕ್ಕಾಗಿ ಪರ್ಕಳ ಕಬ್ಯಾಡಿಯ ಮನೆಯೊಂದರಲ್ಲಿ ಸೆಟ್‌ ಹಾಕಲಾಗುವುದು. ಉಳಿದಂತೆ ಉಡುಪಿ, ಮಣಿಪಾಲ, ಕಾರ್ಕಳ, ಮಂಗಳೂರು, ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದರು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರವಿಂದ ಬೋಳಾರ್‌, […]

ನ.8: “ಜಬರ್ದಸ್ತ್ ಶಂಕರ್” ತುಳುಚಿತ್ರ ಬಿಡುಗಡೆ

ಉಡುಪಿ: ಜಲನಿಧಿ ಫಿಲಂಸ್‌ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ‘ಜಬರ್ದಸ್ತ್‌ ಶಂಕರ್‌’ ತುಳುಚಿತ್ರ ಇದೇ 8ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರಿನ ಬಿಗ್‌ ಸಿನಿಮಾಸ್‌, ಪಿವಿಆರ್‌, ಸಿನಿಪೊಲಿಸ್‌ ಮಲ್ಟಿಪ್ಲೆಕ್ಸ್‌ಗಳು, ಉಡುಪಿಯ ಆಶೀರ್ವಾದ್‌, ಮಣಿಪಾಲದ ಐನಾಕ್ಸ್‌, ಬಿಗ್‌ ಸಿನಿಮಾಸ್‌, ಕಾರ್ಕಳದ ಪ್ಲಾನೆಟ್‌ ಸೇರಿದಂತೆ ಕರಾವಳಿಯ 14 ಕೇಂದ್ರಗಳು ಹಾಗೂ ವಿದೇಶಗಳಾದ ಒಮನ್‌, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳ 14 […]

ಬಹುನಿರೀಕ್ಷಿತ ಸಿನಿಮಾ “ಜಬರದಸ್ತ್ ಶಂಕರ” ನ. 8ರಂದು ತೆರೆಗೆ

ಮಂಗಳೂರು: ಬಹುನಿರೀಕ್ಷಿತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಹೊಚ್ಚ ಹೊಸ ತುಳು ಸಿನಿಮಾ “ಜಬರದಸ್ತ್ ಶಂಕರ” ನವೆಂಬರ್ 8 ರಂದು ಶುಕ್ರವಾರ ಬಿಡುಗಡೆಯಾಗಲಿದೆ. ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ “ಜಬರದಸ್ತ್ ಶಂಕರ” ತುಳು ಸಿನಿಮಾ ದಿನಾಂಕವನ್ನು ಚಿತ್ರದ ನಿರ್ದೇಶಕರಾಗಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಪ್ರಕಟಿಸಿದ್ದಾರೆ. ಜಲನಿಧಿ ಫಿಲ್ಸ್ ಬ್ಯಾನರಿನಲ್ಲಿ ಇದೇ ಮೊದಲ ಬಾರಿಗೆ ಅನಿಲ್ ಕುಮಾರ್ ಮತ್ತು ಲೊಕೇಶ್ ಕೋಟ್ಯಾನ್ ಚಿತ್ರ ನಿರ್ಮಾಪಕರಾಗುತ್ತಿದ್ದು, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತುಳು […]