ನಟ ಮಿಮಿಕ್ರಿ ರಾಜಗೋಪಾಲ್ ನಿಧನ

ಬೆಂಗಳೂರು: ಕನ್ನಡದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್(69) ಗುರುವಾರ ನಿಧನರಾಗಿದ್ದಾರೆ. ಅವರು ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು. ಕನ್ನಡ ಸೇರಿದಂತೆ ಪರಭಾಷೆಗಳಲ್ಲಿಯೂ ಹಾಸ್ಯನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದರು. ಇವರು 1983ರಿಂದ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿದರು. ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಿಮಿಕ್ರಿ ಮಾಡುವಲ್ಲಿ ಖ್ಯಾತರಾಗಿದ್ದರು. ನಟಿ ಕಲ್ಪನಾ ಧ್ವನಿಯನ್ನು ಅನುಕರಿಸುವುದರಲ್ಲಿ ನಿಪುಣರು. ಕಲ್ಪನಾ ಧ್ವನಿಯನ್ನು ಅನುಕರಿಸಿ ಅಭಿಮಾನಿಗಳನ್ನು ಪಡೆದಿದ್ದರು.

ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ ಎನ್ನುವ “ಹೀಗೊಂದು ಕತೆ”

“ಪಾಂಚಜನ್ಯ “ಕ್ರಿಯೇಶನ್ಸ್ ನ ಚಂದದ ಪ್ರಸ್ತುತಿ “ಹೀಗೊಂದು ಕತೆ”. ಒಂದು ಯುವ ತಂಡ ಸೇರಿಕೊಂಡು ನಿರ್ಮಿಸಿದ ಈ ಕಿರು ಚಿತ್ರದ ಕುರಿತು ಉಡುಪಿXPRESS ನ ಒಂದು ಒಳನೋಟ ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ.ಆದರೆ ನೋಡುವ ಕಣ್ಣು ಬೇಕು, ಕಂಡುಕೊಳ್ಳುವ ಹೃದಯ ಬೇಕು ಎನ್ನುವ ಅಮೂಲ್ಯ ಸಂದೇಶ ನೀಡುತ್ತ ಮೈಮನಸ್ಸಲ್ಲಿ ಒಂದೈದು ನಿಮಿಷ ಆವರಿಸಿಕೊಂಡುಬಿಡುತ್ತದೆ “ಹೀಗೊಂದು ಕತೆ” ಬದುಕಲ್ಲಿ ಹೀಗೆ ಹೋಗಿ ಹಾಗೆ ಬರುವ ಕತೆಗಳು ನೂರಾರು, ನನಗೆ ಹೀಗೊಂದು ಅನುಭವ ಆಗಿದೆ, ಹೀಗೊಂದು ಕನಸು ಬಿದ್ದಿದೆ ಎನ್ನುತ್ತ […]

ಉಡುಪಿಯ ಮನೆಯಲ್ಲೇ  ಹುಟ್ಟುಹಬ್ಬ ಆಚರಿಸಿದ್ರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಉಡುಪಿ: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ತಮ್ಮ ಹುಟ್ಟೂರು ಉಡುಪಿಯಲ್ಲಿ ಮನೆಮಂದಿ ಜೊತೆ ಸರಳವಾಗಿ ಆಚರಿಸಿ ಸಂಭ್ರಮಿಸಿದರು. ಪ್ರತಿವರ್ಷ ಸಾವಿರಾರು ಅಭಿಮಾನಿಗಳ ಜೊತೆಗೆ ಅದ್ದೂರಿಯಾಗಿ, ತಮ್ಮ ಹುಟ್ಟು ಹಬ್ಬ ಆಚರಿಸುವ ರಕ್ಷಿತ್ ಶೆಟ್ಟಿ, ಈ ಬಾರೀ ಲಾಕ್ಡೌನ್ ಹಿನ್ನೆಲೆಯಲ್ಲಿ ತಂದೆ ತಾಯಿ, ಅಣ್ಣ ಅತ್ತಿಗೆ, ಅಣ್ಣನ ಮಕ್ಕಳ ಜೊತೆಗೆ ಉಡುಪಿಯ ಅಲೆವೂರಿನಲ್ಲಿ ಇರುವ ತಮ್ಮ ಮನೆಯಲ್ಲಿಯೇ ಕೇಕ್ ಕಟ್ ಮಾಡಿ ಸಿಂಪಲ್ ಆಗಿ ಸೆಲೆಬ್ರೆಟ್ ಮಾಡಿದ್ದು ಗಮನ ಸೆಳೆಯಿತು.  ಇನ್ನೂ ಹುಟ್ಟು […]

ವೈರಲ್ ಆಯ್ತು ರಾಧಿಕಾ ಪಂಡಿತ್ ಮುದ್ದು ಮಕ್ಕಳ ವಿಡಿಯೋ: ಅಕ್ಕ-ತಮ್ಮನ ಮುದ್ದಾಟಕ್ಕೆ ಅಭಿಮಾನಿಗಳು ಫಿದಾ!

ಉಡುಪಿ: ಸದ್ಯ ತಾಯ್ತನ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್ ಸಿನಿ ರಂಗದಿಂದ ಸ್ವಲ್ಪ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್‍ನಲ್ಲಿದ್ದಾರೆ. ಹೌದು ಇದೀಗ ಫೇಸ್‍ಬುಕ್‍ನಲ್ಲಿ ಸಕ್ರೀಯರಾಗಿರುವ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜತೆ ಕಳೆಯುತ್ತಿರುವ ಅದ್ಭುತ ಕ್ಷಣಗಳನ್ನ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಪ್ರತೀ ಬಾರಿ ಐರಾ ವಿಡಿಯೋ ಅಪ್‍ಲೋಡ್ ಮಾಡುತ್ತಿದ್ದ ರಾಧಿಕಾ ಇದೀಗ ತಮ್ಮ ಇಬ್ಬರು ಮಕ್ಕಳ ಕ್ಯೂಟ್ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಅಕ್ಕ ಐರಾ ತನ್ನ ತಮ್ಮನನ್ನ ಮಡಿಲಲ್ಲಿ […]

‘ಕಾಣದ ಕಡಲಿಗೆ’ ಕಿರುಚಿತ್ರದ ಟ್ರೈಲರ್ ಬಿಡುಗಡೆ: ಜನರಿಂದ ಉತ್ತಮ ಪ್ರತಿಕ್ರಿಯೆ

ಉಡುಪಿ: ಶ್ರಾವಣಿ ಪ್ರೊಡಕ್ಷನ್ ಅರ್ಪಿಸುವ ಮೋಹನ್ ಕುಮಾರ್ ಕೆದೂರು ನಿರ್ಮಾಣ ಹಾಗೂ ನಿರ್ದೇಶನದ ‘ಕಾಣದ ಕಡಲಿಗೆ’ ಕಿರುಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪರ್ಕಳ ಹಾಗೂ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ ಚಿತ್ರದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ನಾಯಕ ಅಂಧ ಹುಡುಗಿಯೊಬ್ಬಳನ್ನು ಪ್ರೀತಿಸುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಮೋಹನ್ ನಿರ್ದೇಶನದ ಜತೆಗೆ ನಾಯಕ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಈ ಕಿರುಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಎರಡು ದಿನಗಳ […]