ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್ಯವರ್ಧನ್ : ಎಸ್.ನಾರಾಯಣ್ ‘ಸೂರ್ಯವಂಶ’ ದಿಂದ ಮತ್ತೆ ಕಿರುತೆರೆಗೆ ಅನಿರುದ್ದ್

ಅಭಿಮಾನಿಗಳ ನೆಚ್ಚಿನ ಆರ್ಯವರ್ಧನ್ ಖ್ಯಾತಿಯ ಅನಿರುದ್ದ್ ಮತ್ತೆ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಕನ್ನಡದ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ ರವರು ಅನಿರುದ್ದ್ ಕೈ ಹಿಡಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ಮಾಡಿ ಹೆಸರುಗಳಿಸಿರುವ ಎಸ್.ನಾರಾಯಣ್ ಉದಯ ಟಿವಿಗಾಗಿ “ಸೂರ್ಯವಂಶ” ಧಾರಾವಾಹಿಯನ್ನು ರಚಿಸಿ ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ ಡಾ. ವಿಷ್ಣುವರ್ಧನ್ ರವರು ನಟಿಸಿದ್ದ ಸೂರ್ಯವಂಶ ಹೆಸರಿನ ಧಾರಾವಾಹಿಯಲ್ಲಿ ಅನಿರುದ್ದ್ ನಟಿಸುತ್ತಿರುವುದು. ವಿಷ್ಣು ದಾದಾ ನಟಿಸಿದ್ದ ಸೂರ್ಯವಂಶ ಚಿತ್ರವು ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಅಳಿಯ ಅನಿರುದ್ದ್ […]
ಹಿರಿತೆರೆ ಕಿರುತೆರೆಯಲ್ಲಿ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಡಬಲ್ ರೈಡಿಂಗ್

ಕಿರುತೆರೆ ಧಾರಾವಾಹಿ ಜೊತೆಜೊತೆಯಲಿ ಮೂಲಕ ಪ್ರವರ್ಧಮಾನಕ್ಕೆ ಬಂದು ರಾಜ್ಯಾದ್ಯಂತ ಅನುಸಿರಿಮನೆ ಎಂದೇ ಖ್ಯಾತಿ ಪಡೆದಿರುವ ಮೇಘಾ ಶೆಟ್ಟಿಯ ಹಿರಿತೆರೆ ಪ್ರಯಾಣ ಭರಜರಿಯಾಗಿಯೆ ಶುರುವಾಗಿದೆ. ಜೊತೆಜೊತೆಯಲಿ ಧಾರಾವಾಹಿಯ ಮುಗ್ಧ ಮೇಘಾ ಈಗ ಚಂದನವನದ ಬೇಡಿಕೆಯ ನಟಿ. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿರುವ ತ್ರಿಬಲ್ ರೈಡಿಂಗ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೇಘಾ ನಟನೆಯ ದಿಲ್ ಪಸಂದ್ ಚಿತ್ರವೂ ಬಿಡುಗಡೆಯಾಗಿದ್ದು, ಈಗ ತ್ರಿಬಲ್ ರೈಡಿಂಗ್ ಚಿತ್ರ ತೆರೆ ಕಂಡಿದೆ. ಮೇಘಾ ಬಳಿ ಇನ್ನೂ ಎರಡು […]
ಯೂಟ್ಯೂಬ್ ನಲ್ಲಿ ಕಚಗುಳಿಯಿಡುತ್ತಿದ್ದಾನೆ ಮಿ.ಕೋದಂಡ! ಭರ್ಗ ಸಿನಿಮಾಸ್ ರವರ ಕಿರುಚಿತ್ರದ ಎಪಿಸೋಡ್1 ಬಿಡುಗಡೆ

ಯೂಟ್ಯೂಬ್ ಚಾನೆಲ್ ನಲ್ಲಿ ಭರ್ಗ ಸಿನಿಮಾಸ್ ರವರ ಕಿರುಚಿತ್ರ ಮಿ.ಕೋದಂಡ ಬಿಡುಗಡೆಯಾಗಿದೆ. ಸುಮಂತ್ ಆಚಾರ್ಯ ಚಿತ್ರಕಥೆ ಮತ್ತು ನಿರ್ದೇಶನದ ಈ ಕಿರುಚಿತ್ರವನ್ನು ವಿಜಯ್ ನಿರ್ಮಾಣ ಮಾಡಿದ್ದಾರೆ. ಮುಖ್ಯ ತಾರಾಗಣದಲ್ಲಿ ಪ್ರತೀಕ್ ಶೆಟ್ಟಿ ಮತ್ತು ದೀಪಿಕಾ ಗೌಡ ನಟಿಸಿದ್ದಾರೆ. ಇವರಿಗೆ ದಿವ್ಯ ಅಂಚನ್, ಕೃಷ್ಣ ಶೆಂದ್ರೆ ರಾಘು ರಾಮನಕೊಪ್ಪ, ಮಧು ಭಾರದ್ವಾಜ, ಸಿದ್ದು ಮಂಡ್ಯ ಜೊತೆಯಾಗಿದ್ದಾರೆ. ಯಶವಂತ್ ಆರ್ಯ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ರಾಜ್ ಪ್ರವೀಣ್ ಅವರ ಪರಿಕಲ್ಪನೆಯಲ್ಲಿ ಚಿತ್ರ ಮೂಡಿಬಂದಿದ್ದು ಯೂಟ್ಯೂಬ್ ನಲ್ಲಿ ಮೊದಲನೆ ಎಪಿಸೋಡ್ ಜನರನ್ನು […]
ರಿಷಭ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ ಯುರೋಪಿನ ಯಂಗ್ ಜ್ಯೂರಿ ಅವಾರ್ಡ್ ಪ್ರಶಸ್ತಿ

ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ “ನ್ಯೂ ಕರೆಂಟ್ಸ್” ಪ್ರಶಸ್ತಿಯ ನಂತರ ಇದೀಗ ರಿಷಭ್ ಶೆಟ್ಟಿ ನಿರ್ಮಾಣದ ಶಿವಮ್ಮ ಚಲನಚಿತ್ರ ಯುರೋಪಿನ ಪ್ರತಿಷ್ಠಿತ ಎಫ್3 ಕಾಂಟಿನೆಂಟ್ಸಿನ ನ 44ನೇ ಆವೃತ್ತಿಯಲ್ಲಿ ‘ಯಂಗ್ ಜ್ಯೂರಿ ಅವಾರ್ಡ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಚಿತ್ರವನ್ನು ಜಯಶಂಕರ್ ಆರ್ಯರ್ ಬರೆದು ನಿರ್ದೇಶಿಸಿದ್ದು, ರಿಶಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣ ಮಾಡಿದೆ. ದಕ್ಷಿಣ ಕೊರಿಯಾದ ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 27 ನೇ ಆವೃತ್ತಿಯಲ್ಲಿ ಕೊರಿಯನ್ ಚಲನಚಿತ್ರ ಎ ವೈಲ್ಡ್ ರೂಮರ್ ಜೊತೆಗೆ ನ್ಯೂ ಕರೆಂಟ್ಸ್ ಪ್ರಶಸ್ತಿಯನ್ನು ಗೆದ್ದು 30,000 (ಸುಮಾರು […]
ವರಾಹರೂಪಂ ಹಾಡಿನ ಮೊದಲನೆ ತಡೆ ಪಾರು: ಹಾಡಿನ ಬಳಕೆಗೆ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಅನುಮತಿ

ತಿರುವನಂತಪುರ: ಕಾಂತಾರ ಚಿತ್ರದ ವರಾಹರೂಪಂ ಹಾಡಿನ ಕಾನೂನಾತ್ಮಕ ಸಂಘರ್ಷದಲ್ಲಿ ನಿರ್ಮಾಪಕರಾದ ಹೊಂಬಾಳೆ ಫಿಲಂಮ್ಸ್ ನ ಮೊದಲನೆ ತಡೆ ಪಾರಾಗಿದ್ದು, ಹಾಡಿನ ಬಳಕೆಗೆ ಅನುಮತಿ ದೊರೆತಿದೆ. ವರಾಹರೂಪಂ ಹಾಡನ್ನು ತನ್ನ ನವರಸಂ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಕೇರಳದ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕೋರ್ಟಿನಲ್ಲಿ ದಾವೆ ಹೂಡಿದ್ದು ಇದನ್ನು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಈ ವಿಚಾರವಾಗಿ ಈ ಹಾಡಿನ ಬರಹಗಾರ ಶಶಿರಾಜ್ ಕಾವೂರು, “ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ […]