ಮಲಯಾಳಂ ನಟ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ಮೃತ ; ಕಂಬನಿ ಮಿಡಿದ ಚಿತ್ರರಂಗ!

ಕೇರಳ: “ಸೋಮವಾರ ಮುಂಜಾನೆ 4.30ಕ್ಕೆ ಕೈಪಮಂಗಲಂನಲ್ಲಿ ಕೊಲ್ಲಂ ಸುಧಿ, ಉಲ್ಲಾಸ್ ಅರೂರ್, ಬಿನು ಅಡಿಮಾಲಿ ಮತ್ತು ಮಹೇಶ್ ಪ್ರಯಾಣಿಸುತ್ತಿದ್ದ ಕಾರು ಟ್ರಕ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಟ್ರಕ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ. ಶೀಘ್ರವೇ ನಾಲ್ವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಕೊಲ್ಲಂ ಸುಧಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಉಳಿದ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸರು ಸ್ಥಳೀಯ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತ […]
ಹೊಸ ಕಥೆ, ಹೊಸ ನಿರ್ಮಾಪಕರು ಇದು ಹೊಸ ಗ್ರಾಮಾಯಣ: ಆದರೆ ಅದೇ ನಾಯಕ, ಅದೇ ನಿರ್ದೇಶಕ

ಬೆಂಗಳೂರು: ಸದ್ಯ ‘ಯುಐ’ ಚಿತ್ರವನ್ನು ನಿರ್ಮಿಸುತ್ತಿರುವ ಮನೋಹರ್ ನಾಯ್ಡು ಹಾಗೂ ಕೆ.ಪಿ. ಶ್ರೀಕಾಂತ್ ಇಬ್ಬರೂ ಜತೆ ಸೇರಿ, ಹಳೆಯ ‘ಗ್ರಾಮಾಯಣ’ಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ‘‘ಯುಐ’ ಬಳಿಕ ವೀನಸ್ ಎಂಟರ್ಟೇನರ್ಸ್ ಮತ್ತು ಲಹರಿ ಫಿಲಂಸ್ ನಿರ್ಮಿಸಲಿರುವ ಎರಡನೇ ಚಿತ್ರ ‘ಗ್ರಾಮಾಯಣ’ ಆಗಲಿದೆ. ಹಳೆಯ ಸಿನಿಮಾದ ಯಾವುದೇ ದೃಶ್ಯಾವಳಿಗಳನ್ನು ಬಳಸದೇ, ಹೊಸ ಕಥೆ ಮಾಡಿಕೊಂಡು ಮತ್ತೆ ಹೊಸದಾಗಿ ಚಿತ್ರೀಕರಿಸಲಿದ್ದೇವೆ. ನಿರ್ದೇಶಕ ದೇವನೂರು ಚಂದ್ರು ಅವರ ಕಂಟೆಂಟ್ ಇಷ್ಟವಾದ ಕಾರಣ ಈ […]
‘ಯಾವ ಮೋಹನ ಮುರಳಿ ಕರೆಯಿತು ಏನಿದು ?

ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ 777 ಕನ್ನಡದ ಸಿನಿಮಾ ಬಹು ದೊಡ್ಡ ಸಕ್ಸಸ್ ಕಂಡಿತ್ತು. ಬಳಿಕ ಶ್ವಾನಗಳಿಗೆ ಹಾಗು ಶ್ವಾನದ ಕಥೆ ಆಧರಿಸಿರೋ ಚಿತ್ರಗಳು ಸಿನಿ ಪ್ರೇಮಿಗಳ ಮನಸ್ಸು ಕದಿಯುತ್ತಿವೆ. ಮಗು ಹಾಗು ಶ್ವಾನದ ಕಥೆ ಆಧರಿಸಿರೋ ಈ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ವಿಭಿನ್ನ ಕಥೆ ಹೊಂದಿರುವ ‘ಯಾವ ಮೋಹನ ಮುರಳಿ ಕರೆಯಿತು’ ಎಂಬ ಚಿತ್ರವೊಂದು ಬೆಳ್ಳಿ ತೆರೆ ಮೇಲೆ ಬರ್ತಾ ಇದೆ. ಈ ವೇಳೆ ಮೊದಲಿಗೆ ಚಿತ್ರದ ನಿರ್ದೇಶಕ ವಿಶ್ವಾಸ್ […]
ಅಭಿಷೇಕ್ ಅಂಬರೀಷ್ ಜೊತೆ ಸಪ್ತಪದಿ ತುಳಿದ ಅವಿವಾ ಬಿದ್ದಪ್ಪ

ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮಂಡ್ಯದ ಮರಿ ಗೌಡ ಅಭಿಷೇಕ್ ಅಂಬರೀಶ್ ಪ್ರೀತಿಸಿದ ಹುಡುಗಿ, ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಬ್ಯಾಚುರಲ್ ಲೈಫ್ಗೆ ಗುಡ್ ಬೈ ಹೇಳಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗಿನ ಶುಭ ಕರ್ಕಾಟಕ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಪ್ರೀತಿಸಿದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಈ ಶುಭಕಾರ್ಯ ನಡೆಯುತ್ತಿದೆ. […]
ಬಹುನಿರೀಕ್ಷಿತ ʼಬೇರʼ ಸಿನಿಮಾ ಜೂನ್ 16ಕ್ಕೆ ರಿಲೀಸ್……..

ನಿಮಗೆಲ್ಲ ಗೊತ್ತಿರೋ ಹಾಗೇ ಇದೀಗ ರಿಲೀಸ್ ಆಗಿರೋ ಸಿನಿಮಾದ ಟೀಸರ್ ಸಖತ್ ಸೌಂಡ್ ಮಾಡಿದೆ. ಟೀಸರ್ ನೋಡಿದ ಜನರಿಗೆ ಸಿನಿಮಾ ಬಗ್ಗೆಗ್ಗಿನ ನಿರೀಕ್ಷೆ ಕೂಡ ದುಪ್ಪಟ್ಟು ಆಗಿದೆ.ಬೇರʼ ಅನ್ನೋ ಟೈಟಲ್ ಹೊಂದಿರೋ ಅದ್ಭುತ ಸಿನಿಮಾ ಇದೇ ಜೂನ್ ತಿಂಗಳ 16ಕ್ಕೆ ರಿಲೀಸ್ ಆಗುತ್ತಿದೆ. ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ “ಬೇರ” ಚಿತ್ರನಿರ್ದೇಶಿಸುವ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಎಸ್ಎಲ್ವಿ ಕಲರ್ಸ್ ಬ್ಯಾನರ್ನಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ […]