ರಾಯನ್ ರಾಜ್ ಸರ್ಜಾ ರಾಜಮಾರ್ತಾಂಡ’ದಲ್ಲಿ ಅಪ್ಪನ ಕಂಡು ಕುಣಿದು ಕುಪ್ಪಳಿಸಿದ ಕ್ಷಣ

ಕನ್ನಡ ಚಿತ್ರರಂಗದಲ್ಲಿ ಯುವ ಸಾಮ್ರಾಟ್ ಆಗಿ ಕನ್ನಡಿಗರ ಮನಸ್ಸು ಕದ್ದಿದ್ದ ನಟ ಚಿರಂಜೀವಿ ಸರ್ಜಾ. ‘ರಾಜಮಾರ್ತಾಂಡ’ ಚಿತ್ರದ ಕಲರ್ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಅನಾವರಣಗೊಳಿಸಿದೆ. ಇದರಲ್ಲಿ ಚಿರಂಜೀವಿ ಮಗ ರಾಯನ್ ಸರ್ಜಾ ತನ್ನ ತಂದೆಯನ್ನು ಕಂಡು ಕುಣಿದು ಕುಪ್ಪಳಿಸಿದ ಪರಿ ನೋಡುಗರನ್ನು ಭಾವುಕರನ್ನಾಗಿಸಿದೆ.ಈ ಸಿನಿಮಾದ ಚಿತ್ರೀಕರಣ ಚಿರು ನಿಧನಕ್ಕೂ ಮುನ್ನವೇ ಪೂರ್ಣಗೊಂಡಿತ್ತು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಬಳಿಕ ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ (ಡಬ್ಬಿಂಗ್) ನೀಡಿದರು. ಇನ್ನು ಚಿತ್ರವನ್ನು ಪೂರ್ಣ ಮಾಡಲು ಚಿರು […]
ಪ್ರೀತಿಯ ಪೋಸ್ಟ್ ಹಂಚಿಕೊಂಡ ಉಪಾಸನಾ: ರಾಮ್ಚರಣ್ ಸಿನಿ ಪಯಣಕ್ಕೆ 16ರ ಸಂಭ್ರಮ

ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಇವರು ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸದ ವಿಚಾರವನ್ನು ಹಂಚಿಕೊಳ್ಳಲು ಅವರ ಪತ್ನಿ ಉಪಾಸನಾ ಕಾಮಿನೇನಿ ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು.ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ಚರಣ್ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟರಲ್ಲಿ ಒಬ್ಬರು.’ಆರ್ಆರ್ಆರ್’ ಖ್ಯಾತಿಯ ನಟ ರಾಮ್ಚರಣ್ ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸದ ವಿಚಾರವನ್ನು ಅವರ ಪತ್ನಿ ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಮ್ಚರಣ್ […]
‘ಮಂಗಳವಾರಂ’ ಅಜಯ್ ಭೂಪತಿ ನಿರ್ದೇಶನದ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

‘ಮಂಗಳವಾರಂ’ ವಿಭಿನ್ನ ಚಿತ್ರ: ಇದಕ್ಕೂ ಮುನ್ನ ನಿರ್ದೇಶಕ ಅಜಯ್ ಭೂಪತಿ ಸಿನಿಮಾ ಬಗ್ಗೆ ಮಾತನಾಡಿದ್ದರು.ಅಜಯ್ ಭೂಪತಿ ನಿರ್ದೇಶನದ ‘ಮಂಗಳವಾರಂ’ ಸಿನಿಮಾ ನವೆಂಬರ್ 17ರಂದು ರಿಲೀಸ್ ಆಗಲಿದೆ. ‘ಮಂಗಳವಾರಂ’ ವಿಭಿನ್ನ ಚಿತ್ರ ಎಂದು ಬಣ್ಣಿಸಿರುವ ಅಜಯ್, ‘ಭಾರತೀಯ ಚಿತ್ರರಂಗದಲ್ಲೇ ಇದುವರೆಗೂ ಯಾರೂ ಪ್ರಯತ್ನಿಸದ ಒಂದು ವಿಭಿನ್ನ ಅಂಶವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ಒಟ್ಟು 30 ಪಾತ್ರಗಳಿವೆ. ‘ಆರ್ಎಕ್ಸ್ 100’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಅಜಯ್ ಭೂಪತಿ. ಇದೀಗ ಅವರು ‘ಮಂಗಳವಾರಂ’ […]
ನಟನೆ ಜೊತೆ ನಿರ್ಮಾಣ- ಬಿಡುಗಡೆ ದಿನಾಂಕವೂ ಅನೌನ್ಸ್ : ಆಲಿಯಾ ಭಟ್ ಮುಂದಿನ ಸಿನಿಮಾ ‘ಜಿಗ್ರಾ’

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಬಹುಬೇಡಿಕೆ ನಟಿ ಆಲಿಯಾ ಭಟ್ ನಟನೆಯ ಮುಂದಿನ ಸಿನಿಮಾ ಮೇಲೆ ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದರು. ನಟಿ ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ. ಜಿಗ್ರಾ ಸಿನಿಮಾದಲ್ಲಿ ನಟಿಸೋ ಜೊತೆ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಅದರಂತೆ ಹೊಸ ಸಿನಿಮಾ ಅನೌನ್ಸ್ ಆಗಿದೆ.2023ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಲಿರುವ ನಟಿ ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ. ಸಿನಿಮಾ […]
ಆಧುನಿಕ ಶಿಕ್ಷಣ ವ್ಯವಸ್ಥೆಯ ಸುತ್ತ ಸುತ್ತುವ ಬನ್-ಟೀ ಚಿತ್ರ ಇಂದು ರಾಜ್ಯಾದಂತ ಬಿಡುಗಡೆ

‘ಕಾರ್ಮೋಡ ಸರಿದು’ ಚಿತ್ರದ ಮೂಲಕ 2019ರಲ್ಲಿ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ಸಂಕಲನಕಾರ-ನಿರ್ದೇಶಕ ಉದಯ್ ಕುಮಾರ್, ಬನ್-ಟೀ ಎಂಬ ಚಿತ್ರ ನಿರ್ದೇಶಿಸಿದ್ದು ಇಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಬನ್-ಟೀ ಉದಯ್ ಕುಮಾರ್ ಅವರ ಏಳು ವರ್ಷದ ಕನಸು. ಜನರಿಗೆ ತಿನ್ನಲು ಬೇರೇನೂ ಸಿಗದಿದ್ದಾಗ ಬನ್ ಮತ್ತು ಚಹಾವನ್ನು ಆಶ್ರಯಿಸುತ್ತಾರೆ ಮತ್ತು ಇದು ಅನೇಕರಿಗೆ ಮುಖ್ಯ ಆಹಾರವಾಗಿದೆ. ಚಿತ್ರದ ವಿಶಿಷ್ಟ ಶೀರ್ಷಿಕೆಯು ಕುತೂಹಲವನ್ನು ಹುಟ್ಟುಹಾಕುತ್ತದೆ. ಇದು ನಾವು ಅದನ್ನು ಆರಿಸಿಕೊಳ್ಳಲು ಒಂದು ಪ್ರಮುಖ ಕಾರಣವಾಗಿದೆ ಎಂದು […]