ಮಂಗಳೂರು: ಶಾರ್ದೂಲವನ್ನು ಬೆನ್ನಟ್ಟಿದ ‘ಗ್ರಾಮ ಸಿಂಹ’

ಮಂಗಳೂರು: ದಸರಾ ಸಂದರ್ಭ ಕರಾವಳಿಯಲ್ಲಿ ಹುಲಿ, ಕರಡಿ, ಶಾರ್ದೂಲ ವೇಷಗಳು ಸರ್ವೇ ಸಾಮಾನ್ಯ. ಇಂತಹ ಶಾರ್ದೂಲ ವೇಷಧಾರಿಗಳ ತಂಡವೊಂದು ಮನೆಯೊಂದರ ಶ್ವಾನದ ಬೊಗಳುವಿಕೆಗೆ ದಿಕ್ಕಾಪಾಲಾಗಿ ಓಡಿದ ವೀಡಿಯೋವೊಂದು ವೈರಲ್ ಸಖತ್ ಆಗಿದೆ. ಬ್ಯಾಂಡ್ ಬಡಿಯುತ್ತಾ ಬಂದ ಶಾರ್ದೂಲ ವೇಷಧಾರಿಗಳ ತಂಡ ಮನೆಯೊಂದರ ಗೇಟ್ ಹೊಕ್ಕು ಇನ್ನೇನು ಅಂಗಳಕ್ಕೆ ಕಾಲಿಡಬೇಕು. ಅಷ್ಟರಲ್ಲಿ ಮನೆಯ ಶ್ವಾನ ಜೋರಾಗಿ ಬೊಗಳಲಾರಂಭಿಸಿದೆ. ನಾಯಿಯ ಬೊಬ್ಬೆಗೆ ಬೆದರಿದ ವೇಷ ಹಾಕಿದವರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ. ವೇಷಧಾರಿಗಳು ಓಟಕ್ಕಿತ್ತ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು […]
ಅ.7ರಂದು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆಯ ನೂತನ ಕಚೇರಿ ಉದ್ಘಾಟನೆ

ಉಡುಪಿ: ಕಾರ್ಕಳ ಮಾರಿಗುಡಿ ದೇವಸ್ಥಾನದ ಬಳಿಯ ಪ್ರೈಮ್ ಸಿಟಿ ಸೆಂಟರ್ ನಲ್ಲಿ ಆರಂಭಗೊಂಡ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆಯ ನೂತನ ಕಚೇರಿಯ ಉದ್ಘಾಟನೆ ಸಮಾರಂಭವು ಇದೇ ಅ.7ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ ಎಂದು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲೆಯಾದ್ಯಂತ ನೆಲೆಸಿರುವ […]
ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಸರಕಾರಿ ಬಸ್ ಸೇವೆ ಆರಂಭಿಸಲು ಆಗ್ರಹಿಸಿ ಧರಣಿ

ಉಡುಪಿ:ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲ್ಲೂಕುಗಳಲ್ಲಿ ಬಸ್ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಧರಣಿ […]
ಕಾರ್ಕಳ ಜೋಡುರಸ್ತೆಯ ಸ್ವರ್ಣ ಪ್ರಕಾಶ್ ಜೂವೆಲ್ಲರ್ಸ್ ನಲ್ಲಿ ದೀಪಾವಳಿ ಯ ಗೋಲ್ಡನ್ ಧಮಾಕ.

ಕಾರ್ಕಳ: ಕಾರ್ಕಳ ನಗರದ ಜೋಡು ರಸ್ತೆಯ ಸ್ವರ್ಣ ಪ್ರಕಾಶ್ ಜೂವೆಲ್ಲರ್ಸ್ ನಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 31ರ ವರೆಗೆ ದೀಪಾವಳಿ ಗೋಲ್ಡನ್ ಉತ್ಸವ ನಡೆಯಲ್ಲಿದೆ. ಡೈಮಂಡ್ಡ್ ಪ್ರತಿ ಕ್ಯಾರೆಟ್ ಗೆ 6000 ರೂ. ರಿಯಾಯತಿ, ಚಿನ್ನಾಭರಣಗಳಿಗೆ ಪ್ರತಿ ಗ್ರಾಂಗೆ ರೂ 150 ರೂ. ರಿಯಾಯತಿ , ಹಳೆಯ ಚಿನ್ನಾಭರಣಗಳಿಗೆ 100 ರೂ. ಹೆಚ್ಚುವರಿ ಮೌಲ್ಯ, ಬೆಳ್ಳಿ ಪ್ರತಿ ಕೆಜಿಗೆ 3000 ರೂ. ರಿಯಾಯತಿ, ಹಳೆ ಬೆಳ್ಳಿ ಕೆಜಿಗೆ 2000 ರೂ. ನಂತೆ ಹೆಚ್ಚಿನ ದರದಲ್ಲಿ ನೀಡಲಾಗುತ್ತಿದೆ ಮತ್ತು […]
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

ಬೆಂಗಳೂರು: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟಗೊಂಡಿದ್ದು, ರಕ್ಷಿತ್ ಶೆಟ್ಟಿ ಅವರು ‘ಚಾರ್ಲಿ 777’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ಅರ್ಚನಾ ಜೋಯಿಸ್ ‘ಮ್ಯೂಟ್’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಿವಂಗತ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಅತ್ಯುತ್ತಮ ಮನೋರಂಜನಾ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ. ರಘು ಕೆ.ಎಂ. ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಮೊದಲನೇ ಅತ್ಯುತ್ತಮ ಚಿತ್ರವಾಗಿದ್ದು, ಕಿರಣ್ ರಾಜ್ ನಿರ್ದೇಶನದ ‘ಚಾರ್ಲಿ 777’ ಎರಡನೇ ಅತ್ಯುತ್ತಮ ಚಿತ್ರವಾಗಿ […]