ಉಡುಪಿ:ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ಸ್ವಾತಂತ್ರ್ಯೋತ್ಸವದ ವಿನೂತನ ಆಚರಣೆ

ಉಡುಪಿ:15- 8- 2025 ರ ಶುಕ್ರವಾರದಂದು ನಮ್ಮ ದೇಶದ 79ನೆಯ ಸ್ವಾತಂತ್ರ್ಯೋತ್ಸವವನ್ನು ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಹಾಗೂ ಶ್ರೀ ವೈ ಎಲ್ ಎನ್ ಜೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕುಕ್ಕಿಕಟ್ಟೆ, ಉಡುಪಿ ಇವರ ಸಹಯೋಗದಲ್ಲಿ ಸಿಹಿ ಮೂತ್ರ ರೋಗದಿಂದ ಪಾದಗಳ ರಕ್ಷಣೆ ಕುರಿತಾಗಿ ಮಾಹಿತಿ ಶಿಬಿರ ಹಾಗೂ 45 ಜನ ಫಲಾನುಭವಿಗಳಿಗೆ ಉಚಿತ ಪಾದರಕ್ಷೆ ವಿತರಣಾ ಕಾರ್ಯಕ್ರಮವನ್ನು ನೆರವೇರಿಸುವುದರ ಮೂಲಕ ಆಚರಿಸಲಾಯಿತು. ಕೊಳಲಗಿರಿಯ ಖ್ಯಾತ ಕುಟುಂಬ ವೈದ್ಯ ಹಾಗೂ ಸಮಾಜಸೇವಕ, ಹೋಂ ಡಾಕ್ಟರ್ಸ್ ಫೌಂಡೇಶನ್ ನ […]
ದುಬೈನಲ್ಲಿ ಸೌತ್ ಇಂಡಿಯನ್ ಕುಕ್ ಬೇಕಾಗಿದ್ದಾರೆ

ದುಬೈ: ದುಬೈನಲ್ಲಿ ಸೌತ್ ಇಂಡಿಯನ್ ಕುಕ್ ಬೇಕಾಗಿದ್ದಾರೆ. ಊಟ ಹಾಗೂ ವಸತಿ ಸೌಲಭ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: 📞+91 8105732895 📞 +971 52 358 9052
ಧರ್ಮಸ್ಥಳ ಪ್ರಕರಣದಲ್ಲಿ ಅಪಪ್ರಚಾರ, ಸುಳ್ಳು ಹೇಳಿದವರ ವಿರುದ್ಧ ಕ್ರಮ; ಡಿ.ಕೆ.ಶಿವಕುಮಾರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಶುಕ್ರವಾರ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಧರ್ಮಸ್ಥಳದ ಪರ ಅಥವಾ ವಿರುದ್ಧದ ವಿಚಾರವಲ್ಲ. ಎಲ್ಲ ಪ್ರಕ್ರಿಯೆ ನ್ಯಾಯಬದ್ಧವಾಗಿ ನಡೆಯಬೇಕು. ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧೆ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ ಮತ್ತು ಆತ್ಮವಿಶ್ವಾಸ ಇದೆ. ಈ ಪ್ರಕರಣದಲ್ಲಿ ಅಪಪ್ರಚಾರ ಮಾಡಿದವರು ಹಾಗೂ ಸುಳ್ಳು […]
ಧರ್ಮಸ್ಥಳ: ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಪೋಸ್ಟ್; ಆರೋಪಿ ಬಂಧನ

ಚಿಕ್ಕಮಗಳೂರು: ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಮಾಸ್ಕ್ ಮ್ಯಾನ್ ದೂರು ನೀಡಿದ್ದು ಇದರ ಬೆನ್ನಲ್ಲೇ ಅಸ್ಥಿಪಂಜರ ಶೋಧ ಕಾರ್ಯಾಚರಣೆಯೂ ನಡೆಯುತ್ತಿದೆ. ಇದರ ಮಧ್ಯೆ ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ಅಜ್ಜಂಪುರ ಠಾಣೆ ಪೊಲೀಸರು ಹೊಸಹಳ್ಳಿಯ ಉಮೇಶ್ ಎಂಬಾತನನ್ನು ಬಂಧಿಸಿದ್ದಾರೆ. ಉಮೇಶ್ ಗೌಡ್ಲಾರ್ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಜೈನ ಸಮಾಜದ ಹೆಣ್ಣು ಮಕ್ಕಳ ಕುರಿತು ಅಶ್ಲೀಲ ಕಾಮೆಂಟ್ ಹಾಕಿದ್ದನು. ಈ ಬಗ್ಗೆ ಕಳಸ ಮೂಲದ […]
ಮಣಿಪಾಲ ಜ್ಞಾನಸುಧಾ : ಸ್ವಾತಂತ್ರ್ಯ ದಿನಾಚರಣೆ; ದೇವ ಭಕ್ತಿಗೂ ಮಿಗಿಲು ದೇಶಭಕ್ತಿ : ಮುನಿರಾಜ ರೆಂಜಾಳ

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಹಾಗೂಮಣಿಪಾಲ ಪ್ರಿ ಯುನಿವರ್ಸಿಟಿ ಕಾಲೇಜುಗಳ ಸಂಯಕ್ತಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನುಆಚರಿಸಲಾಯಿತು. ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸಂಚಾಲಕರಾದ ಶ್ರೀ ಪ್ರಕಾಶ್ ಶೆಟ್ಟಿಯವರುಧ್ವಜಾರೋಹಣಗೈದರು. ಸ್ವಾತಂತ್ರ್ಯೋತ್ಸವದ ಶುಭಸಂದರ್ಭದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತ ಶ್ರೀಮುನಿರಾಜ ರೆಂಜಾಳ ಅವರು ಸ್ವಾತಂತ್ರ್ಯದ ನೆಲೆ ಬೆಲೆವಿಷಯದ ಕುರಿತು ಮಾತನಾಡಿದರು. “ದೇವರಿಗೆ ಮುಖಕ್ಕೆ ನೇರವಾಗಿ ಕೈ ಮುಗಿದರೆ ಆಕಾಶದೆತ್ತರಕ್ಕೆ ಹಾರುವ ತ್ರಿವರ್ಣ ಧ್ವಜಕ್ಕೆ ತಲೆ ಎತ್ತಿ ಸೆಲ್ಯೂಟ್ ಮಾಡುವ ಮೂಲಕ ‘ದೇವ ಭಕ್ತಿಗೂ ಮಿಗಿಲು ದೇಶಭಕ್ತಿ […]