ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಅದಿತಿ ಮೆಹೆಂದಳೆ ರಾಜ್ಯಕ್ಕೆ ಪ್ರಥಮ ರ್ಯಾಂಕ್

ಉಡುಪಿ: ಅದಿತಿ ಮೆಹೆಂದಳೆ ಅವರು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಈ ವರ್ಷದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 91.8 % ದೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ಸಂಸ್ಥಾಪಕಿ ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾಗಿದ್ದು, ಉಡುಪಿಯ ಕೇಶವ್ ಮೆಹೆಂದಳೆ ಹಾಗು ರಂಜನಾ ಇವರ ಪುತ್ರಿ ಆಗಿದ್ದಾರೆ. ಪ್ರಸ್ತುತ ಮಣಿಪಾಲದ ಮಾಹೆ ಅಡಿಯಲ್ಲಿ ಬರುವ ಮಣಿಪಾಲ ಇನ್ಸ್ಟಿಟ್ಯೂಟ್ ಓಫ್ ಕಮ್ಯುನಿಕೇಷನ್ ಇಲ್ಲಿ ಬ್ಯಾಚುಲರ್ ಇನ್ ಮೀಡಿಯಾ […]
ಉಡುಪಿ:ಬದ್ರಿಯಾ ಜುಮುಅ ಮಸ್ಜಿದ್ (ರಿ) ಮಲ್ಲಾರು- ಮಜೂರು ಇವರ ಆಶ್ರಯದಲ್ಲಿ ಮರ್ಹಬ ಯಾ ಶಹ್ ರ ರಬಿಲ್ ವಾರ್ಷಿಕ ಸ್ವಲಾತ್ ಮತ್ತು ಪ್ರಭಾಷಣಾ ಕಾರ್ಯಕ್ರಮ

ಉಡುಪಿ:ಬದ್ರಿಯಾ ಜುಮುಅ ಮಸ್ಜಿದ್ (ರಿ) ಮಲ್ಲಾರು-ಮಜೂರು ಇವರ ಆಶ್ರಯದಲ್ಲಿ ಮರ್ಹಬ ಯಾ ಶಹ್ ರ ರಬಿಲ್ ವಾರ್ಷಿಕ ಸ್ವಲಾತ್ ಮತ್ತು ಪ್ರಭಾಷಣಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತ ಧಾರ್ಮಿಕ ಭಾಷಣಗಾರರಾದ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ರವರಿಂದ ಪ್ರೌಡೋಜ್ವಲವಾದ ಪ್ರಭಾಷಣದ ವೇದಿಕೆ ಸಮಾರಂಭದಲ್ಲಿ ಬಿ.ಜೆ.ಎo ಮಸೀದಿಯ ಅಧ್ಯಕ್ಷರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರ ನೇತೃತ್ವದಲ್ಲಿ ಮಸೀದಿ ಸಭಾಂಗಣದಲ್ಲಿ ನಡೆಯಿತು. ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮಾತನಾಡಿ ಈ ಮಸೀದಿಯ ಅಧ್ಯಕ್ಷರಾದ ಡಾ.ಫಾರುಕ್ ಚಂದ್ರನಗರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಕೆಲಸಗಳು ಉತ್ತಮ ರೀತಿಯಲ್ಲಿ […]
ಗೌರಿ ಗಣೇಶ ಹಬ್ಬಕ್ಕೆ ತವರುಮನೆಯಿಂದ ಆಹ್ವಾನ ಬಂದಿಲ್ಲವೆಂದು ಗೃಹಿಣಿ ಆತ್ಮಹತ್ಯೆ!

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಒಂದು ಮನೆಯಲ್ಲಿ ಶೋಕ ಆವರಿಸಿದೆ. ಗೌರಿ ಗಣೇಶ ಹಬ್ಬಕ್ಕೆ ತನ್ನ ತವರು ಮನೆಯವರು ಕರೆಯಲಿಲ್ಲ ಎನ್ನುವ ಕಾರಣಕ್ಕೆ ಮನನೊಂದಿದ್ದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೀವನದಲ್ಲಿ ಭಾರೀ ಜಿಗುಪ್ಸೆಗೊಂಡಿದ್ದ ಗೃಹಿಣಿ, ಹಬ್ಬಕ್ಕೆ ತವರು ಮನೆಗೆ ಹೋಗಿ ಸಂಭ್ರಮ ಪಡುವ ಖುಷಿಯಲ್ಲಿದ್ದಳು. ಆದರೆ, ತವರು ಮನೆಯಿಂದ ಯಾವುದೇ ಆಹ್ವಾನ ಬರದ ಕಾರಣ ಮನನೊಂದು ಈ ಕೃತ್ಯ ಎಸಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು 26 ವರ್ಷದ ರಶ್ಮಿ ಎಂದು ಗುರುತಿಸಲಾಗಿದೆ. ಮಧುವನಹಳ್ಳಿ […]
ನಾಳೆ (ಅಗಸ್ಟ್ 28) ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆ.28ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಐಟಿಐ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ಕಾಲೇಜಿಗೆ ರಜೆ ಘೋಷಿಸಿರುವುದಿಲ್ಲ.
ಡಿಸ್ಟ್ರಿಬ್ಯೂಟರ್ಸ್ ಬೇಕಾಗಿದ್ದಾರೆ

ಉಡುಪಿ:ಭಟ್ಕಳದಲ್ಲಿ ಡಿಸ್ಟ್ರಿಬ್ಯೂಟರ್ಸ್ ಬೇಕಾಗಿದ್ದಾರೆ. ಅಗತ್ಯತೆಗಳು: ▪️200-300sqft ಗೋಡಾನ್▪️ಕಮರ್ಷಿಯಲ್ ವೆಹಿಕಲ್ & ಡ್ರೈವರ್▪️ವಿತರಣಾ ಚಾನಲ್ ರಚಿಸುವ ಸಾಮರ್ಥ್ಯ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9731621800