ಕೊಲ್ಲೂರು: ಬೆಂಗಳೂರು ಮೂಲದ ಮಹಿಳೆ ನಾಪತ್ತೆ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಮಹಿಳೆಯ ಹುಡುಕಾಟ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ನಾಪತ್ತೆಯಾದವರನ್ನು ಬೆಂಗಳೂರಿನ ವಸುಧಾ(46) ಎಂದು ಗುರುತಿಸಲಾಗಿದೆ. ಇವರು ಆಗಾಗ್ಗೆ ಕೊಲ್ಲೂರು ದೇವಳಕ್ಕೆ ಬರುತ್ತಿದ್ದು, ಆ.27ರಂದು ದೇವಸ್ಥಾನಕ್ಕೆ ಆಗಮಿಸಿದ ವಸುಧಾ, ಅಕಸ್ಮಿಕವಾಗಿ ಸೌರ್ಪಣಿಕ ನದಿಯಲ್ಲಿ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ […]
ಜಗದ್ಗುರು ಮಧ್ವಾಚಾರ್ಯರಿಗೆ ಭಾರತ ಸರಕಾರದಿಂದ ವಿಶೇಷ ಗೌರವ- ಪುತ್ತಿಗೆ ಶ್ರೀ ಸಂತಸ

ಉಡುಪಿ: ಭಾರತವು ಧರ್ಮ ಮತ್ತು ಆಧ್ಯಾತ್ಮಿಕತೆಗೆ ಬಹಳ ಪ್ರಸಿದ್ಧವಾದ ದೇಶವಾಗಿದೆ. ಜಗತ್ತಿನಲ್ಲಿ ವಿಶ್ವಗುರುವಾಗಿ ಕಂಗೊಳಿಸುತ್ತಿರುವ ದೇಶವಾಗಿದೆ. ಈ ದೇಶದಲ್ಲಿ ಅನೇಕ ದಾರ್ಶನಿಕರು ಅವಾತರವನ್ನು ಎತ್ತಿದ್ದಾರೆ. ಅದರಲ್ಲಿ ಮಧ್ವಾಚಾರ್ಯರು ಪ್ರಮುಖರಾಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ಮಧ್ವಾಚಾರ್ಯರ ಸಿದ್ದಾಂತ ಜಗತ್ತ್ ಮಾನ್ಯವಾದ ಸಿದ್ಧಾಂತವಾಗಿದೆ. ವೇದಾಂತಗಳಲ್ಲಿ ಅತ್ಯಂತ ಪರಿಷ್ಕೃತ, ನಿಷ್ಕೃಷ್ಟವಾದಂತಹ ತತ್ವಶಾಸ್ತ್ರವೆಂದರೆ ಅದು ದ್ವೈತ ಸಿದ್ದಾಂತ. ಅಂತಹ ದ್ವೈತ ಸಿದ್ಧಾಂತವನ್ನು ಪ್ರತಿಷ್ಠಾಪನೆ ಮಾಡಿದವರು ಜಗದ್ಗುರು ಮಧ್ವಾಚಾರ್ಯರರು. ಈ ದ್ವೈತ ಸಿದ್ಧಾಂತವನ್ನು ಒಂದು ದೇಶದಲ್ಲಿ ವಿಶ್ವವಿಖ್ಯಾತವೆಂದು ಕರೆದಿದ್ದಾರೆ. […]
ಉಡುಪಿ:ಗಣೇಶ ಚತುರ್ಥಿಯ ಪ್ರಯುಕ್ತ 8ನೇ ವರ್ಷದ “ಹುಲಿವೇಷ ಕುಣಿತ 2025”

ಬ್ರಹ್ಮಾವರ:ಫ್ರೆಂಡ್ಸ್ ವಾರಂಬಳ್ಳಿ ಇವರ ಆಶ್ರಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ 8ನೇ ವರ್ಷದ ಹುಲಿವೇಷ ಕುಣಿತ 2025 ಕಾರ್ಯಕ್ರಮ ನಡೆಯಲಿದೆ. ಇಂದು(ಆ.30) ಸಂಜೆ 6:00 ಗಂಟೆಗೆ ಊದು ಪೂಜೆ ಮತ್ತು ನಾಳೆ (ಆ.31)ಬೆಳಿಗ್ಗೆ 9:00 ಗಂಟೆಗೆ ಲೋಬಾನ ಸೇವೆಯು ಇಂದಿರಾನಗರ ಅಂಗನವಾಡಿ ಮೈದಾನ, ಬ್ರಹ್ಮಾವರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪ್ರತಾಪ್ ಸಿಂಹ, ಕೋಟ ಶ್ರೀನಿವಾಸ ಪೂಜಾರಿ, ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮದ್ವರಾಜ್, ಯಶ್ ಪಾಲ್ ಆನಂದ ಸುವರ್ಣ, ಡಾ.ಎಂ. ಅಣ್ಣಯ್ಯ ಕುಲಾಲ್, ರತನ್ ರಮೇಶ್ ಪೂಜಾರಿ, ಶ್ರೀಮತಿ […]
ಮಂಗಳೂರು: ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿ ತಂದೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ – ನ್ಯಾಯಾಲಯ ತೀರ್ಪು

ಮಂಗಳೂರು: ಮೂರೂವರೆ ವರ್ಷ ಪ್ರಾಯದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆಯ ಮೇಲಿನ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಫ್ಸಿ-2 (ಪೊಕ್ಕೊ)ನ ನ್ಯಾಯಾಧೀಶಕರು 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಮೂಲತಃ ರಾಣೆಬೆನ್ನೂರು ಬೈಲೂರಿನ ಪ್ರಸಕ್ತ ಬಜ್ಜೆಯ ನಿವಾಸಿಯಾಗಿರುವ 34 ವರ್ಷ ಪ್ರಾಯದ ವ್ಯಕ್ತಿ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. 2024ರ ಡಿ.18ರಂದು ಆರೋಪಿ ತಂದೆಯು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ […]
ಅತೀಯಾದ ವಾಯುಮಾಲಿನ್ಯದಿಂದ ನಮ್ಮ ಜೀವಿತಾವಧಿಯ 3.5 ವರ್ಷ ಇಳಿಕೆ: ಅಧ್ಯಯನ ಬಿಚ್ಚಿಟ್ಟ ಭಯಾನಕ ಸತ್ಯ!

ನವದೆಹಲಿ: ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಬಹುದೊಡ್ಡ ಸಮಸ್ಯೆ ವಾಯು ಮಾಲಿನ್ಯವು ಭಾರತದಲ್ಲಿ ಮನುಷ್ಯರ ಸರಾಸರಿ ಜೀವಿತಾವಧಿಯನ್ನು ಮೂರೂವರೆ ವರ್ಷಗಳಷ್ಟು ಕಡಿಮೆ ಮಾಡುತ್ತಿದೆ, ವಾಯುಮಾಲಿನ್ಯದಿಂದ ಉಂಟಾಗುವ ತೊಂದರೆ ಮಕ್ಕಳು ಮತ್ತು ತಾಯಿಯ ಅಪೌಷ್ಟಿಕತೆಯ ಪರಿಣಾಮಕ್ಕಿಂತ ಸುಮಾರು ಎರಡು ಪಟ್ಟು ಮತ್ತು ಅಸುರಕ್ಷಿತ ನೀರು, ನೈರ್ಮಲ್ಯ ಸಮಸ್ಯೆಯಿಂದ ಐದು ಪಟ್ಟು ಹೆಚ್ಚು ಎಂದು ಚಿಕಾಗೋ ವಿಶ್ವವಿದ್ಯಾಲಯದ (EPIC) ಎನರ್ಜಿ ಪಾಲಿಸಿ ಇನ್ಸಿಟ್ಯೂಟ್ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಮಕ್ಕಳು ಮತ್ತು ತಾಯಿಯ ಅಪೌಷ್ಟಿಕತೆಯಿಂದ ಮನುಷ್ಯ ಜೀವನದ ಸರಾಸರಿ ಜೀವಿತಾವಧಿಯಲ್ಲಿ 1.6 ವರ್ಷಗಳ […]