ಬ್ರಹ್ಮಾವರ: ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮ ಬೇಕರ್ಸ್ ಮೀಟ್ ಸಂಪನ್ನ

ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘ ಹಾಗೂ ಇಂಡಿಯನ್‌ ಬೇಕರಿ ಫೆಡರೇಶನ್‌ ಸಹಭಾಗಿತ್ವದಲ್ಲಿ ಸೆ. 10ರಂದು ಬ್ರಹ್ಮಾವರದ ಮದರ್‌ ಪ್ಯಾಲೇಸ್‌ ಸಭಾಂಗಣದಲ್ಲಿ ಜರಗಿದ “ಬೇಕರ್ಸ್‌ ಮೀಟ್‌’ ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮವನ್ನು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತಾಧಿಕಾರಿ ಡಾ. ಪ್ರೇಮಾನಂದ ಕೆ. ಉದ್ಘಾಟಿಸಿದರು. ಬೇಕರಿ ಉದ್ಯಮವನ್ನು ಮತ್ತಷ್ಟು ಉನ್ನತಿಗೇರಿಸುವ ನಿಟ್ಟಿನಲ್ಲಿ ಸರಕಾರ ಹೊಸ ಕಾನೂನುಮತ್ತು ನಿಯಮಗಳನ್ನು ಜಾರಿಗೆ ತರುತ್ತಿದ್ದು ಅದನ್ನು ಪಾಲನೆ ಮಾಡುವುದು ಅನಿವಾರ್ಯವಾಗಿದೆ. ನಮ್ಮ […]

ಪಡುಕುತ್ಯಾರು ವಿಶ್ವಕರ್ಮ ಸಮಾಜದ ಅಧಿಕೃತ ಧ್ವಜ ಅನಾವರಣ

ಕಾಪು: ಸಮಾಜದ ಎಲ್ಲಾ ದೇವಸ್ಥಾನಗಳ ಧರ್ಮದರ್ಶಿಗಳು, ವಿದ್ವಾಂಸರು, ವೈದಿಕ ಮುಖಂಡರು, ಸಂಘಟನೆಯ ಮುಖಂಡರುಗಳು ಒಮ್ಮತದ ಅಭಿಪ್ರಾಯದೊಂದಿಗೆ ವಿಶ್ವಕರ್ಮ ಧ್ವಜ ಮೂಡಿ ಬಂದಿರುವುದು ಸಂತಸ ತಂದಿದೆ. ವಿಶ್ವಕರ್ಮ ಧ್ವಜವು ಸಮಾಜದ ಏಕತೆಯ ದ್ಯೋತಕವಾಗಬೇಕು ಎಂದು ಶ್ರೀಮತ್ ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ರವಿವಾರ ಪಡುಕುತ್ಯಾರು ಶ್ರೀ ಆನೆಗುಂದಿ ಮಹಾಸಂಸ್ಥಾನದಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷರಿಗೆ ವಿಶ್ವಕರ್ಮ ಧ್ವಜ ಹಸ್ತಾಂತರಿಸಿ, ಆಶೀರ್ವಚನ ನೀಡಿದರು. ಮುಂದಿನ ವಿಶ್ವಕರ್ಮ ಮಹೋತ್ಸವದ ದಿನದಂದು ಮಹಾಸಂಸ್ಥಾನದ […]

ಕಾಸರಗೋಡು-ಮಂಗಳೂರು ಮಾರ್ಗದಲ್ಲಿ “ವಂದೇ ಭಾರತ್” ಸೂಚನಾ ಫಲಕಗಳ ಅಳವಡಿಕೆ

ಕಣ್ಣೂರು: ಕೇರಳದಲ್ಲಿ ಓಡಲಿರುವ ಸಂಭವನೀಯ ಎರಡನೇ ವಂದೇ ಭಾರತ್ ರೈಲಿನ ಅಂತಿಮ ಮಾರ್ಗವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದಾಗ್ಯೂ, ಮಂಗಳೂರು-ಕಾಸರಗೋಡು ವಿಭಾಗದ ನಿಲ್ದಾಣಗಳಲ್ಲಿ “ವಂದೇ ಭಾರತ್” ಎಂದು ಸೂಚಿಸುವ ಫಲಕಗಳನ್ನು ಅಳವಡಿಸಲಾಗಿದ್ದು ಇದು ಈ ಭಾಗದಲ್ಲಿ ಇಂಜಿನ್ ಅನ್ನು ನಿಲ್ಲಿಸಲು ಲೋಕೋ ಪೈಲಟ್‌ಗಳಿಗೆ ಸೂಚನೆಯಾಗಿದೆ. ಈ ಅಳವಡಿಕೆಯು ವಂದೇ ಭಾರತ್ ರೈಲು ಕಾಸರಗೋಡು-ಮಂಗಳೂರು ಮಾರ್ಗವನ್ನು ಒಳಗೊಳ್ಳುತ್ತದೆ ಎಂದು ಸೂಚಿಸುತ್ತದೆ. ಈಗಿರುವ ರೈಲು ತಿರುವನಂತಪುರ-ಕಾಸರಗೋಡು ಮಾರ್ಗದಲ್ಲಿ ಸಂಚರಿಸುತ್ತದೆ. ಮಂಗಳೂರು-ತಿರುವನಂತಪುರಂ, ಮಂಗಳೂರು-ಕೊಟ್ಟಾಯಂ, ಮಂಗಳೂರು-ಎರ್ನಾಕುಲಂ, ಮತ್ತು ಮಂಗಳೂರು-ಕೊಯಂಬತ್ತೂರು ಇವು ಕೇರಳದಲ್ಲಿ ಎರಡನೇ […]

ಗೋವರ್ಧನ ಕೃಷ್ಣನಿಗೆ ಬೆಳ್ಳಿ ರಥ ಸಮರ್ಪಣೆ

ಬೆಂಗಳೂರು: ಶ್ರೀಕೃಷ್ಣ ಜಯಂತಿ ಪರ್ವಕಾಲದಲ್ಲಿ ಪುತ್ತಿಗೆ ಮಠದ ಶಾಖಾಮಠವಾದ ಗೋವರ್ಧನ ಕ್ಷೇತ್ರದ ಶ್ರೀ ಗೋವರ್ಧನ ಕೃಷ್ಣನಿಗೆ  ರಜತ ರಥ ಸಮರ್ಪಿಸಲಾಯಿತು. ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಭಂಡಾರಕೇರಿ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ ಸಂದರ್ಭದಲ್ಲಿ ನೂತನ ರಜತ ರಥ ಸಮರ್ಪಿಸಲಾಯಿತು. ಬಳಿಕ ವೈಭವದ ಮೊಸರು ಕುಡಿಕೆ ಉತ್ಸವ ಸಂಪನ್ನಗೊಂಡಿತು.

ರೈತರಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮ

ಉಡುಪಿ: ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಜೇನು ಸಾಕಾಣಿಕೆ ಯೋಜನೆ ಹಾಗೂ ರಾಜ್ಯವಲಯ ಮಧುವನ ಮತ್ತು ಜೇನು ಸಾಕಾಣೆ ಯೋಜನೆಯಡಿ ಜೇನು ಕೃಷಿ ಪ್ರೋತ್ಸಾಹಕ್ಕಾಗಿ ಉಡುಪಿ ತಾಲೂಕಿನ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಸದರಿ ತರಬೇತಿ ಕಾರ್ಯಕ್ರಮಕ್ಕೆ ಆಸಕ್ತ ರೈತರು ತಮ್ಮ ಹೆಸರನ್ನು ಸೆಪ್ಟಂಬರ್ 16 ರೊಳಗೆ ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ: 8095991105, 9008284192 ಗೆ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.