ಗೋವರ್ಧನ ಕೃಷ್ಣನಿಗೆ ಬೆಳ್ಳಿ ರಥ ಸಮರ್ಪಣೆ

ಬೆಂಗಳೂರು: ಶ್ರೀಕೃಷ್ಣ ಜಯಂತಿ ಪರ್ವಕಾಲದಲ್ಲಿ ಪುತ್ತಿಗೆ ಮಠದ ಶಾಖಾಮಠವಾದ ಗೋವರ್ಧನ ಕ್ಷೇತ್ರದ ಶ್ರೀ ಗೋವರ್ಧನ ಕೃಷ್ಣನಿಗೆ  ರಜತ ರಥ ಸಮರ್ಪಿಸಲಾಯಿತು.

ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಭಂಡಾರಕೇರಿ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ ಸಂದರ್ಭದಲ್ಲಿ ನೂತನ ರಜತ ರಥ ಸಮರ್ಪಿಸಲಾಯಿತು.

ಬಳಿಕ ವೈಭವದ ಮೊಸರು ಕುಡಿಕೆ ಉತ್ಸವ ಸಂಪನ್ನಗೊಂಡಿತು.