ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿರುವ ಜಯರಾಮ ದೇವಾಡಿಗ; ಧನ ಸಹಾಯಕ್ಕಾಗಿ ಮನವಿ

ಉಡುಪಿ:ಕುತ್ತೆತ್ತೂರು ಗ್ರಾಮದ ಬರಿಪಟ್ಲದ ನಿವಾಸಿ ಜಯರಾಮ ದೇವಾಡಿಗ ಎಂಬವರು ಬ್ರೆನ್ ಸ್ಟೋಕ್ ನಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಅಸೌಖ್ಯದಿಂದ ಮನೆಯಲ್ಲಿಯೇ ಇದ್ದಾರೆ. ಇವರ ಚಿಕಿತ್ಸೆಗೆ ಸುಮಾರು 5 ಲಕ್ಷದವರೆಗೆ ಖರ್ಚಾಗಬಹುದೆಂದು ವೈದ್ಯರು ತಿಳಿಸಿದ್ದು, ಸಹೃದಯಿ ದಾನಿಗಳು ತಮ್ಮಿಂದಾಗುವಷ್ಟು ಧನಸಹಾಯ ಮಾಡಬೇಕಾಗಿ ವಿನಂತಿ. G pay no-9535590981 ACCOUNT NO- 520101033893787 IFSC CODE-UBIN09059 UNION BANK, BRANCH KUTHETHOOR ಸಂಪರ್ಕಿಸಿ :-ವನಿತಾ- 9901845918

ಉಡುಪಿ: ನ.15ರಂದು ಚಂಡೀಗಢ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅವರ ಅಭಿನಂದನಾ ಸಮಾರಂಭ

ಉಡುಪಿ: ಚಂಡೀಗಢ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭ ನ.15ರಂದು ಸಂಜೆ 4ಗಂಟೆಗೆ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸ್ವಾಗತ ಸಮಿತಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಟಿ. ಸತೀಶ್ ಯು ಪೈ ವಹಿಸಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ರಾಜೇಶ್ ಪ್ರಸಾದ್ ಅವರನ್ನು ಸನ್ಮಾನಿಸಿ […]

ಉಡುಪಿ:ಕಲ್ಯಾಣಪುರ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ “ಖೇಲೋ ಕ್ರಿಯೇಟಿವ್” ಕ್ರೀಡಾಕೂಟ.

ಉಡುಪಿ -ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ, ಶೈಕ್ಷಣಿಕ ಸಹಭಾಗಿತ್ವದ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ “ಖೇಲೋ ಕ್ರಿಯೇಟಿವ್” ಕ್ರೀಡಾಕೂಟ ನಡೆಸಲಾಯಿತು. ಸಭಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ, ಟಿ. ಎಂ. ಎ. ಪೈ. ಶಾಲೆಯ ಮುಖ್ಯೋಪಾಧ್ಯಾಯರಾದ,ಎಚ್.ಎನ್ ವೆಂಕಟೇಶ್ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಆದರ್ಶ ಎಂ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಮತ್ತೋರ್ವ ಅಥಿತಿಗಳಾದ ಕಾರ್ತಿಕ್ ಭಂಡಾರಿ, ಉಪ ಪ್ರಾಂಶುಪಾಲರಾದ ಜೋಯೆಲ್ ಮನೋಜ್ ಫರ್ನಾಂಡಿಸ್ ವೇದಿಕೆಯಲ್ಲಿ […]

ಭಟ್ಕಳದಲ್ಲಿ ಡಿಸ್ಟ್ರಿಬ್ಯೂಟರ್ಸ್ ಬೇಕಾಗಿದ್ದಾರೆ

ಉಡುಪಿ:ಭಟ್ಕಳದಲ್ಲಿ ಡಿಸ್ಟ್ರಿಬ್ಯೂಟರ್ಸ್ ಬೇಕಾಗಿದ್ದಾರೆ. ಅವಶ್ಯಕತೆಗಳು:🔸200-300 ಚದರ ಅಡಿ ಗೋದಾಮು ಹೊಂದಿರಬೇಕು.🔸ವಾಣಿಜ್ಯ ವಾಹನ ಮತ್ತು ಚಾಲಕರನ್ನು ಹೊಂದಿರಬೇಕು.🔸ವಿತರಣಾ ಮಾರ್ಗವನ್ನು ರಚಿಸುವ ಸಾಮರ್ಥ್ಯವಿರಬೇಕು. ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಿ: 97316 21800

ಕಾರ್ಕಳ: ನಲ್ಲೂರು ಸಮೀಪ ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ; ದನದ ಮಾಂಸ ಪತ್ತೆ!

ಕಾರ್ಕಳ: ನಲ್ಲೂರು ಹತ್ತಿರದ ತೋಟದಲ್ಲಿ ಅಕ್ರಮವಾಗಿ ದನದ ಹತ್ಯೆ ನಡೆಯುತ್ತಿದೆ ಎಂಬ ಸುಳಿವಿನ ಮೇರೆಗೆ ಹಿಂದೂ ಕಾರ್ಯಕರ್ತರ ಮಾಹಿತಿ ಆಧಾರಿಸಿ ಮಂಗಳವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದರು. ದಾಳಿಯಲ್ಲಿ ಸುಮಾರು 70 ಕೆ.ಜಿ ದನದ ಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಅಶ್ರಫ್ ಘಟನೆಯ ಬಳಿಕ ಪರಾರಿಯಾಗಿರುವುದಾಗಿ ಮೂಲಗಳು ತಿಳಿಸಿವೆ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಹಜರು ನಡೆಸುತ್ತಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳೀಯ ಹಿಂದೂ ಕಾರ್ಯಕರ್ತರ ಸುಳಿವಿನಿಂದಲೇ ಈ ಅಕ್ರಮ ಬಯಲಾಗಿರುವುದಾಗಿ ತಿಳಿದುಬಂದಿದೆ.