ಬೆಳ್ತಂಗಡಿ: ಆಮೆಗಳ ಅಕ್ರಮ ಬೇಟೆ; ನಾಲ್ವರು ಪೊಲೀಸರ ವಶಕ್ಕೆ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಫೆ.14ರಂದು ಹಮ್ಮಿಕೊಂಡಿದ್ದ ತಿಥಿಯ ಅಡುಗೆಗೆ ನದಿಯಲ್ಲಿ ಬೇಟೆಯಾಡಿದ ಆಮೆಯ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದಲ್ಲಿ ಪೊಲೀಸರು ನಾಲ್ಕು ಆಮೆ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಪೆರಡಾಲು ನಿವಾಸಿ ಮಣಿಕಂಠ, ಮಂಗಳೂರು ನಗರದ ಮೂಲ್ಕಿ ತಾಲ್ಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ, ಮೂಡುಬಿದಿರೆ ತಾಲ್ಲೂಕಿನ ಶಿರ್ತಾಡಿ ಗ್ರಾಮದ ವಿಘ್ನೇಶ್ ಮತ್ತು ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಗ್ರಾಮದ ನಿವಾಸಿ ಪ್ರಶಾಂತ್ ಆರೋಪಿಗಳು. ಅವರು ಸಂಬಂಧಿಕರಾದ ಉಜಿರೆ ಗ್ರಾಮದ […]

ಉಡುಪಿ: ‘ಸೀರೆ ಅಲಂಕಾರ – ಕುಚ್ಚು ಮೇಕಿಂಗ್’:ಫೆ.18 ರಂದು ಉಚಿತ ವರ್ಕ್‌ಶಾಪ್

ಉಡುಪಿ:ಉಡುಪಿಯಲ್ಲಿ ಸೀರೆ ಅಲಂಕಾರದಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಉಚಿತ ವರ್ಕ್‌ಶಾಪ್ ಆಯೋಜಿಸಲಾಗಿದೆ. DreamZone School of Creative Studies ವತಿಯಿಂದ ನಡೆಯುವ ಈ ಕಾರ್ಯಕ್ರಮವು ಫೆಬ್ರವರಿ 18, 2026 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ. ಮುಖ್ಯಾಂಶಗಳು: ▪ ಮನೆಯಲ್ಲೇ ಕುಚ್ಚು ಕೆಲಸವನ್ನು ಆತ್ಮವಿಶ್ವಾಸದಿಂದ ಆರಂಭಿಸುವುದು ಮತ್ತು ಸಣ್ಣ ಆರ್ಡರ್‌ಗಳನ್ನು ಮಾಡುವುದು ಕಲಿಸಲಾಗುತ್ತದೆ. ▪ ತರಬೇತಿಯಲ್ಲಿ 4 ರಿಂದ 5 ಹೊಸ ಕುಚ್ಚು ಡಿಸೈನ್‌ಗಳನ್ನು ತಯಾರಿಸಲಾಗುತ್ತದೆ. ▪ ಬೇರೆ ಬೇರೆ ಕುಚ್ಚು ಶೈಲಿಗಳು ಹಾಗೂ ಹೊಸ ಟಿಪ್ಸ್‌ಗಳನ್ನು […]

ಶಿರಸಿಯ ಮತ್ತಿಘಟ್ಟ ಫಾಲ್ಸ್‌ನಲ್ಲಿ ಮುಳುಗಿ ಮಣಿಪಾಲ ಕಾಲೇಜಿನ ವಿದ್ಯಾರ್ಥಿ ಮೃತ್ಯು.

ಕಾರವಾರ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಫಾಲ್ಸ್‌ನಲ್ಲಿ ಈಜಲು ಹೋಗಿ ಮುಳಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಫಾಲ್ಸ್‌ನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಶಿವೋಹಂ ಅನಂತ್ ತಿವಾರಿ (18), ಮಣಿಪಾಲ ಎಮ್.ಐ.ಟಿಯಲ್ಲಿ ಬಿ.ಟೆಕ್ ಎರಡನೇ ಸೆಮಿಸ್ಟರ್ ಓದುತ್ತಿದ್ದ ಎಂದು ತಿಳಿದುಬಂದಿದೆ. ಭಾನುವಾರ (ಫೆ.15) ಬೆಳಿಗ್ಗೆ 30ಕ್ಕೂ ಹೆಚ್ಚು ಜನ ಬಿ.ಟೆಕ್ ಹಾಗೂ ಜರ್ನಲಿಸಂ ವಿದ್ಯಾರ್ಥಿಗಳು ಮಣಿಪಾಲ್‌ನಿಂದ ಪ್ರವಾಸಕ್ಕೆ ಬಂದಿದ್ದರು. ಹೊನ್ನಾವರ ಹಾಗೂ ಶಿರಸಿಯ ಮತ್ತಿಘಟ್ಟ ಭಾಗಕ್ಕೆ ವಿದ್ಯಾರ್ಥಿಗಳ ತಂಡ ತೆರಳಿತ್ತು. ಈ ವೇಳೆ […]

ಎಲ್ಲ ಸಾರಿಗೆಗೂ ಶಕ್ತಿ ಸ್ಮಾರ್ಟ್ ಕಾರ್ಡ್ ಬಳಕೆಗೆ ಅವಕಾಶ.!

ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ ‘ಶಕ್ತಿ’ ಯೋಜನೆಯಡಿ ಸಂಚರಿಸುವ ಫಲಾನುಭವಿಗಳಿಗೆ ಸರ್ಕಾರ ನೀಡಲಿರುವ ಸ್ಮಾರ್ಟ್‌ಕಾರ್ಡ್‌ ಮೆಟ್ರೊ ಸಹಿತ ಬೇರೆ ಸಾರ್ವಜನಿಕ ಸಾರಿಗೆಗಳಲ್ಲಿಯೂ ಬಳಕೆಯಾಗಲಿದೆ. ಸ್ಮಾರ್ಟ್ ಕಾರ್ಡ್‌ ಅನ್ನು ಬಸ್‌ ನಿರ್ವಾಹಕರಿಗೆ ತೋರಿಸಿ ಟಿಕೆಟ್‌ ಪಡೆಯುವ ಬದಲು, ಇಟಿಎಂನಲ್ಲಿ ಸ್ವೈಪ್‌ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ ಇದಾಗಿದೆ. ‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಕೂಡಾ ಆಗಿರುತ್ತದೆ. ಇದರಲ್ಲಿ ಪ್ರಯಾಣಿಕರ ಮಾಹಿತಿ ಇರುವ ಚಿಪ್‌ ಅಳವಡಿಕೆಯಾಗಿರುತ್ತದೆ. ‘ಸ್ಮಾರ್ಟ್‌ ಚಿಪ್‌ನಲ್ಲಿ ಫಲಾನುಭವಿಗಳ ಇ–ಕೆವೈಸಿ ಮಾಡಲಾಗುತ್ತದೆ. […]

6 ಕೋಟಿ ರೂ. ವೆಚ್ಚದಲ್ಲಿ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರು: ಸಂಸದ ಕೋಟ

ಕಾರ್ಕಳ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಹಣಕಾಸು ನೆರವಿನ ಮೂಲಕ ₹6 ಕೋಟಿ ವೆಚ್ಚದಲ್ಲಿ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ತಾಲ್ಲೂಕಿನ ಕಡ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಆಯುಷ್ಮಾನ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಜನರಿಗೆ ತಲುಪಿಸಬೇಕಾದ ಹೊಣೆ ಜನಪ್ರತಿನಿಧಿಗಳಾದ ನಮ್ಮೆಲ್ಲರದ್ದು ಎಂದರು. 70 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದ ನೆರವಿನ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ […]