ಉಡುಪಿ: ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ 2026ಯಿಂದ ಹೊರೆಕಾಣಿಕೆ- ತಂಪು ಪಾನೀಯ ವಿತರಣೆ

ಉಡುಪಿ : ಶ್ರೀ ಕೃಷ್ಣಮಠದ ಇತಿಹಾಸದಲ್ಲಿ ಹಿಂದೂ-ಮುಸ್ಲಿಮರ ಸೌಹಾರ್ದತೆಯ ಬಗ್ಗೆ ಹಲವಾರು ಘಟನೆಗಳನ್ನು ನಾವು ನೀವೆಲ್ಲರೂ ಕೇಳಿರುತ್ತೇವೆ. ಪುರಾತನ ಕಾಲದಿಂದಲೂ ಶ್ರೀ ಕೃಷ್ಣ ಮಠದಲ್ಲಿ ನಡೆದು ಬರುತ್ತಿರುವ ಹಿಂದೂ-ಮುಸ್ಲಿಮರ ಸೌಹಾರ್ದತೆ ಹಾಗೂ ಐಕ್ಯತೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಹಲವಾರು ವರ್ಷಗಳಿಂದ ಪರ್ಯಾಯ ಹಾಗೂ ಇನ್ನಿತರ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದೆ.ಈ ಸಲದ ಶೀರೂರು ಮಠದ ಪರ್ಯಾಯ ಸಂದರ್ಭದಲ್ಲೂ ಸಮಿತಿ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 9 ರಂದು ನಡೆಯುವ […]

ಹೆರ್ಗ ನಾರಾಯಣ ಪ್ರಭು ನಿಧನ

ಉಡುಪಿ:ಹೆರ್ಗ ನಾರಾಯಣ ಪ್ರಭು (82 ವರ್ಷ)ರವರು ಇಂದು ನಿಧನರಾದರು. ಶ್ರೀಯುತರು ಮಣಿಪಾಲ ಎಂಐಟಿ ವರ್ಕ್ ಶಾಪ್ ನಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದರು . ಶ್ರೀಯುತರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಹೆರ್ಗ ಶ್ರೀ ಉಮಾ ಮಹೇಶ್ವರ ಯಕ್ಷಗಾನ ಮಂಡಳಿ ಶಿವಪಾಡಿಯಲ್ಲಿ ಸ್ಥಾಪಕ ಸದಸ್ಯರಾಗಿದ್ದು ಅನೇಕ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಸಮಾಜಸೇವೆಯಲ್ಲೂ ಮುಂದಿದ್ದು ಅನೇಕ ಜನರ ಅಂತ್ಯ ಸಂಸ್ಕಾರವನ್ನು ತಮ್ಮ ಮುಂದಾಳತ್ವದಲ್ಲಿ ನೆರವೇರಿಸಿದ್ದರು. ಸುಮಾರು 50 ವರ್ಷಗಳ ಕಾಲ ಗಣೇಶ ಚತುರ್ಥಿಗೆ ಆವೆ ಮಣ್ಣಿನಲ್ಲಿ […]

ಮಂಗಳೂರಿನ ಮೈಂಡ್ ಕ್ರಿಯೇಟಿವ್ ಸ್ಕೂಲ್‌ನಲ್ಲಿ ಇಂಟೀರಿಯರ್ ಡಿಸೈನರ್ ಫ್ಯಾಕಲ್ಟಿಗೆ ನೇಮಕಾತಿ

ಮಂಗಳೂರಿನ ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಪೂರ್ಣ ಸಮಯದ, ಆನ್-ಸೈಟ್ ಇಂಟೀರಿಯರ್ ಡಿಸೈನರ್ ಫ್ಯಾಕಲ್ಟಿಗೆ ನೇಮಕಾತಿ ನಡೆಯಲಿದೆ. ಪಾತ್ರ ಮತ್ತು ಜವಾಬ್ದಾರಿಗಳು: ◼ ಕಡ್ಡಾಯವಾಗಿ ಆಟೋಕ್ಯಾಡ್ ಮತ್ತು 3ಡಿಎಸ್ ಮ್ಯಾಕ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕಲಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು.◼ ಕಾಲೇಜು ಮಾರ್ಕೆಟಿಂಗ್ ಚಟುವಟಿಕೆಗಳನ್ನು ಬೆಂಬಲಿಸಬೇಕು. ಅರ್ಹತೆಗಳು: ◼ ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ, ಬಿ.ಇ. / ಬಿ.ಟೆಕ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಬಿ.ಆರ್ಕ್ ವಿದ್ಯಾರ್ಹತೆ ಹೊಂದಿರಬೇಕು. ಬಲವಾದ ವಿನ್ಯಾಸ ಹಾಗೂ ಸಾಫ್ಟ್‌ವೇರ್ ಕೌಶಲ್ಯ ಹೊಂದಿರುವ ಹೊಸ ಪದವೀಧರರು ಅರ್ಜಿ […]

ಮಂಗಳೂರು:ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಫ್ಯಾಷನ್ ಡಿಸೈನಿಂಗ್ ಬೋಧಕರ ನೇಮಕಾತಿ

ಮಂಗಳೂರು:ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಫ್ಯಾಷನ್ ಡಿಸೈನಿಂಗ್ ಬೋಧಕರ ನೇಮಕಾತಿ ನಡೆಯಲಿದೆ. ಅರ್ಹತೆಗಳು:▪ಫ್ಯಾಷನ್ ಡಿಸೈನಿಂಗ್ ನಲ್ಲಿ ಡಿಪ್ಲೊಮಾ/ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.▪ಉತ್ತಮ ಸಂವಹನ, ವಿನ್ಯಾಸ ಮತ್ತು ಸ್ಟಿಚಿಂಗ್ ಕೌಶಲ್ಯಗಳಲ್ಲಿ ಪರಿಣತಿ ಹೊಂದಿರಬೇಕು.▪ಬೋಧನೆಯ ಕಡೆಗೆ ಆಸಕ್ತಿಯ ಅಗತ್ಯವಿರಬೇಕು. ಸಂಬಳ 15 ಸಾವಿರದಿಂದ 20 ಸಾವಿರ (ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ)ನೀಡಲಾಗುವುದು. ಹಾಗೂ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಆಸಕ್ತರು ರೆಸ್ಯೂಮ್ ಕಳುಹಿಸಿ ಅಥವಾ 9448429123 ಸಂಪರ್ಕಿಸಿ.ಮೈಂಡ್ ಕ್ರಿಯೇಟಿವ್ ಸ್ಕೂಲ್,4ನೇ ಮಹಡಿ, ಸಾನು ಅರಮನೆ, ಮಂಗಳೂರು

ಕುರ್ಚಿಯಲ್ಲಿ ಕುಳಿತಿದ್ದಾಗಲೇ ದಿಢೀರ್ ಅಸ್ವಸ್ಥಗೊಂಡು ಹೋಮ್ ನರ್ಸ್ ಸಾವು

ಉಡುಪಿ: ಕುರ್ಚಿಯ ಮೇಲೆ ಕೂತಲ್ಲಿಯೇ ಹೋಮ್ ನರ್ಸೊಬ್ಬರು ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ಗರಡಿ ರಸ್ತೆಯಲ್ಲಿ ಸಂಭವಿಸಿದೆ.ಹೋಮ್ ನರ್ಸ್ ಪ್ರದೀಪ್ ಅಜ್ಜರಕಾಡು (55) ಎಂದು ಗುರುತಿಸಲಾಗಿದೆ. ಇವರು ತನ್ನ ಬಾಡಿಗೆ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಇದೇ ವೇಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಪ್ರದೀಪ್ ಅವರನ್ನು ಅಬ್ಯುಂಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿ ಪರಿಕ್ಷೀಸಿದ ವೈದ್ಯರು ಪ್ರದೀಪ್‌ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತ […]