ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ 8.08 ಕೋಟಿ ರೂ. ಲಾಭ

ಮಂಗಳೂರು: ಇಲ್ಲಿನ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರ ವಾರ್ಷಿಕ ವರದಿ, ಲೆಕ್ಕಪರಿಶೋಧಿತ ಆರ್ಥಿಕ ಪತ್ರಿಕೆಗಳು, ಅನುಪಾಲನಾ ವರದಿ, ಲಾಭಾಂಶದ ವಿಂಗಡಣೆ ಹಾಗೂ 2026-27ನೇ ಸಾಲಿನ ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿ ಸದಸ್ಯರ ಅನುಮೋದನೆ ಪಡೆಯಲಾಯಿತು. 2025-26ನೇ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಸಲು ಸಭೆ ಮಂಜೂರಾತಿ ನೀಡಿತು. ಸಾಧನೆಗೈದ ಐವರು ಶಿಲ್ಪಿಗಳಿಗೆ ಎಸ್.ಕೆ.ಜಿ.ಐ. ಪಾಲ್ಕೆ […]

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ ರೂ 2.72 ಕೋಟಿ ಲಾಭ, ಶೇ.18% ಡಿವಿಡೆಂಡ್ ಘೋಷಣೆ

ಪರ್ಕಳ: ಸೊಸೈಟಿಯ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.23 ರಂದು ಆರ್ ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಸೊಸೈಟಿಯ ಅಧ್ಯಕ್ಷರಾದ ನರಸಿಂಹ ನಾಯಕ್ ಮಣಿಪಾಲ ಇವರ ಅಧ್ಯಕ್ಷತೆಯಲ್ಲಿ ಜರಗಿತು. 2025-2026 ನೇ ಸಾಲಿನ ಅಂತ್ಯಕ್ಕೆ ಸೊಸೈಟಿಯ ಪಾಲು ಬಂಡವಾಳ ರೂ. 2.33 ಕೋಟಿ ನಿಧಿಗಳು ರೂ 16.32 ಕೋಟಿ ಠೇವಣಿ ರೂ 183.25 ಕೋಟಿ ಸಾಲ ಹೊರಬಾಕಿ ರೂ 129.75 ಕೋಟಿ ಯೊಂದಿಗೆ ರೂ 2.72 ಕೋಟಿ ನಿವ್ವಳ ಲಾಭಗಳಿಸಿ, ಲೆಕ್ಕಪರಿಶೋಧನೆಯಲ್ಲಿ “ ಏ” ಶ್ರೇಣಿಯ […]

ಚಾರ್ ಧಾಮ ಯಾತ್ರೆ ಮೂಲಕ ಸುಂದರ ಅಧ್ಯಾತ್ಮಿಕ ಅನುಭವ ನಿಮ್ಮದಾಗಬೇಕೇ? ಉಡುಪಿಯ Inspiring Travellerz ನಿಮಗಾಗಿ ತಂದಿದೆ ಚಾರ್ ಧಾಮ ಟೂರ್ ಪ್ಯಾಕೇಜ್!

ಉಡುಪಿ: ಇನ್ಸ್‌ಪೈರಿಂಗ್ ಟ್ರಾವೆಲರ್ಝ್ ವತಿಯಿಂದ 2026ನೇ ಸಾಲಿನ ಚಾರ್ ಧಾಮ ಯಾತ್ರೆ ಆಯೋಜಿಸಲಾಗಿದ್ದು, 9 ರಾತ್ರಿ ಹಾಗೂ 10 ದಿನಗಳ ಈ ಆಧ್ಯಾತ್ಮಿಕ ಪ್ರವಾಸಕ್ಕೆ ನೋಂದಣಿ ಆರಂಭಗೊಂಡಿದೆ. ಹರಿದ್ವಾರದಿಂದ ಆರಂಭವಾಗಿ ಮತ್ತೆ ಹರಿದ್ವಾರದಲ್ಲೇ ಅಂತ್ಯಗೊಳ್ಳುವ ಈ ಯಾತ್ರೆಯಲ್ಲಿ ಯಮುನೋತ್ರಿ, ಗಂಗೋತ್ರಿ, ಶ್ರೀ ಕೇದಾರನಾಥ ಹಾಗೂ ಶ್ರೀ ಬದ್ರಿನಾಥ ಸೇರಿದಂತೆ ಉತ್ತರಾಖಂಡದ ನಾಲ್ಕು ಪವಿತ್ರ ಧಾಮಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾತ್ರೆಯು ಹರಿದ್ವಾರ, ಮಸೂರಿ, ಬಾರ್ಕೋಟ್, ಉತ್ತರಕಾಶಿ, ಫಾಟಾ, ಶ್ರೀ ಕೇದಾರನಾಥ, ಪಿಪಲ್ಕೋಟಿ ಹಾಗೂ ಬದ್ರಿನಾಥ ಮಾರ್ಗವಾಗಿ ಸಾಗಲಿದೆ. […]

ಉಡುಪಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ

ಉಡುಪಿ: ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರ್ ಅವರ ಜನ್ಮದಿನಾಚರಣೆಯಾದ ಮೀಲಾದುನ್ನಬಿಯನ್ನು ಮಂಗಳವಾರ ಉಡುಪಿ ತಾಲೂಕಿನಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಉಡುಪಿಯ ನೇಜಾರು, ದೊಡ್ಡಣಗುಡ್ಡೆ, ಸಂತೋಷ್‌ನಗರ, ತೋನ್ಸೆ-ಹೂಡೆ ಸೇರಿದಂತೆ ಹಲವು ಕಡೆಗಳಲ್ಲಿ ಮೀಲಾದ್ ಮೆರವಣಿಗೆಗಳು ವಿಜೃಂಭಣೆಯಿಂದ ನಡೆದವು. ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಅದೇ ಮಸೀದಿಗಳಿಗೆ ಮರಳುವ ಮೂಲಕ ಸಮಾಪ್ತಿಗೊಂಡವು. ಮೆರವಣಿಗೆಯಲ್ಲಿ ಪ್ರವಾದಿ ಸಂದೇಶ ಸಾರುವ ಘೋಷಣೆಗಳು, ದಫ್ ಕುಣಿತ, ಸ್ಕೌಟ್ಸ್ ಹಾಗೂ ಮದ್ರಸ ವಿದ್ಯಾರ್ಥಿಗಳು ಗಮನ ಸೆಳೆದರು. ದೊಡ್ಡಣಗುಡ್ಡೆ ಜುಮಾ ಮಸೀದಿಯಿಂದ […]

ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 6ನೇ ಬಾರಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪಶಸ್ತಿ

ಉಡುಪಿ: ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ಪ್ರಗತಿ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ 2024-25ನೇ ಸಾಲಿನ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ.ಎಂ.ಎನ್. ರಾಜೇಂದ್ರ ಕುಮಾರ್ ರವರು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೀಡಿದ ಪ್ರಶಸ್ತಿಯನ್ನು ನೀಡಿ ಸಂಘದ ಅಧ್ಯಕ್ಷರಾದ ಕೆ.ನಾರಾಯಣ ಬಲ್ಲಾಳ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಇವರನ್ನು ಗೌರವಿಸಿದರು. ಸಂಘವು […]