ಪದವೀಧರ ಯುವಕನ ಹೈನ್ಯೋದ್ಯಮ, ಬದುಕೀಗ ಘಮ ಘಮ: ಉಡುಪಿಯ ಯುವ ಕೃಷಿಕನ ಸಕ್ಸಸ್ ಸ್ಟೋರಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಮುಗಿದ ಬಳಿಕ ಯುವಕರು ಉದ್ಯೋಗ ಅರಸಿ ಮಹಾನಗರಿಯತ್ತ ಮುಖ ಮಾಡೋದು ಸಾಮಾನ್ಯ ,ಆದರೆ ಇಲ್ಲೊಬ್ಬ ಯುವಕ, ಹೈನುಗಾರಿಕೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿನಿಂದ ಹಸುಗಳ ಆರೈಕೆಯಲ್ಲಿಯೇ ತೊಡಗಿಕೊಂಡು ಬದುಕಿಗೊಂದು ದಾರಿ ಕಂಡುಕೊಂಡಿದ್ದಾರೆ. ಈ ಯುವಕನ ಕತೆ ಕೇಳಿ: ಹೈನುಗಾರಿಕೆಯೇ ನನ್ನ ಬದುಕಿಗೆ ದಾರಿಯಾಗಬಲ್ಲದು ಎನ್ನುವ ಸತ್ಯ ಅರಿವಾಗುತ್ತಿದ್ದಂತೆಯೇ ಈ ಯುವಕ ಹೈನುಗಾರಿಕೆ ಶುರುಮಾಡಿಯೇ ಬಿಡುತ್ತಾರೆ. ಹೈನುಗಾರಿಕೆ ಕನಸನ್ನು ನನಸು ಮಾಡಿದ ಯುವಕನೇ ಉಡುಪಿ ಜಿಲ್ಲೆಯ ಬಾರಾಳಿ ಗ್ರಾಮದ ಪ್ರತೀಶ್ ಶೆಟ್ಟಿ . ಕೆಲಸದಲ್ಲಿ […]
ಕಾರ್ಕಳ ಕಡಾರಿಯ ರೈತ ಮಾಡಿದ ಕೈ ಪಂಪು : ತೋಟವೆಲ್ಲಾ ತಂಪು ತಂಪು

ಕಾರ್ಕಳ ತಾಲೂಕಿನ ಪುಟ್ಟದಾದ ಸುಂದರ ಊರು ಕಡಾರಿ. ಎಲ್ಲೆಲ್ಲೂ ಹಸಿರೇ ತುಂಬಿರುವ ಈ ಊರಿನ ಒಂದು ಬದಿಯಲ್ಲಿ ಹರಿಯುವ ಸ್ವರ್ಣ ನದಿ. ನೂರು ಮೀಟರ್ ದೂರದಲ್ಲಿ ಕಡಾರಿ ಸೇತುವೆ, ಅದರ ಕೆಳಭಾಗದಲ್ಲಿ ಸ್ವರ್ಣೆಗೆ ಕಟ್ಟಿದ ಕಿಂಡಿ ಅಣೆಕಟ್ಟು. ಅಲ್ಲೇ ಪಕ್ಕದಲ್ಲಿದೆ ಜಯರಾಮ್ ಪ್ರಭು ಅವರ ಸಣ್ಣ ಅಡಕೆ ತೋಟ, ಹಾಗೂ ಮನೆ. ಅವರ ತಮ್ಮ ಜಗದೀಶ್ ಪ್ರಭು ಅವರು ರೈತ ರಾಗಿದ್ದು ಕೈ ಪಂಪು ಆವಿಷ್ಕರಿಸಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಹೌದು. ಜಗದೀಶ್ ಪ್ರಭು ಅವರು ತಮ್ಮ […]
ಪ್ರಾಚೀನ ಭತ್ತದ ತಳಿಗೆ ಜೀವ ನೀಡಿದ ಕೃಷಿಕ

ಆ ದಾರಿ ಹೊಕ್ಕರೆ ಎಲ್ಲೆಲ್ಲೂ ತೋಟಗಳ ನೆರಳು, ಆ ನೆರಳಲ್ಲೇ ಸಾಗಿದರೆ ಪಚ್ಚೆ ತೆನೆಯ ಗಾಳಿ ಮೈ ಸೋಕಿ ಮನಸ್ಸಲ್ಲಿ ಅರಳಿಸುವ ಅನುಭವ ವಿಶಿಷ್ಟ. ಒಂದೆಕರೆ ಜಾಗದಲ್ಲಿ ಹರಡಿ ತೊನೆದಾಡುವ ಆ ಗದ್ದೆಯ ತೆನೆಗಳನ್ನು ನೋಡುತ್ತ ನಿಂತರೆ ಮಣ್ಣಿನ ಫಲವತ್ತತೆ, ಮುಂದೆ ಅಕ್ಕಿಯಾಗುವ ಆ ಭತ್ತದ ಪರಿಮಳ ಈಗಲೇ ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಪ್ರಾಚೀನ ಬತ್ತದ ತಳಿಯ ಮಹತ್ವ ಅರಿತವರು ಈ ಕಾಲದಲ್ಲಿ ಕಡಿಮೆಯಾದರೂ, ಪ್ರಾಚೀನ ತಳಿಯ ಮಹತ್ವ ಈ ಕಾಲದ ಮಂದಿಗೆ ಈಗೀಗ ಅರಿವಾಗುತ್ತಿರುವುದು ಸುಳ್ಳಲ್ಲ. ಆದರೆ […]