ಇವರ ಕೃಷಿ ಸಾಧನೆ ನೋಡಿದ್ರೆ ಹುಬ್ಬೇರಿಸ್ತೀರಿ,ಸಮೃದ್ಧ ಬೆಳೆ ಬೆಳೆದು ಭರ್ಜರಿ ಆದಾಯ ಗಳಿಸಿದ ರಾಮಕೃಷ್ಣ ತೆಂಡೂಲ್ಕರ್ ಕತೆ ಇದು !

ಕೃಷಿಯಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಯಶಸ್ಸು ಕಂಡ ಈ ಕೃಷಿಕನ ಸಾಹಸವನ್ನು ಕೇಳುತ್ತಿದ್ದರೆ ಕೃಷಿ ಮಾಡಬೇಕು ಎನ್ನುವವರಿಗೆ  ಒಂದು ಸ್ಪೂರ್ತಿಯಾಗುತ್ತದೆ. ಇವರ ಹೆಸರು ರಾಮಕೃಷ್ಣ ತೆಂಡೂಲ್ಕರ್, ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಪ್ರಗತಿ ಪರ ಕೃಷಿಕ. ತಮ್ಮ ತೋಟದಲ್ಲಿ ಅಡಿಕೆ ತೆಂಗು, ಬಾಳೆ ಕೃಷಿ ಜೊತೆಗೆ ಹೈನುಗಾರಿಕೆ, ಹಲಸು, ಕೊಕ್ಕೊ, ಗೇರು,ಜೇನು ಅನಾನಸು ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡು ಯಶಸ್ವಿಯಾದವರು ರಾಮಕೃಷ್ಣರು. ಸುಮಾರು 38 ವರ್ಷಗಳಿಂದ ಕೃಷಿ ಕ್ಷೇತ್ರದಲ್ಲೇ ತೊಡಗಿಸಿಕೊಂಡ ಇವರು ಅದರಲ್ಲೇ ಬೇಕಾದಷ್ಟು […]

ಕೃಷಿಯಲ್ಲೇ ಬದುಕು ಕಟ್ಟಿಕೊಂಡ ಕಾರ್ಕಳದ ಮುಂಡ್ಲಿಯ ಕೃಷಿಕ ಮಾಧವ ಗೌಡರ ಸಾಧನೆಯ ಕತೆ ಒಮ್ಮೆ ಕೇಳಿ!

ಕೃಷಿಯಲ್ಲಿ ವಿನೂತನವಾದ ಕೃಷಿ ವಿಧಾನವನ್ನು ಬಳಸಿಕೊಂಡು ಇಳುವರಿ ಪಡೆಯುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿಯ ಕೃಷಿಕ ಮಾಧವ ಗೌಡ. ಅಡಿಕೆ, ಬಾಳೆ, ಕರಿಮೆಣಸು, ಭತ್ತ, ತೆಂಗು, ಸುವರ್ಣ ಗೆಡ್ಡೆ  ಮೊದಲಾದ ಬೆಳೆಗಳನ್ನು ಬೆಳೆಸುತ್ತಲೇ ಕೃಷಿಯಲ್ಲೇ ಬದುಕು ಕಟ್ಟಿಕೊಂಡವರು  ಮಾಧವ ಗೌಡರು. ಗೌಡರಿಗೆ ಸುಮರು ಎಂಟುವರೆ ಎಕರೆ ಜಾಗವಿದೆ. ಆ ಜಾಗವನ್ನು ಕ್ರಮವಾಗಿ ಬಳಸಿಕೊಂಡು ಕೃಷಿ ಮಾಡಿದ್ದಾರೆ. ಮಿಶ್ರ ಬೆಳೆಗೆ ಗೌಡರು ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತಿದ್ದು ಕ್ಯಾವೆಂಡಿಷ್ ಬಾಳೆ, ಕಾಳುಮೆಣಸು, ಸುವರ್ಣ ಗೆಡ್ಡೆ ಕೃಷಿಯನ್ನು […]

ಸಾವಯವ ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸ್ತಾರೆ ಶಿರ್ಲಾಲಿನ ಈ ಪ್ರಗತಿಪರ ಕೃಷಿಕ: ಕೃಷಿ ಆಸಕ್ತರೇ ಒಮ್ಮೆ ಇವರ ಕತೆ ಕೇಳಿ!

ಬೆಳೆಗಳಿಗೆ ಬೆಲೆ ಇಲ್ಲ, ಮಾರುಕಟ್ಟೆ ಇಲ್ಲ ಎನ್ನುವ ನಾನಾ ಕಾರಣಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಸಹಜ. ಆದರೆ ಬಾಲ್ಯದ ಕೃಷಿ ಒಲವಿನಿಂದ ತೋಟಗಾರಿಕೆ ಮಾಡುತ್ತ, ಮಣ್ಣಿನೊಂದಿಗೆ ಬೆರೆಯುತ್ತ ಬೆಳೆದ ಯಶಸ್ವಿ ಪ್ರಗತಿಪರ ಕೃಷಿಕರೊಬ್ಬರ ಯಶೋಗಾಥೆ ಇಲ್ಲಿದೆ. ಇವರ ಹೆಸರು ಅಶ್ವಥ್ ನಾರಾಯಣ, ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಕೃಷಿಕರಿವರು. ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಹದಿನೆಂಟು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಈ ರೈತನ ಸಾಹಸ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ ಎಂದರೆ ನೀವು ನಂಬಲೇಬೇಕು. ♦ಬದುಕು ಕೊಟ್ಟ […]

ಹೂವಿನ ಬೆಳೆಗಾರರಿಗೆ ನಷ್ಠ ಪರಿಹಾರ: ಮೇ 28 ರೊಳಗೆ ಅರ್ಜಿ ಸಲ್ಲಿಸಿ

ಉಡುಪಿ ಮೇ 15: ಲಾಕ್ ಡಾನ್ ನಿಂದ ನಷ್ಟ ಅನುಭವಿಸಿದ  ಹೂವಿನ ಬೆಳೆಗಾರರಿಗೆ ರೂ.25000.00 ಪ್ರತಿ ಹೇಕ್ಟರಗೆ, ಗರಿಷ್ಟ 1 ಹೇಕ್ಟರ್ ಮಾರ್ಗಸೂಚಿಯಂತೆ ಸರ್ಕಾರ ಪರಿಹಾರ ಘೋಷಿಸಿದ್ದು, 2019-20 ನೇ ಸಾಲಿನ ಬೆಳೆ ಸಮೀಕ್ಷೆ ಆಧಾರದಲ್ಲಿ ಪರಿಹಾರ ಪಾವತಿ ಮಾಡಲಾಗುವುದು. ರೈತರು ಬೆಳೆದಿರುವ ಬಹು ವಾರ್ಷಿಕ ಪುಷ್ಪ ಬೆಳೆ  2019-20 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ನಮೂದಿದಾಗಿರುವ ಬಗ್ಗೆ ಹಾಗೂ ವಾರ್ಷಿಕ ಪುಷ್ಪ ಬೆಳೆಗಳು 2019-20 ನೇ ಸಾಲಿನ ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ […]

ಅಡಿಕೆಯಲ್ಲಿ ಸಿಂಗಾರ ಒಣಗುವ ರೋಗ ಮತ್ತು ಕಾಯಿ ಉದುರುವಿಕೆಯನ್ನು ನಿಯಂತ್ರಿಸುವ ಕ್ರಮಗಳು

ಉಡುಪಿ ಮೇ 12: ಅಡಿಕೆಯಲ್ಲಿ ಸಣ್ಣ ಕಾಯಿಗಳು ಉದುರುವುದು ಸಾಮಾನ್ಯವಾಗಿ ಕಾಣುತ್ತಿದ್ದು, ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. 1) ಸರಿಯಾದ ಪ್ರಮಾಣದಲ್ಲಿ ಅಡಿಕೆ ಮರಗಳಿಗೆ ನೀರನ್ನು ಒದಗಿಸುವುದು: ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಮಾರ್ಚ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಗಿಡಕ್ಕೆ, 15ರಿಂದ 20 ಲೀಟರ್ ನೀರನ್ನು ಹನಿ ನೀರಾವರಿ ಮುಖಾಂತರ ನೀಡಬೇಕಾಗುತ್ತದೆ. ಬುಡದಲ್ಲಿ ತೇವಾಂಶ ಕಡಿಮೆಯಾದಾಗ ಹರಳುಗಳು ಉದುರುವುದು ಸಾಮಾನ್ಯ. 2) ಸಮಗ್ರ ಪೋಷಕಾಂಶ ಮತ್ತು ಹುಳಿ ಮಣ್ಣು ನಿರ್ವಹಣೆ: ಮಣ್ಣಿನ ಪರೀಕ್ಷೆಯ ಅನುಗುಣವಾಗಿ ಶಿಫಾರಸ್ಸು […]