ಅ 5 ರಂದು ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ
ಉಡುಪಿ: ಭಾವಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಹೋತ್ಸವವನ್ನು ವೈಶಿಷ್ಟ್ಯ ಪೂರ್ಣ ಹಾಗೂ ಪರಿಸರ ಪೂರಕವಾಗಿ ನಡೆಸುವ ಸಲುವಾಗಿ ಪೂರ್ವಭಾವಿ ಸಮಾಲೋಚನಾ ಸಭೆಯು ಅ 5 ರಂದು ಸಾಯಂಕಾಲ 4.30 ಗಂಟೆಗೆ ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನ ಮಿನಿ ಹಾಲಿನಲ್ಲಿ ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಸಭೆಗೆ ಮಠದ ಶಿಷ್ಯರು,ಅಭಿಮಾನಿಗಳು,ಭಕ್ತಾಭಿಮಾನಿಗಳು ಆಗಮಿಸಿ ತಮ್ಮ ಸೂಕ್ತ ಸಲಹೆ ಸೂಚನೆಯನ್ನು ನೀಡಿ ಪರ್ಯಾಯೋತ್ಸವ […]
ಶ್ರೀಕೃಷ್ಣಮುಖ್ಯಪ್ರಾಣ”ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ,ಸಾ೦ಸ್ಕೃತಿಕ ಸ೦ಘ: ಲಾ೦ಛನ ಅನಾವರಣ

ಉಡುಪಿ: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕುಣಿಬೆ೦ಚಿ ಗ್ರಾಮದಲ್ಲಿ ಇದೇ ತಿ೦ಗಳ ಅಕ್ಟೋಬರ್ 20ರ೦ದು ಉಡುಪಿಯ ಪೇಜಾವರ ಮಠಾಧೀಶರಿ೦ದ ಉದ್ಘಾಟನೆಗೊಳ್ಳಲಿರುವ “ಶ್ರೀಕೃಷ್ಣಮುಖ್ಯಪ್ರಾಣ”ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ,ಸಾ೦ಸ್ಕೃತಿಕ ಸ೦ಘ(ರಿ)ನ ಲಾ೦ಛನವನ್ನು ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಬುಧವಾರದ೦ದು ಅನಾವರಣಗೊಳಿಸಿದರು. ಸ೦ಘದ ಅಧ್ಯಕ್ಷರಾದ ಶೇಖರ ಮ೦ಗಳಗುಡ್ಡ,ಉಪಾಧ್ಯಕ್ಷರಾದ ಹನುಮ೦ತ ಬೇನಾಳ, ಸದಸ್ಯರಾದ ಮ೦ಜುನಾಥ ಮ೦ಗಳಗುಡ್ಡ, ಪ್ರದೀಪ್ ಬಿಶೆಟ್ಟಿ, ಹೊನ್ನಪ್ಪಬಿಶೆಟ್ಟಿ, ಮಠದ ಸಾರ್ವಜನಿಕ ಸ೦ಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್, ಮಧುಸೂದನ ಆಚಾರ್ಯ, ಗುರುರಾಜ ಆಚಾರ್ಯ ಹಾಗೂ […]
ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ದೇವರಿಗೆ ” ಅಂತಃಪುರದಲ್ಲಿ ರುಕ್ಮಿಣೀ ” ಅಲಂಕಾರ

ಶ್ರೀ ಕೃಷ್ಣ ಮಠದಲ್ಲಿ, ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥರು ನವರಾತ್ರಿಯ ಪ್ರಯುಕ್ತ ಶ್ರೀ ಕೃಷ್ಣ ದೇವರಿಗೆ ” ಅಂತಃಪುರದಲ್ಲಿ ರುಕ್ಮಿಣೀ ” ಅಲಂಕಾರ ಮಾಡಿದರು. ಲಕ್ಷ ತುಳಸಿ ಅರ್ಚನೆ ಮಾಡಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.
ಸೆ. 29ರಿಂದ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ಶರನವರಾತ್ರಿ

ಪಡುಬಿದ್ರೆ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಕಾರ್ಯಕ್ರಮ ಸೆ. 29ರಿಂದ ಅ. 10ರ ವರೆಗೆ ಸಂಭ್ರಮದಿಂದ ನಡೆಯಲಿದೆ. ಶರನ್ನವರಾತ್ರಿ ಪ್ರಯುಕ್ತ ಪ್ರತಿದಿನ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ನಡೆಯಲಿದೆ. ಸೆ.29 ಅದ್ಯಗಣಯಾಗ, ಚಂಡಿಕಾಯಾಗ ಸೆ.30 ಲಕ್ಷ್ಮಿ ಹೃದಯ ಹೋಮ, ಅ.1ರಿಂದ 3: ಚಂಡಿಕಾಯಾಗ, ಅ. 4 ಮತ್ತು 5ರಂದು ಶ್ರೀ ಸೂಕ್ತ ಹೋಮ, […]
ಸೆ.29ರಿಂದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

ಕಟಪಾಡಿ: ಉಡುಪಿ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಸೆ. 29 ರಿಂದ ಪ್ರಾರಂಭಗೊಂಡು ಅ.7ರ ವರೆಗೆ ಜರಗಲಿದೆ. ಆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಿತ್ಯ ಭಜನೆ, ಸಾಂಸ್ಕೃತಿಕ, ದಾಂಡಿಯಾ ನೃತ್ಯ ಕಾರ್ಯಕ್ರಮಗಳೊಂದಿಗಳು ನಡೆಯಲಿವೆ. ಅ. 6 ರಂದು ಬೆಳಿಗ್ಗೆ 9 ಗಂಟೆಗೆ ಮಹಾ ಚಂಡಿಕಾಯಾಗ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಪದಾಧಿಕಾರಿಗಳು, ಸರ್ವ ಸದಸ್ಯರ ಪ್ರಕಟನೆ ತಿಳಿಸಿದೆ.