ಹಿಂದೂ ದೈವ ದೇವರುಗಳ ಅಪಹಾಸ್ಯ ಖಂಡನೀಯ: ಸಾಮೂಹಿಕ ಪ್ರಾರ್ಥನೆಗೆ ಕೈಜೋಡಿಸಿ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಇತ್ತೀಚೆಗೆ ಹಿಂದೂ ದೈವ ದೇವರುಗಳನ್ನು ಅಪಹಾಸ್ಯ ಮಾಡುವ ಕೆಟ್ಟ ಪ್ರವೃತ್ತಿ ಮಿತಿ ಮೀರುತ್ತಿದೆ. ಕೊರಗಜ್ಜ ದೈವದ ಪ್ರತಿಕೃತಿಯಂತೆ ವೇಷ ಹಾಕಿ ಕುಣಿದು ವಿಕೃತಿ ಮೆರೆಯುವುದು ಸೇರಿದಂತೆ ಹಿಂದೂಗಳ ಶೃದ್ಧಾ ಕೇಂದ್ರಗಳ ಸಹಿತ ಪುಣ್ಯ ಕ್ಷೇತ್ರಗಳನ್ನು ಉದ್ದೇಶ ಪೂರ್ವಕವಾಗಿ ಅಪವಿತ್ರಗೊಳಿಸುವ ಹುನ್ನಾರ ಹೊಂದಿರುವ ಮತಾಂಧ ದುಷ್ಟ ಶಕ್ತಿಗಳ ಕುಕೃತ್ಯವನ್ನು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಸೂಕ್ತ ರೀತಿಯಲ್ಲಿ ಮಟ್ಟ ಹಾಕಿ ಸಾಮಾಜಿಕ ಶಾಂತಿ ಸುವ್ಯವಸ್ತೆಯನ್ನು ಕಾಪಾಡುವಂತೆ […]
ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ ಸ್ಥಾಪನೆ: ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣ: ವಿ. ಸುನಿಲ್ ಕುಮಾರ್

ಕಾರ್ಕಳ: ನಮ್ಮ ಕರಾವಳಿ ಮತ್ತು ಮಲೆನಾಡು ಪ್ರದೇಶವು ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ ಮತ್ತು ಸಾಂಸ್ಕೃತಿಕ ಹಿರಿಮೆಗೆ ಪ್ರಸಿದ್ಧ. ಈಗ ಈ ಭಾಗದ ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣವಾಗಿದೆ. ಕರ್ನಾಟಕದ ಆರನೇ ರಂಗಾಯಣವಾಗಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ವು ಆರಂಭವಾಗಲಿದೆ. ಈ ಕುರಿತು ಈಗಾಗಲೇ ಸರ್ಕಾರಿ ಆದೇಶವು ಹೊರಬಿದ್ದಿದ್ದು , ‘ಯಕ್ಷ ರಂಗಾಯಣ’ವು ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ನ ಬಳಿ ಕಾರ್ಯಾರಂಭ ಮಾಡಲಿದೆ. ಈ ಯಕ್ಷರಂಗಾಯಣದಲ್ಲಿ ತುಳು ನಾಟಕದ ಹಿನ್ನೆಲೆಯಲ್ಲಿನ ನಾಟಕಗಳ ರಂಗಪ್ರಯೋಗ […]
ಉಡುಪಿಯಲ್ಲಿ ಉಚಿತ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಬೇತಿ

ಉಡುಪಿ: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನವು ಉಡುಪಿಯಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ತರಬೇತಿ ಕಾರ್ಯಕ್ರಮವನ್ನು ಹೊಸ ತರಗತಿಯೊಂದಿಗೆ ಆರಂಭಿಸುತ್ತಿದೆ. ಇದೇ ಬರುವ ಜುಲೈ 20ರ ಮಂಗಳವಾರದಿಂದ ಹೊಸ ತರಗತಿಯು ಆರಂಭಗೊಳ್ಳಲಿದೆ. ಕಳೆದ 4 ವರ್ಷಗಳಿಂದ ಉಡುಪಿಯ ಸೋದೆ ಮಠದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರು ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ತರಬೇತಿ ಉಚಿತವಾಗಿದ್ದು, ಹೊಸ ತರಗತಿ ಪ್ರತೀ ಮಂಗಳವಾರ ಸಂಜೆ 5ರಿಂದ 6ರ ವರೆಗೆ ಉಡುಪಿಯ ಸೋದೆ ಮಠದಲ್ಲಿ ನಡೆಯಲಿದೆ. […]
ಸಂಗೀತ ಪ್ರಿಯ ಉಡುಪಿ ಶ್ರೀಕೃಷ್ಣನ ಕತೆ ಹೇಳಿದ್ದಾರೆ ಪಿ.ಲಾತವ್ಯ ಆಚಾರ್ಯ

»ಪಿ.ಲಾತವ್ಯ ಆಚಾರ್ಯ ಉಡುಪಿ. 15ನೇ ಶತಮಾನದಲ್ಲಿ ದಾಸಸಾಹಿತ್ಯದ ಕ್ರಾಂತಿಗೆ ಶ್ರೀಕೃಷ್ಣನ ಉಡುಪಿ ಕ್ಷೇತ್ರವೇ ತವರೂರಾಯಿತು ಶ್ರೀವ್ಯಾಸರಾಜರು, ಶ್ರೀವಾದಿರಾಜರು. ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯೀಂದ್ರರ ನೇತೃತ್ವದಲ್ಲಿ ನೂರಾರು ಕೃತಿಗಳು ಉಡುಪಿಯಲ್ಲಿ ಅನಾವರಣಗೊಂಡಿತು. ಉಡುಪಿ ಶ್ರೀಕೃಷ್ಣ ನ ಕುರಿತಾಗಿಯೇ ಅಸಂಖ್ಯ ಗದ್ಯ ಪದ್ಯಗಳು ರಚಿತವಾಯಿತು. ತಂಬೂರಿ ಮೀಟಿ,ಗೆಜ್ಜೆ ಕಟ್ಟಿ, ಶುದ್ಧಭಕ್ತಿ,ಮುಗ್ಧ ಹೃದಯದಿಂದ ಭಜಿಸಿ ನಲಿದ ಸಂತರಿಗೆ ಉಡುಪಿಯು ಸಾಕ್ಷಾತ್ಕಾರದ ನೆಲೆಯಾಯಿತು. ಕನಕದಾಸರ ಅಂತರಾಳದ ಕೂಗಿಗೆ ಕಡೆಗೋಲಕೃಷ್ಣ ದರುಶನವನ್ನು ಕರುಣಿಸಿದ. ದಾಸಸಾಹಿತ್ಯದ ಸ್ವಣ೯ಯುಗವೆಂದೇ ಬಿಂಬಿತವಾದ ಈ ಪವ೯ಕಾಲದಲ್ಲಿ ಸಮಸ್ತ ಉಡುಪಿಯು ಸಂಗೀತಮಯವಾಯಿತು. ಹೌದು […]
ಶ್ರೀ ಶಿರೂರು ಶ್ರೀಗಳ ಎಂದೂ ಮುಗಿಯದ ನೆನಪು: ಅಕ್ಷೋಭ್ಯ ಆಚಾರ್ಯರು ತೆರೆದ ಶ್ರೀಗಳ ನೆನಪಿನ ಸಂಪುಟ

ಒಮ್ಮೆ ನನ್ನ ಅಜ್ಜಿ ಕುಸುಮಕ್ಕನ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಮಠದಲ್ಲೇ ಉಳಿದೆವು. ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಯಾರೋ ಮಠದವರೊಬ್ಬರು ಬೊಬ್ಬಿಡುತ್ತಾ ಬಂದು ನಮ್ಮ ಕೋಣೆಯ ಬಾಗಿಲನ್ನು ಜೋರಾಗಿ ತಟ್ಟಿದರು. ಕೃಷ್ಣಮಠದ ಪಾಯದ ಕೋಣೆಗೆ ಬೆಂಕಿ ಹತ್ತಿಕೊಂಡಿದೆ ಎಲ್ಲಾ ಬನ್ನಿ ಎಂದು ಕೂಗುತ್ತಾ ಮಠದ ಸಿಬ್ಬಂದಿ ಎಲ್ಲರಿಗೂ ವಿಷಯ ತಿಳಿಸುತ್ತಿದ್ದ. ತಕ್ಷಣ ನನ್ನ ಅಪ್ಪ ಲಾತವ್ಯಾಚಾರ್ ಮಠದ ಕಡೆಗೆ ಓಡಿದರು. ನಾವೂ ಕೂಡಾ ಅಮ್ಮನ ಜೊತೆ ಆ ಸ್ಥಳಕ್ಕೆ ಹೋದೆವು. ಆದರೆ ನಾವು ಬರುವಷ್ಟರಲ್ಲಿ ಶಿರೂರು […]