ಅಕ್ರಮ ರೊಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ: ಸುಪ್ರೀಂ ಕೋರ್ಟಿಗೆ ನಿಲುವು ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಅಕ್ರಮ ರೊಹಿಂಗ್ಯಾ (Illegal Rohingyas) ಮುಸ್ಲಿಂ ವಲಸಿಗರ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಅಕ್ರಮ ರೋಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ವಾಸಿಸಲು ಮತ್ತು ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ(Union Government) ಸುಪ್ರೀಂ ಕೋರ್ಟ್ಗೆ (Supreme Court) ತಿಳಿಸಿದೆ. ಕಾನೂನುಬಾಹಿರವಾಗಿ ದೇಶವನ್ನು ಪ್ರವೇಶಿಸುವವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲು ನ್ಯಾಯಾಂಗವು ಪ್ರತ್ಯೇಕ ವರ್ಗವನ್ನು ರಚಿಸಲು ಸಾಧ್ಯವಿಲ್ಲ, ಸಂಸತ್ತು ಮತ್ತು ಕಾರ್ಯಾಂಗದ ನೀತಿ ನಿರ್ಧಾರಗಳನ್ನು ಅತಿಕ್ರಮಿಸಬಾರದು ಎಂದು ಅದು ಹೇಳಿದೆ. […]
IPL 2024: CSK v/s RCB ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ: ಪೂಮಾ ವೈಬ್ ಸೈಟ್ ನಲ್ಲಿ RCB ಹೊಸ ಜರ್ಸಿ ಲಭ್ಯ

ಮಂಗಳವಾರದಂದು RCB ಅನ್ ಬಾಕ್ಸಿಂಗ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಕೇವಲ ಒಂದೇ ದಿನದಲ್ಲಿ ಪಂದ್ಯ ಆರಂಭವಾಗಲಿದ್ದು, ಆರ್ಸಿಬಿ ಅಭಿಮಾನಿಗಳಿಗೆ ತಂಡದ ಹೊಸ ಜೆರ್ಸಿ ಖರೀದಿಸುವ ಅವಕಾಶವಿದೆ. ಆರ್ಸಿಬಿ ಜೆರ್ಸಿಯನ್ನು ಪೂಮಾ ವೆಬ್ಸೈಟ್ನಲ್ಲಿ ಖರೀದಿಸಬಹುದು. ಹೊಸ ಜೆರ್ಸಿಯ ಬೆಲೆ 4999 ರೂಪಾಯಿ. ಜೊತೆಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲು ತನ್ನ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಾಯಿಸಿದೆ. CSK ಮತ್ತು RCB ಮಾ. 22 ರಂದು ಮೊದಲ ಪಂದ್ಯದೊಂದಿಗೆ ತಮ್ಮ IPL […]
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ: ಕಲ್ಲು ತೂರಾಟ ನಡೆಯುತ್ತಿದ್ದ ನಾಡಿನಲ್ಲಿ ರೇಸಿಂಗ್ ಕಾರುಗಳ ಓಡಾಟ

ಶ್ರೀನಗರ: ವಿಶ್ವಪ್ರಸಿದ್ಧ ದಾಲ್ ಸರೋವರದ ದಡದಲ್ಲಿ ಭಾನುವಾರದಂದು ಮೊದಲ ಬಾರಿಗೆ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ ಕಾರ್ಯಕ್ರಮವನ್ನು ಶ್ರೀನಗರದಲ್ಲಿ (Jammu and Kashmir) ಆಯೋಜಿಸಲಾಗಿತ್ತು. ವೃತ್ತಿಪರ ಫಾರ್ಮುಲಾ 4 (Formula 4 Racing) ಚಾಲಕರು ಪ್ರದರ್ಶಿಸಿದ ಸಾಹಸಗಳು ಸ್ಥಳೀಯರು ಮತ್ತು ಮೋಟಾರ್ಸ್ಪೋರ್ಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ನಗರದ ದಾಲ್ ಸರೋವರದ ದಡದಲ್ಲಿರುವ ಲಲಿತ್ ಘಾಟ್ನಿಂದ ನೆಹರೂ ಪಾರ್ಕ್ವರೆಗಿನ 1.7 ಕಿಮೀ ಟ್ರ್ಯಾಕ್ನಲ್ಲಿ ರೇಸಿಂಗ್ ಕಾರುಗಳು “ರೊಂಯ್ಯ್” ಎನ್ನುತ್ತಾ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದವು. ಸ್ಥಳೀಯ ಅಧಿಕಾರಿಗಳ ಪ್ರಕಾರ, ಈ […]
2024 – ಲೋಕಸಭಾ ಚುನಾವಣೆಗೆ ದಿನ ನಿಗದಿ: ಏ.19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ ಚುನಾವಣೆ; ಜೂನ್ 4 ರಂದು ಮತಎಣಿಕೆ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ದಿನಾಂಕಗಳನ್ನು ಘೋಷಿಸಿದರು. ಲೋಕಸಭೆ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ. 1 ಹಂತ ಏ.19 ರಂದು, 2 ನೇ ಹಂತ ಏ.26 ರಂದು, 3ನೇ ಹಂತ ಮೇ 7 ರಂದು (ಕರ್ನಾಟಕ), 4ನೇ ಹಂತ ಮೇ 13ರಂದು, 5 ನೇ ಹಂತವು ಮೇ 20 ರಂದು, 6ನೇ ಹಂತ ಮೇ 25ರಂದು, 7ನೇ ಹಂತ ಜೂನ್ 1 ರಂದು ನಡೆಯಲಿದೆ. ಆಂಧ್ರ ಪ್ರದೇಶ […]
ಅಡುಗೆ ಅನಿಲ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ 2 ರೂ ಇಳಿಕೆ: ಗ್ರಾಹಕರು ಕೊಂಚ ನಿರಾಳ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿದ್ದು, ಸುಮಾರು ಎರಡು ವರ್ಷಗಳ ಸುದೀರ್ಘ ಅವಧಿಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್ಗೆ 2 ರೂ. ಇಳಿಕೆ ಮಾಡಿದೆ. ಪರಿಷ್ಕೃತ ಬೆಲೆಯು ಮಾರ್ಚ್ 15ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ ಎಂದು ತೈಲ ಸಚಿವಾಲಯ ಗುರುವಾರ ಸಂಜೆ ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.72 ರೂ.ಗೆ ಹೋಲಿಸಿದರೆ ಈಗ 94.72 ರೂ. ಆಗಲಿದೆ. ಹಾಗೆಯೇ ಡೀಸೆಲ್ ಬೆಲೆ ಪ್ರಸ್ತುತ […]