ಸುಖವೂ ಉಂಟು, ದುಃಖವೂ ಉಂಟು: ಕೊರೋನಾ ಕಲಿಸಿದ ಪಾಠ ನೂರೆಂಟು

  ♠ ರಂಜಿತ್ ಸಸಿಹಿತ್ಲು ಈ ಕೊರೋನಾ ಎನ್ನುವ ಮಹಾಮಾರಿ ಇದೆಯಲ್ವಾ ವಿಶ್ವದ ಅದೆಷ್ಟೋ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂಡಿಹಿಪ್ಪೆಕಾಯಿ ಮಾಡಿದೆ. ಅದೆಷ್ಟೋ ಜನರ ಉಸಿರನ್ನೇ ಹೀರಿ ಬಿಟ್ಟಿದೆ. ವಾಣಿಜ್ಯ ವ್ಯವಹಾರ ಶೈಕ್ಷಣಿಕ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಇದೆಲ್ಲದರ ನಡುವೆಯೂ ಪ್ರತಿಯೊಂದು ಒಳ್ಳೆಯದರಲ್ಲೂ ಕೆಟ್ಟದು, ಪ್ರತಿಯೊಂದು ಕೆಟ್ಟದರಲ್ಲೂ ಒಳ್ಳೆಯ ಸಂಗತಿಗಳು ಇರುತ್ತೆ ಅನ್ನುತ್ತಾರಲ್ಲ ಹಾಗೆಯೇ ಈ ಕೊರೊನದಿಂದಲೂ ಕೆಲವೊಂದು ಒಳ್ಳೆಯ ಬೆಳವಣಿಗೆಗಳೇ ಆಯಿತೇನೋ ಅನ್ನಿಸುತ್ತಿದೆ. ಮನುಷ್ಯ ಭೂಮಿ ಮೇಲಿರುವ ಅತ್ಯಂತ ಕ್ರೀಯಾಶೀಲ ಪ್ರಾಣಿ,ತನ್ನ ಔದ್ಯೋಗಿಕ […]

ಕಣ್ಣು ಬಿಟ್ಟು ನೋಡಿ, ನಿಮಗೂ ನನ್ನಂತೆಯೇ ಖುಷಿ ಸಿಗಬಹುದು !

ಕೋರೋನ ಲೊಕ್ಡೌನ್ ಸಮಯದಲ್ಲಿ ಒಂದು ದಿನ ಎಂದಿನಂತೆ ಬೈಗು ಹೊತ್ತಲ್ಲಿ ಟೆರೇಸ್ ನಲ್ಲಿ ಅಡ್ಡಾಡುತ್ತಾ ಸುತ್ತಲಿನ ವಿಹಂಗಮ ದೃಶ್ಯ ಸುಮ್ಮನೆ ವೀಕ್ಷಿಸುತ್ತಿದ್ದಾಗ ಹಲವಾರು ಅನಿಸಿಕೆಗಳು ಮನದಲ್ಲಿ ಸುಳಿದವು. ಪ್ರಪಂಚವೆಲ್ಲ ವ್ಯಾಪಿಸಿದ ಕೊರೊನದಿಂದ ಮನುಕುಲವು ಅಸಹಾಯಕವಾದರೂ, ತನ್ನ ಉಳಿವಿಗಾಗಿ ಹೋರಾಟ ಮಾಡುತ್ತಲೇ ಆತ್ಮಾವಲೋಕನ ಮಾಡುತ್ತಿದೆ ಅನಿಸಿತು. ಈ ಹಿಂದೆಯೂ ಮನುಕುಲದ ಮೇಲೆ ಎಷ್ಟೊಂದು ಮಾರಕ ರೋಗಗಳ ಧಾಳಿ ನಡೆದಿಲ್ಲ?. ಆದರೆ ಅವೆಲ್ಲವನ್ನು ಗೆದ್ದು ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆಯಲ್ಲವೇ ಅಂತ ಅನಿಸಿತು. ನಾನಾ ಬವಣೆಗಳ ನಡುವೆಯೂ ಮಾನವನ […]

ಅವನನ್ನು ಕಣ್ಣರಳಿಸಿ ನೋಡಿ ಬಿಡಿ: ನಿಮಗೂ ಅವನ ಮೇಲೆ ಪ್ರೀತಿಯಾಗ್ತದೆ !

♥ಸ್ವಾತಂತ್ರ್ಯ ಎ.ಎನ್ ಬರಡು ಭೂಮಿಯಲ್ಲಿರುವ ಮಣ್ಣ ನೋಡಿ ಆಶ್ಚರ್ಯವಾಗುವುದಿಲ್ಲ, ನದಿಯಲ್ಲಿರುವ ನೀರು ನೋಡಿ ಹೊಸತ್ತು ಅನ್ನಿಸುವುದಿಲ್ಲ, ಆದರೆ ನನ್ನ ಪ್ರೀತಿಯ ಹುಡುಗನ ಸಹವಾಸದಿಂದ ಇವೆಲ್ಲವೂ ಆಕರ್ಷಕವೆನಿಸತೊಡಗಿತು.ಪ್ರೀತಿಯೆಂದರೆ  ಒಂದು ಹನಿಯಷ್ಟು ನಂಬಿಕೆ, ಆಸಕ್ತಿ ಇರದ ನನಗೆ ಪ್ರೀತಿಯ ಅನುಭವ ಕೊಟ್ಟದ್ದು ನನ್ನವನು ! ಎಲ್ಲೋ ಕಳೆದು ಹೋದ ನನ್ನ ಮನಸ್ಸನ್ನು ಮತ್ತೆ ಹುಡುಕಿಕೊಟ್ಟ ಕೀರ್ತಿ ಅವನದ್ದು. ನನ್ನ ತುಂಬಾ ಸತಾಯಿಸುವ, ಪ್ರೀತಿಸುವ ಅವನು, ತನ್ನ ಪವಿತ್ರವಾದ ವಿಶಾಲ ಮನಸ್ಸಲಿ, ನನ್ನನ್ನು ಬಚ್ಚಿಟ್ಟು ಕೊಂಡಿದ್ದಾನೆ. ಬಯಸಿದ ತಕ್ಷಣ ಎಂದಿಗೂ ಸಮಯಕ್ಕೆ […]

ಎಲ್ಲಾ ಮುಗೀತು ಅಂದುಕೊಳ್ಳಲೇಬೇಡಿ, ಕನಸು ಇನ್ನೇನು ಶುರುವಾಗುತ್ತೆ !

♠ ಆರ್.ಜೆ.ಅಚ್ಲಾಡಿ ನಾವು ಜೀವನದಲ್ಲಿ ಎರಡು ವಿಚಾರಕ್ಕಾಗಿ  ಹೋರಾಟ ನಡೆಸುತ್ತಲೇ ಇರುತ್ತೇವೆ. ಒಂದು ಬದುಕಿಗಾಗಿ, ಮತ್ತೊಂದು ಬದುಕುವುದಕ್ಕಾಗಿ. ಸಣ್ಣಗೆ ಹುಷಾರ್ ತಪ್ಪಿ ಜೀವಕ್ಕೇನಾದರು ಆದರೂ ವೈದ್ಯರ ಬಳಿ ದೌಡಾಯಿಸಿ ಸಮಸ್ಯೆ ವಾಸಿಯಾಗುವ ತನಕ ಪ್ರಪಂಚವೇ ತಲೆಕೆಳಗಾದಂತೆ ಚಡಪಡಿಸುತ್ತೇವೆ, ಇದು ನಾವು ಬದುಕುವುದಕ್ಕಾಗಿ ನಡೆಸುವ ಹೋರಾಟ. ಸಣ್ಣ ಸಂಬಳದ ನೌಕರಿಯಿಂದ ಹಿಡಿದು, ಕೋಟಿ-ಕೋಟಿ ಸಂಪಾದಿಸುತ್ತಾ ಇನ್ನಷ್ಟು-ಮತ್ತಷ್ಟು ಸಂಪಾದಿಸಬೇಕು ಎಂದು ಜೀವನಪೂರ್ತಿ ಹೋರಾಟದಲ್ಲಿರುತ್ತಾನೆ. ಇದು ಬದುಕಿಗಾಗಿ ನಡೆಸುವ ಹೋರಾಟ. ಬದುಕು ಮತ್ತು ಬದುಕುವುದು ಎನ್ನುವ ಎರಡು ವಿಚಾರಗಳು ಸಂಪೂರ್ಣವಾಗಿ ಮಾನವ […]

 ￰ಚೈನೀಸ್ ಆಪ್ ನಿಷೇಧಿಸಲು ಚಪ್ಪಾಳೆ ಹೊಡೆಯುವುದನ್ನು ಮೊದಲು ನಿಲ್ಲಿಸಿ: ಡಾ.ಶಶಿಕಿರಣ್ ಶೆಟ್ಟಿ ಬರಹ

ಈಗ ಎಲ್ಲಾ ಕಡೆ ಕೇಳುತ್ತಿರುವ ಕೂಗು ಒಂದೇ, ನಮ್ಮ ಸೈನಿಕರನ್ನು ಕೊಂದ ಪಾಪಿ ಚೀನಾದ ಆಪ್ ನಿಲ್ಲಿಸಿ ಎಂದು, ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವಲ್ಲ ಅಂತಾರಾಷ್ಟ್ರೀಯ ಕಾನೂನು ಇದಕ್ಕೆ ಅಡ್ಡಿಯಾಗಬಹುದು. ಅದಕ್ಕೆ ನಾವೇ ಜಾಗೃತಗೊಳ್ಳಬೇಕಿದೆ. ಅಮೇರಿಕಾದ 2 ಅಣು ಬಾಂಬ್ ಬಿದ್ದ ದಿನವೇ ಜಪಾನ್ ನ ಜನರು ಅಮೇರಿಕಾದ ವಸ್ತುಗಳನ್ನು ಮುಟ್ಟುವುದನ್ನೇ ಬಿಟ್ಟಿದ್ದಾರೆ. ಇಂದು ಒಂದು ಅಮೇರಿಕಾದ ಸೂಜಿ ಕೂಡ ಜಪಾನ್ ಅಲ್ಲಿ ಮಾರಾಟವಾಗುತಿಲ್ಲ, ಜಪಾನ್ ಜನರಿಗಾದದ್ದು ಭಾರತೀಯರಿಗೇಕೆ ಆಗುತಿಲ್ಲ? ಕೇವಲ ಟಿಕ್ ಟಾಕ್ ಒಂದೇ […]