ದೇವರೇ ಒಮ್ಮೆ ಕಾಲೇಜು ಶುರುವಾಗಲಿ, ನನ್ನ ಕಣ್ಣು ಅವನನ್ನು ಕಾಣಲಿ

  ಬೇಸರದಿಂದ ನಾ ಕುಳಿತುಕೊಂಡು, ನಿನ್ನ ದಾರಿಯ ಹುಡುಕುತ್ತಾ ಕಾದುಕೊಂಡು, ನಿನ್ನ ಬಳಿಗೆ ಈಗ ಬರಲು ಸಾಧ್ಯವಿಲ್ಲ ಎಂದು ತಿಳಿದಾಗ ಮನಸ್ಸಿಗೆ ತೋಚಿದ್ದನ್ನ ತಕ್ಷಣ ಬರೆದ ಲೇಖನವಿದು. ಅಯ್ಯೋ ಸಮಯ ಓಡುತಿದೆ ,ಕಾಲ ಉರುಳುತಿದೆ. ಆದರೆ ನನ್ನ ಮನಸು ಮಾತ್ರ ನಿನ್ನನೇ ಕಾಯುತಿದೆ. ನಿನ್ನ ಬಿಟ್ಟು ಇದೀಗ ನಾಲ್ಕು ತಿಂಗಳುಗಳು  ಕಳೆದಿವೆ. ನಿನ್ನ ನೋಡಲು ಮನ  ತವಕ ಪಡುತ್ತಿದೆ. ನಿನ್ನ ಮಾತನಾಡಿಸಲು ಮನಸು ಚಂಚಲಿಸುತ್ತಿದೆ. ನಿನ್ನೊಂದಿಗೆ ಕಳೆದ ದಿನಗಳನ್ನು ಮತ್ತೆ ,ಮತ್ತೆ  ನೆನಪಿಸುತ್ತಾ  ಕುಳಿತರೆ ಸಂತೋಷದ  ಜೊತೆಗೆ ಕಣ್ಣೀರು […]

ಸ್ಕೌಟಿಂಗ್ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಷ್ಟು ಸಂಗತಿಗಳು !

ವನ್ಸ್ ಎ ಸ್ಕೌಟ್- ಆಲ್ವೇಸ್ ಎ ಸ್ಕೌಟ್- ಇದು ಪ್ರತಿಯೊಬ್ಬ ಸ್ಕೌಟ್ ಕೂಡ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುವ ಮಾತು. ಇದರರ್ಥ- ಒಮ್ಮೆ ಸ್ಕೌಟ್/ ಗೈಡ್ ಆಗಿ ಪ್ರತಿಜ್ಞೆ ಸ್ವೀಕರಿಸಿದ ಮೇಲೆ ಸದಾ ಕಾಲಕ್ಕೂ ಸ್ಕೌಟ್/ ಗೈಡ್ ಆಗಿಯೇ ಇರುವುದು ಅಥವಾ ಇರುತ್ತಾರೆ ಎಂಬುದು. ಏಕೆಂದರೆ ಸ್ಕೌಟಿಂಗ್ ಒಂದು ಜೀವನ ವಿಧಾನ! ಸ್ಕೌಟಿಂಗ್ ನಲ್ಲಿ ಜನರು ಮತ್ತು ಪ್ರಕೃತಿಯೊಂದಿಗೆ ಬೆರೆತು, ಅರಿತು ಕೆಲಸ ಮಾಡಬೇಕಾಗುತ್ತದೆ. ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಹಸಿ, ಸ್ವಾವಲಂಬಿ, ಧೈರ್ಯಶಾಲಿಯಾಗಿ ಜೀವನ ನಡೆಸುವುದಕ್ಕೆ ಇದು ಪ್ರೇರಣೆ ನೀಡುತ್ತದೆ. […]

ಹೊಸಹೊಸ ಅನುಭವಗಳೇ ಇಲ್ಲಿ ಪಾಠವಾಗ್ತವೆ,ನಿಮ್ಮ ಬದುಕಿಗೆ ದಾರಿಯಾಗ್ತವೆ: ನಂಗೆ ಸಿಕ್ಕ ಪಾಠ ನಿಮಗೂ ಸಿಗಲಿ

♦♦ಶರಧಿ ಶೆಟ್ಟಿ ಅಯ್ಯೋ ದೇವ್ರೆ ಬೇಕಿತ್ತಾ ನಂಗೆ ಇದೆಲ್ಲಾ? ಅಂತ ಪರಿಸ್ಥಿತಿ, ಮನಸ್ಥಿತಿ ಕೆಟ್ಟಾಗ ಎಲ್ಲರೂ ತಮ್ಮಲ್ಲೇ ಅಂದುಕೂಂಡು ನೊಂದುಕೊಳ್ಳುವುದು ಸಹಜ..”ಶರಧಿ ಏಳು, ಓದು, ನೆನಪಿರಲಿ ಎಸ್ ಎಸ್.ಎಲ್. ಸಿ. ನೀನೀಗ” ಅಂತ ಪಕ್ಕದ ಮನೆಯ ರಾಜಿ ಆಂಟಿ ಕೂಡ ಹೇಳಲು ಶುರು ಮಾಡಿದ್ರೆ ಹೇಗ್ ಇರಬಹುದು ನನ್ನ ಪರಿಸ್ಥಿತಿ? ಆವಾಗ್ಲೇ ಧೃಢ ನಿಧಾ೯ರ ಮಾಡಿದೆ, ಹಾಸ್ಟೆಲ್ ಸೇರಬೇಕೆಂದು, ಈ ಮನೆಯವರ ರಗಳೆಯೇ ಬೇಡ ಅಂತ, ಎಂದೂ ಪುಸ್ತಕ ಮುಟ್ಟದ ನಾನು, ಅದ್ಭುತ ಎನ್ನುವ೦ತೆ ಓದಿ ಅಂಕ […]

ನೀ ನಡೆದು ಬರಲು ಸಪ್ತಸ್ವರಗಳಾದವು ಮೌನ

♥ ಸುನಿಲ್ ತಡಬಡಿಸಿ ತಡವರಿಸಿಕೊಂಡು ಬರೆಯುತ್ತಿರುವೆ ಒಂದೆರಡು ಸಾಲುಗಳ, ಈ ಪ್ರೇಮ ನಿವೇದನಾ ಓಲೆಯ, ಬರೆದಿರುವ ಪತ್ರ ಬರಿಯ ಹಾಳೆಯೆಂದು ಕೈಗೆ ಸಿಕ್ಕಕೂಡಲೆ ಹರಿದು ಎಸೆಯದಿರು, ಅಚ್ಚುಕಟ್ಟಾಗಿ ಬರೆಯಲು ಬಾರದಿದ್ದರು ಏನೋ ಒಂದಿಷ್ಟು ಯೋಚಿಸಿಕೊಂಡು ಬರೆದಿರುವ ನನ್ನ ಮೊದಲ ಪ್ರೇಮ ಪತ್ರವಿದು. ನಸುಗೆಂಪಿನ ಸಂಜೆಯಲಿ,‌ ಮೋಡಗಳ ಮುಸುಕಿನ ಸೂರ್ಯನ ಎದುರಲ್ಲಿ, ತಂಗಾಳಿಗೆ ಮೈಯೊಡ್ಡಿ ಕುಳಿತು, ತುಸು ಹೊತ್ತು ಕಣ್ಮುಚ್ಚಿ ಕುಳಿತಾಗ ಮನಸ್ಸ ಪರದೆಯ ಮೇಲೆ ಹಾದು‌ ಹೋದ ಬಯಕೆಗಳ ಬಣ್ಣಿಸಿಕೊಂಡು ಬರೆದಿರುವೆ ನಿನಗಾಗಿ ಈ ಓಲೆಯ. ಕಾಮನಬಿಲ್ಲಿನ […]

ಸುದೀರ್ಘ ದಾರಿ ಕೊನೆಯಿಲ್ಲದ ಪಯಣ: ಸಂಗೀತಾ ಬರೆದ ಭಾವಪೂರ್ಣ ಸಾಲುಗಳು

ಪಯಣ ♦ ಸಂಗೀತಾ ಸು ಗೋಪಾಲ್ ಸುದೀರ್ಘ ದಾರಿ. ಕೊನೆಯಿಲ್ಲದ ಗುರಿಯಿಲ್ಲದ ಪಯಣ ದಾರಿ ಸವೆದಂತೆ ಮನವು ಏಕಾಂಗಿತನದ ಬೇಗುದಿಗೆ ಚೀರುತ್ತಲೇ ಇದೆ ಅಂಗಿಂದ್ದಾಗೆ ಹಾದಿಯ ಕಲ್ಲು-ಮುಳ್ಳುಗಳಿಗೆ ಜರ್ಜರಿತಗೊಂಡಿವೆ ಪಾದಗಳು ನೋವಿನ ಹಾಹಾಕಾರ ಎತ್ತಿದರೂ ಕಣ್ಣೊರೆಸುವ ಮಮತೆಯೇ ಕಾಣದು. ಬಂಜರು ಇಳೆಗೆ ಪ್ರೀತಿಯ ಸೆಲೆ ಕಾಣಲು ಅರಸುತ್ತಲೇ ಇರುವವು ನಯನಗಳು ಕಾಣದು ಎಲ್ಲಿಯೂ ಮನ ತಣಿಯುವ ಆಸರೆಯು. ಅವರಿವರ ಬಿಸಿ ಚಾಟಿಯ ಏಟಿಗೆ ನೆತ್ತರು ಸುರಿದರು ಮೌನವೇ ಉತ್ತರವಾಗಿದೆ ಕಣ್ಣೀರೇ ಒಡಲ ದಾಹ ನೀಗುವ ಅಮೃತವೂ ಆಗಿದೆ. […]