ಎಲ್ಲರಿಗೂ ಬ್ಯಾಟಿಂಗೇ ಬೇಕು ಗುರು, ಬೌಲಿಂಗ್ ಯಾರಿಗೆ ಬೇಕು? :ಈ ಬರಹ ಓದಿದ್ರೆ ನೀವಾಡಿದ ಗಲ್ಲಿ ಕ್ರಿಕೆಟ್ ಗ್ಯಾರಂಟಿ ನೆನಪಾಗತ್ತೆ

♥ ನಿಧಿ ಎನ್. ಪೈ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ ಬಂದಾಗ ನನಗೆ ನಮ್ಮ ಗಲ್ಲಿ ಕ್ರಿಕೆಟ್ ಜ್ಞಾಪಕಕ್ಕೆ ಬಂತು. ನಾವು ಆಡುತ್ತಿದ್ದದ್ದು ಸುಮಾರು 2009ರ ಸಮಯದಲ್ಲಿ. ಆಗಷ್ಟೇ ಐಪಿಎಲ್ ಆವೃತ್ತಿ ಪ್ರಾರಂಭವಾಗಿತ್ತು. ಅವಾಗ ನನಗೆ ಒಂಬತ್ತು ವರ್ಷ. ಕ್ರಿಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ ನನ್ನ ಅಣ್ಣಂದಿರಿಗೆ ಕ್ರಿಕೆಟ್ ಬಿಟ್ಟು ಬೇರೆನೂ ಗೊತ್ತಿರಲಿಲ್ಲ. ಅವಾಗ PUB G ಎಲ್ಲ ಇರ್ಲಿಲ್ಲ ನೋಡಿ, ಹಾಗಾಗಿ ಹೊರಗೆ ಆಡುವುದೇ ಹೆಚ್ಚಾಗಿತ್ತು. ಎಲ್ಲಾ ಹುಡುಗಿಯರ ಹಾಗೆ ನಾನು ಕೂಡ ಅಡುಗೆ ಆಟ, […]
ನನ್ನೊಳಗಿನ ನೋವು ನಿನಗೂ, ಯಾರಿಗೂ ಗೊತ್ತಿಲ್ಲ…!!!

♣ ಅಶೋಕ್ ಕುಂದರ್ ಉಡುಪಿ ರೆಂಬೆ ತುದಿಯ ನೋಟವದು. ಸುತ್ತಲೂ ನೂರಾರು ಕಣ್ಣುಗಳು ಆ ರೆಂಬೆ ತುದಿಯನ್ನೇ ದಿಟ್ಟಿಸುತ್ತಿರಬಹುದು. ಪ್ರತಿದಿನ ವಿಹರಿಸುವಂತೆ ಹಾರುತ್ತಿರುವಾಗ ಲಕ್ಷಾಂತರ ಕಣ್ಣುಗಳು ನನ್ನನ್ನು ನೋಡುತ್ತಿರಬಹುದು. ನಾ ಬಡಿಯುವ ರೆಕ್ಕೆಗಳಿಗೆ ಅದು ತಿಳಿದಿಲ್ಲ. ಕಣ್ಣುಗಳಿಗಂತು ತಾನ್ ತಲುಪುವ ಗುರಿಯದ್ದೇ ಚಿಂತೆಯಾಗಿತ್ತು. ಆದರೂ ನನ್ನನು ನನ್ನದೇ ರೆಕ್ಕೆಗಳು ಈ ರೆಂಬೆ ತುದಿಯಲ್ಲಿ ತಂದು ನಿಲ್ಲಿಸಿತ್ತು. ಎಷ್ಟೋ ತಿಂಗಳುಗಳಿಂದ ನಾ ಇಲ್ಲಿ ಬಂದು ಕೂರುತ್ತಿದ್ದೆ. ಪ್ರತಿ ಸಲ ಬರುವಾಗ ಒಂದೊಂದು ನೋಟ. ಮಳೆ ಬಿದ್ದಾಗ, ಬಿಸಿಲಿದ್ದಾಗ, ಚಳಿಯಲ್ಲಿ […]
ಏನ್ ಗೊತ್ತಾ, ತಿಳಿದಷ್ಟು ಸುಲಭ ಅಲ್ಲ ಸಾಗೋ ಈ ದಾರಿ, ಅಗಲೋ ಮುನ್ನ ಖುಷಿಯಿಂದ ಅನುಭವಿಸಿ ಒಂದ್ಸಾರಿ !

♥ ಐಶ್ವರ್ಯ .ಆರ್. ನಾಯ್ಕ್ ಸಂತೋಷದಿಂದ ಮೂರು ಹೊತ್ತು ಊಟ, ಕಣ್ಣು ತುಂಬ ನಿದ್ದೆ, ಆಟ ಪಾಠ ಅಂತ ಪಾಲಕರ ಕಣ್ ರೆಪ್ಪೆಯೊಳಗೆ ಜೋಪಾನವಾಗಿ ಇರೋ ನಮಗೆ, ನಿಜವಾದ ಜೀವನದ ಕಸರತ್ತು ಒಂದು ರೀತಿಲಿ ಅರಿವಾಗೋದು ಅವರಿಂದ ದೂರ ಆದಾಗ ಮಾತ್ರ. ಕೆಲವರಿಗೆ ಈ ಅನುಭವ ಹೊಸತೇನಲ್ಲ. ಆದರೂ ನನ್ನ ಕೆಲವು ಸೆಣಸಾಟಗಳನ್ನು ನಿಮ್ಮ ಮುಂದೆ ಇಡುತ್ತೇನೆ ಕೇಳಿ ಈಗಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಹೋಗೋದು ಅನಿವಾರ್ಯ ಆಗೋಗಿದೆ. ಇನ್ನು ನಾನ್ ಇಷ್ಟ ಪಟ್ಟಿರುವುದನ್ನು ಓದಬೇಕು […]
ಸುಖವೂ ಉಂಟು, ದುಃಖವೂ ಉಂಟು: ಕೊರೋನಾ ಕಲಿಸಿದ ಪಾಠ ನೂರೆಂಟು

♠ ರಂಜಿತ್ ಸಸಿಹಿತ್ಲು ಈ ಕೊರೋನಾ ಎನ್ನುವ ಮಹಾಮಾರಿ ಇದೆಯಲ್ವಾ ವಿಶ್ವದ ಅದೆಷ್ಟೋ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂಡಿಹಿಪ್ಪೆಕಾಯಿ ಮಾಡಿದೆ. ಅದೆಷ್ಟೋ ಜನರ ಉಸಿರನ್ನೇ ಹೀರಿ ಬಿಟ್ಟಿದೆ. ವಾಣಿಜ್ಯ ವ್ಯವಹಾರ ಶೈಕ್ಷಣಿಕ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಇದೆಲ್ಲದರ ನಡುವೆಯೂ ಪ್ರತಿಯೊಂದು ಒಳ್ಳೆಯದರಲ್ಲೂ ಕೆಟ್ಟದು, ಪ್ರತಿಯೊಂದು ಕೆಟ್ಟದರಲ್ಲೂ ಒಳ್ಳೆಯ ಸಂಗತಿಗಳು ಇರುತ್ತೆ ಅನ್ನುತ್ತಾರಲ್ಲ ಹಾಗೆಯೇ ಈ ಕೊರೊನದಿಂದಲೂ ಕೆಲವೊಂದು ಒಳ್ಳೆಯ ಬೆಳವಣಿಗೆಗಳೇ ಆಯಿತೇನೋ ಅನ್ನಿಸುತ್ತಿದೆ. ಮನುಷ್ಯ ಭೂಮಿ ಮೇಲಿರುವ ಅತ್ಯಂತ ಕ್ರೀಯಾಶೀಲ ಪ್ರಾಣಿ,ತನ್ನ ಔದ್ಯೋಗಿಕ […]
ಕಣ್ಣು ಬಿಟ್ಟು ನೋಡಿ, ನಿಮಗೂ ನನ್ನಂತೆಯೇ ಖುಷಿ ಸಿಗಬಹುದು !

ಕೋರೋನ ಲೊಕ್ಡೌನ್ ಸಮಯದಲ್ಲಿ ಒಂದು ದಿನ ಎಂದಿನಂತೆ ಬೈಗು ಹೊತ್ತಲ್ಲಿ ಟೆರೇಸ್ ನಲ್ಲಿ ಅಡ್ಡಾಡುತ್ತಾ ಸುತ್ತಲಿನ ವಿಹಂಗಮ ದೃಶ್ಯ ಸುಮ್ಮನೆ ವೀಕ್ಷಿಸುತ್ತಿದ್ದಾಗ ಹಲವಾರು ಅನಿಸಿಕೆಗಳು ಮನದಲ್ಲಿ ಸುಳಿದವು. ಪ್ರಪಂಚವೆಲ್ಲ ವ್ಯಾಪಿಸಿದ ಕೊರೊನದಿಂದ ಮನುಕುಲವು ಅಸಹಾಯಕವಾದರೂ, ತನ್ನ ಉಳಿವಿಗಾಗಿ ಹೋರಾಟ ಮಾಡುತ್ತಲೇ ಆತ್ಮಾವಲೋಕನ ಮಾಡುತ್ತಿದೆ ಅನಿಸಿತು. ಈ ಹಿಂದೆಯೂ ಮನುಕುಲದ ಮೇಲೆ ಎಷ್ಟೊಂದು ಮಾರಕ ರೋಗಗಳ ಧಾಳಿ ನಡೆದಿಲ್ಲ?. ಆದರೆ ಅವೆಲ್ಲವನ್ನು ಗೆದ್ದು ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆಯಲ್ಲವೇ ಅಂತ ಅನಿಸಿತು. ನಾನಾ ಬವಣೆಗಳ ನಡುವೆಯೂ ಮಾನವನ […]