ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದೇ ನಾವು ದೇಶಕ್ಕೆ ಕೊಡುವ ದೊಡ್ಡ ಗೌರವ: ರಶ್ಮಿತಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ಆಗಸ್ಟ್ 15 ಇಡೀ ಭರತ ಖಂಡದಲ್ಲಿರೋ  ನಾವೆಲ್ಲರೂ ಒಂದೇ ಅನ್ನುವ ಐಕ್ಯತಾ ಭಾವದಿ ಸಂಭ್ರಮಿಸುವ ದೇಶದ ಹೆಮ್ಮೆಯ ದಿನ. ಎಷ್ಟೋ ಹೋರಾಟಗಾರರ ತ್ಯಾಗದ ಗುರುತೇ ಈ ಸ್ವಾತಂತ್ರ್ಯ. ಸ್ವಾತಂತ್ರ್ಯ ಅನ್ನುವುದು ಕೇವಲ ಒಂದು ಪದವಲ್ಲ ಬದಲಿಗೆ ಎಷ್ಟೋ ಜನರ ನೆತ್ತರ ಕುರುಹು. ಒಗ್ಗಟ್ಟು ಭ್ರಾತೃತ್ವ  ಶಾಂತಿ ದೇಶ ಪ್ರೇಮದ ಸಂದೇಶ ಸಾರುವ ಭಾರತದ ಹೆಮ್ಮೆಯ ಹಬ್ಬ. ಬಾಲ್ಯದ ದಿನಗಳಲ್ಲಿ  ಸ್ವಾತಂತ್ರ್ಯ ದಿನಾಚರಣೆ ಅಂದರೆ ಕೇವಲ ಮೆರವಣಿಗೆ ಬಹುಮಾನ ವಿತರಣೆ ಸಿಹಿ ತಿನಿಸು ಬರಿ ಇಷ್ಟಕ್ಕೆ ಮನಸು ಸೀಮಿತವಾಗಿತ್ತು.ಆದರೆ […]

 ತ್ಯಾಗದಿಂದ ಬಂದ ತೇಜಸ್ಸು “ಸ್ವಾತಂತ್ರ್ಯ”: ಪ್ರಜ್ಞಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ಸ್ವಾತಂತ್ರ್ಯ ದಿನಾಚರಣೆ ಎಂದರೆ ನಮ್ಮ ದೇಶವನ್ನು  ಬ್ರಿಟೀಷರ ಆಳ್ವಿಕೆಯಿಂದ ಮುಕ್ತಾಯಗೊಂಡ ಕ್ಷಣವನ್ನು ಸ್ಮರಿಸುವ  ವಿಶೇಷ ಕ್ಷಣ. ಇದು ಕೇವಲ ರಜೆಯ ದಿನವಲ್ಲ, ನಮ್ಮ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹೋರಾಟಗಾರರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮವನ್ನು ನೆನೆದು ಗೌರವಿಸುವ ದಿನ.  ನನ್ನ ಪ್ರಕಾರ ನಾವು ಸ್ವಾತಂತ್ರ್ಯ ದಿನವನ್ನು ತುಂಬಾ ಖುಷಿಯಿಂದ,  ಗೌರವದಿಂದ ಆಚರಿಸಬೇಕು. ನನ್ನ ಬಾಲ್ಯದ ದಿನದಲ್ಲಿ ಶಾಲೆಗೆ ಹೋಗುತ್ತಿರುವಾಗ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನದಂದು ಸುತ್ತಮುತ್ತಲೂ ಎಲ್ಲಾ ಸ್ವಚ್ಛಗೊಳಿಸಿ ಭಾರತದ ನಕ್ಷೆಯನ್ನು ಧ್ವಜಸ್ತಂಬದ ಮುಂದೆ […]

ಮದುವೆಯ ವಯಸ್ಸಾದ್ರೆ ನಿಮಗೂ ಹೀಗೆಲ್ಲಾ ಚಡಪಡಿಕೆ ಆಗ್ಬೋದು,ಇದ್ದವರೆಲ್ಲಾ ಹೀಗೆ ಪ್ರಶ್ನೆ ಕೇಳ್ಬೋದು : 90s ಹುಡುಗನೊಬ್ಬನ ಕಹಾನಿ

“ಮದುವೆಯ ವಯಸ್ಸಾಯಿತು. ಯಾರನ್ನಾದರೂ ನೋಡಿಕೊಂಡಿದ್ದೀಯೋ ಇಲ್ಲ ನಾವೇ ನೋಡಬೇಕೋ?” ಎಂದು ಹಿತೈಷಿಗಳು ಕೇಳುವಾಗ ದಿಗಿಲು, ಗಲಿಬಿಲಿ ಒಟ್ಟಿಗೆ ಉಂಟಾಗುತ್ತದೆ.  ಹೇಗೋ ಕಷ್ಟ ಪಟ್ಟು ಕಾಲೇಜು ಮುಗಿಸಿ ಕೆಲಸ ಹಿಡಿದು, ಮತ್ತೆ ಕೊರೊನಾ ಕಾಟದಿಂದ ಹೈರಾಣಾಗಿ ಈಗ ಸುಧಾರಿಸಿಕೊಳ್ಳುತ್ತಿರುವಾಗ, ಮತ್ತೊಂದು ವೈರಸ್ ಬಂದು ಉಳಿದಿರುವುದನ್ನೂ ಕಿತ್ತುಕೊಳ್ಳುತ್ತದೋ ಎಂಬ ಆತಂಕದ ಮಧ್ಯೆ ದಿನಗಳು ಓಡುತ್ತಿರಬೇಕಾದರೆ ‘ಮದುವೆ’ ಎಂಬ ಸಂಗತಿಯೊಂದು ಕುಣಿದಾಡುತ್ತಿದೆ!  ಲಗ್ನ ಇರುವಾಗಲೇ ಮದುವೆಯಾಗಬೇಕು. ಇಲ್ಲದಿದ್ದರೆ ಕಷ್ಟ ಎಂದು ಹಿರಿಯರು ಹೇಳುವಾಗ ಚಿಂತೆ ಕಾಡುತ್ತದೆ. ಹೆಣ್ಣು ಹುಡುಕಿ ಸುಸ್ತಾದ ಸೀನಿಯರ್ಸ್ […]

37ನೇ ವರ್ಷದ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕಾರ್ಕಳ: ಡಿ.9 ರಂದು ನಡೆದ 37ನೇ ವರ್ಷದ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 04 ಜೊತೆ ಅಡ್ಡಹಲಗೆ: 03 ಜೊತೆ ಹಗ್ಗ ಹಿರಿಯ: 20 ಜೊತೆ ನೇಗಿಲು ಹಿರಿಯ: 35 ಜೊತೆ ಹಗ್ಗ ಕಿರಿಯ: 36 ಜೊತೆ ನೇಗಿಲು ಕಿರಿಯ: 110 ಜೊತೆ ಒಟ್ಟು ಕೋಣಗಳ ಸಂಖ್ಯೆ: 208 ಜೊತೆ ಕನೆಹಲಗೆ: ( ಸಮಾನ ಬಹುಮಾನ ) ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ […]

ಕ್ಷಣ ಕ್ಷಣ ಬದಲಾಗುವ ಪ್ರಕೃತಿಯಿಂದ ಏನನ್ನೂ ನಿರೀಕ್ಷಿಸಬೇಡ….. ವೈಲ್ಡ್ ಲೈಫ್ ಛಾಯಾಗ್ರಾಹಕ ಕಂಡ ಕಾಡಿನ ರೋಚಕ ಕಥನ

ಹೊಸದೊಂದು ಕಥೆ ಬರೆಯುತಿರುವೆ ಮಾಡಿ ಹಳೆ ಪದಗಳ ರಿಪೇರಿ. ಎಂದಿನಂತೆ ದಿನ ಸಾಗುತ್ತಿತ್ತು. ಸಾಮಾನ್ಯ ದಿನವೆಂಬಂತೆ ನನ್ನ ದೈನಂದಿನ ಕೆಲಸದಲ್ಲಿ ತೊಡಗಿರುವಾಗ ನನ್ನ ಗುರುಗಳಾದ ಶ್ರೀಕಾಂತ್ ಸರ್ ನನಗೆ ಕರೆ ಮಾಡಿ “ಕಾಡಲ್ಲಿ ಹುಲಿಯ ತಾಜಾ ಹೆಜ್ಜೆ ಗುರುತು ಕಂಡಿದೆಯಂತೆ ಬಾ ಹೋಗೋಣ” ಅಂತ ಕರೆದರು. ನಾನು ಬಹಳ ಉತ್ಸಾಹದಿಂದ ಎಲ್ಲಾ ಕೆಲಸ ಅರ್ಧಕ್ಕೆ ನಿಲ್ಲಿಸಿ ಕ್ಯಾಮೆರಾ ಬ್ಯಾಗ್ ತೆಗೆದುಕೊಂಡು ಮಧ್ಯಾಹ್ನ ಸುಮಾರು 1.30ಕ್ಕೆ ಮನೆ ಬಿಟ್ಟು ಭಾರೀ ಹುಮ್ಮಸ್ಸಿನಲ್ಲಿ ಕಾಡಿನತ್ತ ಹೊರಟೆ. ಸರ್ ನ ಮನೆ […]