ನಿದ್ರಾಹೀನತೆ ನಿಮ್ಮನ್ನು ಬಾಧಿಸುತ್ತಿದೆಯೆ? ಇಲ್ಲಿವೆ ಸುಖ ನಿದ್ದೆಗೆ ಜಾರಲು ಸುಲಭ ಸೂತ್ರಗಳು

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯು ವಯೋಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ತಂತ್ರಜ್ಞಾನದ ಅತಿಯಾದ ಬಳಕೆ, ಒತ್ತಡ ಭರಿತ ಜೀವನ, ಕುಡಿತ ಮತ್ತಿತರ ದುರಾಭ್ಯಾಸಗಳಿಂದಾಗಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದು ಮನಸ್ಸು ಮತ್ತು ದೇಹದ ಆರೋಗ್ಯವನ್ನು ಕೆಡಿಸಿಕೊಳ್ಳುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯವಂತ ದೇಹಕ್ಕೆ ಪೋಷಕಾಂಶಯುಕ್ತ ಆಹಾರ ಎಷ್ಟು ಮುಖ್ಯವೋ ಆರೋಗ್ಯವಂತ ಮನಸ್ಸಿಗೆ ಗಡದ್ದಾದ ನಿದ್ದೆಯೂ ಅಷ್ಟೇ ಮುಖ್ಯ ಎನ್ನುವುದನ್ನು ಆಯುರ್ವೇದ ಕೂಡಾ ಹೇಳುತ್ತದೆ. ಸುಲಭವಾಗಿ ನಿದ್ದೆಗೆ ಜಾರಲು ಮಂತ್ರದಂಡದ ಪರಿಹಾರೋಪಾಯಗಳು ಇಲ್ಲದಿದ್ದರೂ, ದೈನಂದಿನ ದಿನಚರಿಯನ್ನು ಶಿಸ್ತುಬದ್ದವಾಗಿಸಿಕೊಳ್ಳುವ ಮೂಲಕ ನೆಮ್ಮದಿಯ ನಿದ್ದೆಯನ್ನು […]

ಪ್ರಕೃತಿಯ ವರದಾನ ತೆಂಗಿನೆಣ್ಣೆಯಿಂದ ಚಳಿಗಾಲದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಮುಕ್ತಿ ಹಾಡಿ

ಸಂಸ್ಕೃತದಲ್ಲಿ ನಾರೀಕೇಳವೆಂದು ಕರೆಸಿಕೊಳ್ಳುವ ಕಲಿಯುಗದ ಕಲ್ಪವೃಕ್ಷವೆಂಬ ತೆಂಗಿನಕಾಯಿಯ ಉಪಯೋಗಗಳು ಒಂದಲ್ಲ ಎರಡಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮೊದಲನೆ ಸ್ಥಾನ ಗೋವಿಗಾದರೆ ಎರಡನೆ ಸ್ಥಾನ ತೆಂಗಿನಕಾಯಿಗೆ ಮೀಸಲು. ಗೋವು ಮತ್ತು ತೆಂಗಿನಕಾಯಿಯ ಪ್ರತಿಯೊಂದು ಅಂಶಗಳೂ ಬಹುಉಪಯೋಗಿ. ಪ್ರಕೃತಿ ಮನುಕುಲಕ್ಕೆ ನೀಡಿದ ಅತ್ಯಂತ ಉತ್ಕೃಷ್ಟ ಉಡುಗೊರೆಗಳೆಂದರೆ ಅದು ಗೋವಿನ ಹಾಲು ಮತ್ತು ತೆಂಗಿನಎಣ್ಣೆ. ತೆಂಗಿನೆಣ್ಣೆಯ ವಿಶಿಷ್ಟತೆ ಉಷ್ಣವಲಯದ ಪ್ರಾಕೃತಿಕ ಬೆಳೆಯಾಗಿರುವ ತೆಂಗಿನೆಣ್ಣೆಯ ವಿಶಿಷ್ಟತೆ ಒಂದೆರೆಡಲ್ಲ. # ಲಾರಿಕ್ ಆಸಿಡ್ ಅನ್ನು ಹೊಂದಿರುವುದರಿಂದ ಉತ್ತಮವಾದ ಚರ್ಮ-ಸ್ನೇಹಿ ಕೊಬ್ಬಿನಾಮ್ಲವಾಗಿದೆ # ಒಲೀಕ್ ಆಸಿಡ್ ಅನ್ನು […]

ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವ ಆಯುರ್ವೇದ

ಆಯುಸ್ + ವೇದ ಈ ಎರಡು ಶಬ್ದಗಳಿಂದ ಉತ್ಪತ್ತಿಯಾಗಿರುವುದು ಆಯುರ್ವೇದ. ಆಯುಸ್ ಎಂದರೆ ದೀರ್ಘಾಯುಷ್ಯ, ವೇದ ಅಂದರೆ ಜ್ಞಾನ. ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವುದು ಆಯುರ್ವೇದ.ಆಯುರ್ವೇದ ಅಮೃತ ಕೇಂದ್ರದ ಸುಧಾರಿತ ಸಂಶೋಧನೆಯ ಸಂಶೋಧನಾ ನಿರ್ದೇಶಕರಾದ ಡಾ.ಪಿ.ರಾಮ್ ಮನೋಹರ್ ‘ಭಾರತೀಯ ಮನೋವಿಜ್ಞಾನ- ಆಯುರ್ವೇದದ ದೃಷ್ಟಿಕೋನ’ ಈ ಕುರಿತು ಒಂದು ಉಪನ್ಯಾಸವನ್ನು ನೀಡಿದ್ದಾರೆ. ಆಯುರ್ವೇದ ಮತ್ತು ಮನೋವಿಜ್ಞಾನ ಹೇಗೆ ದೇಹ ಮತ್ತು ಆತ್ಮದಂತೆ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದನ್ನು ಈ ಉಪನ್ಯಾಸದಲ್ಲಿ ವಿವರಿಸಿದ್ದಾರೆ. ಆಯುರ್ವೇದ ಎನ್ನುವುದು ಜೀವ ವಿಜ್ಞಾನ. ಸಾವು […]

ವಿಶ್ವ ದೃಷ್ಟಿ ದಿನ: ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆಗಳು..

ಪ್ರಪಂಚವನ್ನು ನೋಡಲು ಮತ್ತು ಜಗತ್ತಿನ ಸೌಂದರ್ಯವನ್ನು ಆಸ್ವಾದಿಸಲು ಸಹಾಯ ಮಾಡುವುದು ನಮ್ಮ ಕಣ್ಣುಗಳು. ಕಣ್ಣಿಲ್ಲದ ಪ್ರಪಂಚವನ್ನು ಊಹಿಸಲೂ ಅಸಾಧ್ಯ. ಜಗತ್ತಿನಲ್ಲಿ ಎಷ್ಟೋ ಜನ ಈ ಅವಕಾಶದಿಂದ ವಂಚಿತರಾಗಿದ್ದಾರೆ. ಕಣ್ಣುಗಳನ್ನು ಹೊಂದಿರುವವರು ಕಣ್ಣಿನ ಆರೋಗ್ಯವನ್ನು ಅಲಕ್ಷಿಸಿ ಬೆಳಕನ್ನು ಕಳೆದುಕೊಳ್ಳುತ್ತಾರೆ. ಕಣ್ಣಿನ ಆರೋಗ್ಯ ಅತ್ಯಂತ ಪ್ರಮುಖವಾದುದು. ಕಣ್ಣಿನ ಆರೋಗ್ಯಕ್ಕಾಗಿ ಸಲಹೆಗಳು: ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸಿ. ನಿಮ್ಮ ಆಹಾರವು ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಿರಬೇಕು. ಗಾಢ ಹಳದಿ ಮತ್ತು ಹಸಿರು ತರಕಾರಿಗಳು ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಮತ್ಯ್ಸಾಹಾರ […]

ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತವಾಗಲು ಕಾರಣವೇನು? ನಿಮ್ಮ ಹೃದಯದ ದನಿ ಕೇಳಿಸಿಕೊಳ್ಳಿ…

ಇತ್ತೀಚೆಗೆ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಜಿಮ್ ನಲ್ಲಿ ಇತರ ರೀತಿಯ ತೀವ್ರವಾದ ವ್ಯಾಯಾಮವನ್ನು ಮಾಡುವಾಗ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚು ಕಂಡುಬರುತ್ತಿವೆ. ವ್ಯಾಯಾಮವು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೃದಯಾಘಾತವನ್ನು ತಡೆಯುತ್ತದೆ ಎಂದು ನಂಬಲಾಗುತ್ತಿದ್ದರೂ ಇದರಿಂದ ಪ್ರತಿಕೂಲ ಪರಿಣಾಮಗಳಾಗುತ್ತಿರುವುದು ಎಲ್ಲರನ್ನೂ ವ್ಯಾಯಾಮದ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದೆ. ವ್ಯಾಯಮಕ್ಕೂ ಪೂರ್ವದ ಆರೋಗ್ಯ ಸ್ಥಿತಿಯ ನಿರ್ದಿಷ್ಟ ಸಂದರ್ಭಗಳು ಮತ್ತು ವ್ಯಾಯಾಮದ ತೀವ್ರತೆಯು ಸಂದರ್ಭಾನುಸಾರವಾಗಿ ಬದಲಾಗಬಹುದು. ಈ ಸ್ಪಷ್ಟ ವಿರೋಧಾಭಾಸವನ್ನು ವಿವರಿಸಲು ಸಹಾಯ ಮಾಡುವ ಕೆಲವು […]