ಹಲಸಿನ ಸೀಸನ್‌ ಎಚ್ಚರವಿರಲಿ! ಈ ಪದಾರ್ಥಗಳ ಜೊತೆ ಹಲಸು ತಿಂದರೆ ಕಾಡಬಹುದು ಸಮಸ್ಯೆ

ಹಸಿದು ಹಲಸು ಅನ್ನೋ ಜನಪ್ರಿಯ ಮಾತಿದೆ. ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಇದು ಪೋಷಕಾಂಶಗಳ ಭಂಡಾರವಾಗಿದ್ದು, ಜೀರ್ಣಕ್ರಿಯೆ ಸುಧಾರಿಸಲು ಸಹಾಯಕ. ಹಾಗೇ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಆದರೆ ಹಲಸು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸಿದರೆ ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಲಸು ತಿಂದ ಬಳಿಕ ಯಾವ ಆಹಾರಗಳನ್ನು ತಪ್ಪಿಸಬೇಕು? ಹಾಲು ಮತ್ತು ಹಾಲಿನ […]

ಕೆಮ್ಮಿನ ಸಿರಪ್ ಬೇಕಿಲ್ಲ, ಈ ನೈಸರ್ಗಿಕ ಮನೆಮದ್ದು ಕೆಮ್ಮಿನ ಸಿರಪ್ ಗಿಂತಲೂ ಒಳ್ಳೆಯ ಕೆಲಸ ಮಾಡುತ್ತೆ!

ಶೀತ ಮತ್ತು ಕೆಮ್ಮಿನ ಸಮಸ್ಯೆ ಎದುರಾದಾಗ ಸಿರಪ್ ಮೊರೆ ಹೋಗುವುದು ಸಾಮಾನ್ಯ. ಆದರೆ ಆರೋಗ್ಯ ಸಚಿವಾಲಯ ವೈದ್ಯರ ಶಿಫಾರಸ್ಸು ಇಲ್ಲದೇ ಕೆಮ್ಮಿನ ಸಿರಪ್ ಸೇವಿಸದಂತೆ ಸೂಚಿಸಿದೆ. ಇಂತಹ ಸಿರಪ್ ಗಳು ಹಾನಿಕಾರಕ ಎಂದೂ ಬಹಿರಂಗವಾಗಿದೆ. ಔಷಧಿಗಳಿಗಿಂತ ನೈಸರ್ಗಿಕ ಪರಿಹಾರಗಳಿಗೆ ಹೆಚ್ಚು ಆದ್ಯತೆ ನೀಡುವುದು ಬೆಸ್ಟ್. ಜೇನುತುಪ್ಪ, ಶುಂಠಿ ಮತ್ತು ತುಳಸಿಯಿಂದ ತಯಾರಿಸಲಾದ ಮನೆಮದ್ದುಗಳು ಸುಲಭವಾಗಿ ಲಭ್ಯವಾಗುವುದರ ಜೊತೆಗೆ ಕಡಿಮೆ ವೆಚ್ಚದ ಆಯ್ಕೆಗಳಾಗಿವೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಜೇನುತುಪ್ಪವು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, […]

ನೇರಳೆ ಹಣ್ಣಿನ ಸಮೃದ್ಧ ಫಸಲು ಬರಗಾಲದ ಮುನ್ಸೂಚನೆಯೇ? ಪೂರ್ವಜರ ನಂಬಿಕೆಗೆ ಇಲ್ಲಿದೆ ವೈಜ್ಞಾನಿಕ ವಿವರಣೆ

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಹೇರಳವಾಗಿ ಕಂಡುಬರುತ್ತಿರುವ ನೇರಳೆ ಹಣ್ಣಿನ ಫಸಲು ಬರಗಾಲದ ಸೂಚನೆಯೇ ಎಂಬ ಚರ್ಚೆ ಜೋರಾಗಿದೆ. “ನೇರಳೆ ಹಣ್ಣು ಹೆಚ್ಚು ಬಂದರೆ ಆ ವರ್ಷ ಬರಗಾಲ ಬರುತ್ತದೆ” ಎಂಬುದು ಜನಪದದಲ್ಲಿ ಹಿರಿಯರಿಂದ ಬಂದಿರುವ ನಂಬಿಕೆ. ಇದೇ ವೇಳೆ ಮುಂಗಾರು ಮಳೆ ನಿರೀಕ್ಷೆಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯೂ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಎಲ್‌ನಿನೋ ಪರಿಣಾಮದಿಂದ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗುವ […]

ಆಹಾರ ಪೊಟ್ಟಣಕ್ಕೆ ದಿನಪತ್ರಿಕೆ ಬೇಡವೇ ಬೇಡ ಎಂದ ಆಹಾರ ಪ್ರಾಧಿಕಾರ,ಬಳಸಿದ್ರೆ ಏನಾಗುತ್ತೆ? ಯಾಕೆ ಈ ಎಚ್ಚರಿಕೆ?

ನವದೆಹಲಿ: ಬೀದಿ ಬದಿ ಅಂಗಡಿಗಳಲ್ಲಿ ಬಜ್ಜಿ, ಬೋಂಡಾ, ಚುರುಮುರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಪೊಟ್ಟಣ ಮಾಡಿ ನೀಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಗದದ ಬಳಕೆ ಉತ್ತಮವೆಂದು ಪರಿಗಣಿಸಲಾದರೂ, ಆಹಾರವನ್ನು ದಿನಪತ್ರಿಕೆಗಳಲ್ಲಿ ಸುತ್ತುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಚ್ಚರಿಕೆ ನೀಡಿದೆ. ಆಹಾರ ಪದಾರ್ಥಗಳ ಪ್ಯಾಕಿಂಗ್‌ಗಾಗಿ ದಿನಪತ್ರಿಕೆಗಳನ್ನು ಬಳಸಬಾರದು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಆದರೆ ಮುಂಬೈನಲ್ಲಿ ವಡಾ ಪಾವ್ ಸೇರಿದಂತೆ ವಿವಿಧ […]

25-35 ವಯಸ್ಸಿಗೇ ಮೊಣಕಾಲು ನೋಯುತ್ತಿದೆಯೇ? ಕಾರಣ ಇಲ್ಲಿದೆ

ಒಂದು ಕಾಲದಲ್ಲಿ ಮೊಣಕಾಲು ನೋವು ವಯೋವೃದ್ಧರ ಸಮಸ್ಯೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 25ರಿಂದ 35 ವರ್ಷದ ಯುವಕರಲ್ಲಿಯೂ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಜೀವನಶೈಲಿಯ ಬದಲಾವಣೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಹೆಚ್ಚುತ್ತಿರುವ ತೂಕ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಯುವಕರಲ್ಲಿ ಮೊಣಕಾಲು ನೋವಿಗೆ ಪ್ರಮುಖ ಕಾರಣಗಳು 1. ದೀರ್ಘ ಸಮಯ ಕುಳಿತು ಕೆಲಸ ಮಾಡುವುದು ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ಸಂಧಿಗಳ ಚಲನೆ ಕಡಿಮೆಯಾಗುತ್ತದೆ. ರಕ್ತಸಂಚಾರ ಸರಿಯಾಗಿ […]