ಪಡುಬಿದ್ರಿ: ಹೆದ್ದಾರಿಯಲ್ಲಿ ನಿಂತ ಲಾರಿಗೆ ಸ್ಕೂಟರ್ ಡಿಕ್ಕಿ; ಯುವಕ ಸಾವು

ಉಡುಪಿ: ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾರೆ.ಮೃತರನ್ನು ಮಂಜುನಾಥ ಬೈಲಪ್ಪ ಮುರಗಾಲಿ (21) ಎಂದು ಗುರುತಿಸಲಾಗಿದೆ. ಇವರು ಕಾರ್ಕಳ ಕಡೆಯಿಂದ ಸುರತ್ಕಲ್ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.ರಾತ್ರಿ ವೇಳೆ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಪಾರ್ಕಿಂಗ್ ಲೈಟ್ ಅಥವಾ ಇಂಡಿಕೇಟರ್ ಅಳವಡಿಸದೆ, […]
Karnataka Dams: ಮೈತುಂಬಿಕೊಂಡ ಕರುನಾಡಿನ ಈ ಜಲಾಶಯಗಳು, ಆಲಮಟ್ಟಿ, ಹಿಡಕಲ್ ಭರ್ತಿ; KRS-ಕಬಿನಿ ಕಥೆ ಏನು

ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಹಿಡಕಲ್, ನಾರಾಯಣಪುರ, ಭದ್ರಾ, ತುಂಗಭದ್ರಾ, ಹಾರಂಗಿ ಭರ್ತಿಯಾಗಿವೆ. KRS, ಕಬಿನಿ, ಹೇಮಾವತಿ, ವಾಣಿವಿಲಾಸ ಸಾಗರ, ಮಲಪ್ರಭಾ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಬೆಂಗಳುರು: ಕರ್ನಾಟಕದಾದ್ಯಂತ (Karnataka) ವರುಣನ ಅಲೆ ಮುಂದುವರಿದಿದ್ದು, ರಾಜ್ಯದ ಜೀವನಾಡಿಯಾಗಿರುವ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಭಾರೀ ಏರಿಕೆಯಾಗಿದೆ. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ ಪ್ರಮುಖ ಅಣೆಕಟ್ಟುಗಳು (Dams) ಸಂಪೂರ್ಣ ಭರ್ತಿಯಾಗುವ ಹಂತ ತಲುಪಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಯಾವ […]
ರಕ್ತಕ್ಕೂ ಇದೆ ಎಕ್ಸ್ಪೈರಿ ಡೇಟ್? ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸತ್ಯವಿದು!

ರಕ್ತದಾನ ಮಾಡಿದ ಬಳಿಕ ಆ ರಕ್ತವನ್ನು ಬ್ಲಡ್ ಬ್ಯಾಂಕ್ನಲ್ಲಿ ಶಾಶ್ವತವಾಗಿ ಸಂಗ್ರಹಿಸಿಡಲು ಸಾಧ್ಯವಿಲ್ಲ. ರಕ್ತದ ವಿವಿಧ ಘಟಕಗಳಿಗೆ ನಿರ್ದಿಷ್ಟ ಶೇಖರಣಾ ಅವಧಿ ಇರುತ್ತದೆ. ಹಾಗಾದರೆ ರಕ್ತ ಎಷ್ಟು ದಿನಗಳವರೆಗೆ ಬಳಸಬಹುದು? ರಕ್ತದ ಯಾವ ಘಟಕವನ್ನು ಎಷ್ಟು ಕಾಲ ಸಂಗ್ರಹಿಸಲಾಗುತ್ತದೆ? ಇಲ್ಲಿದೆ ಮಾಹಿತಿ. ನಾವು ರಕ್ತದಾನ ಮಾಡಿದ ತಕ್ಷಣ ಅದನ್ನು ನೇರವಾಗಿ ರೋಗಿಗೆ ವರ್ಗಾವಣೆ ಮಾಡುವುದಿಲ್ಲ. ಬ್ಲಡ್ ಬ್ಯಾಂಕ್ಗೆ ಬಂದ ರಕ್ತವನ್ನು ಪರೀಕ್ಷಿಸಿ, ಅಗತ್ಯಕ್ಕೆ ಅನುಗುಣವಾಗಿ ಕೆಂಪು ರಕ್ತ ಕಣಗಳು (Red Blood Cells), ಪ್ಲೇಟ್ಲೆಟ್ಸ್ ಮತ್ತು ಪ್ಲಾಸ್ಮಾ […]
ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ-ಉಂಡೆಗಳ ಭರ್ಜರಿ ತಯಾರಿ

ಉಡುಪಿ: ಕೃಷ್ಣಭಕ್ತಿ ಮತ್ತು ಜಾನಪದ ಕಲೆಯ ಅಪೂರ್ವ ಸಂಗಮಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಎರಡು ದಿನಗಳ ಕಾಲ ರಥಬೀದಿ ಸಹಿತ ನಗರದ ಮೂಲೆ ಮೂಲೆಗಳಲ್ಲಿ ಕರಾವಳಿಯ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು, ಇಡೀ ನಗರವೇ ಮುಕ್ತ ರಂಗಮಂದಿರವಾಗಿ ಪರಿವರ್ತನೆಯಾಗಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಈ ಬಾರಿ ಬರೋಬ್ಬರಿ 2.50 ಲಕ್ಷ ಚಕ್ಕುಲಿ ಹಾಗೂ ವಿವಿಧ ಬಗೆಯ ಉಂಡೆಗಳನ್ನು ಸಿದ್ಧಪಡಿಸಲಾಗುತ್ತಿದೆ. […]