ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ, ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಸಂಪನ್ನ

ಉಡುಪಿ: ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ ಹಾಗೂ ಶ್ರೀ ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಹಾಗೂ ದ್ವಿತೀಯ ವರ್ಧಂತ್ಯೋತ್ಸವ ಪುತ್ತೂರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ನಡೆಯಿತು. ನವಕಲಾ ಸಾನಿಧ್ಯ ಹೋಮ, ವಾಯುಸ್ತುತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಭಜನ ಸಂಕೀರ್ತನೆ, ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಜರಗಿತು. ಸಂಸ್ಥೆಯ ಅಧ್ಯಕ್ಷ ಜಗದೀಶ ಕೋಟ್ಯಾನ್, ಮುಖ್ಯ ಶಿಕ್ಷಕ ನೋಣಯ್ಯ ಮಾಸ್ತರ್, ಶಿಕ್ಷಕ ಸಿರಿಲ್ ನೊರೊನ್ಹಾ, ಕೌರವ ಸಲಹೆಗಾರ ಕುಡ್ಟ […]

ಸುಖೋಯ್ ಯುದ್ದವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ತಮ್ಮ ಚೊಚ್ಚಲ ಫೈಟರ್ ಜೆಟ್ ಹಾರಾಟ ನಡೆಸಿದರು. ಅಸ್ಸಾಂನ ಆಯಕಟ್ಟಿನ ವಾಯುನೆಲೆಯಾದ ತೇಜ್‌ಪುರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 MKI ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಹಾರಾಟ ನಡೆಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆಯ ಮೇಲೆ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ವಾಯುಪಡೆಯ ನಿಲ್ದಾಣಕ್ಕೆ ಮರಳಿದರು. ಹಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಮುರ್ಮು, “ಅಚ್ಛಾ ಲಗಾ” ಎಂದಿದ್ದಾರೆ. […]

ಕೃಷಿಕ ಮಿತ್ರರ ನಂಬಿಕೆ: ಈಸಿ ಲೈಫ್ ಗೆ ದಶಮಾನೋತ್ಸವದ ಸಂಭ್ರಮ

ಕೃಷಿಕ ಮಿತ್ರರ ನಂಬಿಕೆ, ಪ್ರೀತಿ ಮತ್ತು ವಿಶ್ವಾಸಾರ್ಹತೆಗೆ ಹೆಸರಾದ ಈಸಿ ಲೈಫ್ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಗ್ರಾಹಕರ ಸಹಕಾರದಿಂದ ಸಂಸ್ಥೆಯು ಅಭಿವೃದ್ದಿಯನ್ನು ಹೊಂದಿದ್ದು, ಇದಕ್ಕೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಸಂಸ್ಥೆಯು ಧನ್ಯವಾದಗಳನ್ನು ಸಲ್ಲಿಸಿದೆ.   ಗ್ರಾಹಕರ ಪ್ರೀತಿ, ವಿಶ್ವಾಸ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಆಶಿಸಿರುವ ಸಂಸ್ಥೆಯು ಮುಂದೆಯೂ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನಿರಂತರವಾಗಿ ನೀಡಲಿದೆ.

ಏಪ್ರಿಲ್ 10 ರಿಂದ ಮೇ 10 ರವರೆಗೆ Kids Isle ಲಿಟಲ್ ಏಂಜೆಲ್ಸ್ ಸಮ್ಮರ್ ಕ್ಯಾಂಪ್

ಉಡುಪಿ: ಬ್ರಹ್ಮಗಿರಿಯಲ್ಲಿರುವ ಫಾರ್ಚೂನ್ ಕ್ಯಾಂಪಸ್ ನಲ್ಲಿ Kids Isle ವತಿಯಿಂದ ಏಪ್ರಿಲ್ 10 ರಿಂದ ಮೇ 10 ರವರೆಗೆ 14 ವರ್ಷದೊಳಗಿನ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್-2023 ಅನ್ನು ಆಯೋಜಿಸಲಾಗಿದ್ದು, ವಿವಿಧ ಚಟುವಟಿಕೆಗಳಾದ ಸ್ವಿಮ್ಮಿಂಗ್, ಕರಾಟೆ, ಡ್ರಾಯಿಂಗ್, ಡ್ಯಾನ್ಸ್, ಸಿಂಗಿಂಗ್, ಇನ್ ಡೋರ್ ಗೇಮ್ಸ್ ಮತ್ತು ಔಟ್ ಡೋರ್ ಗೇಮ್ಸ್ ಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ನಿತ್ಯ ಮಧ್ಯಾಹ್ನದವರೆಗೆ ನುರಿತ ಶಿಕ್ಷಕ ವರ್ಗ ದವರಿಂದ ವಿವಿಧ ತರಗತಿಗಳು ನಡೆಯುತ್ತವೆ. ಮಧ್ಯಾಹ್ನದ ಬಳಿಕ ನಿತ್ಯವೂ ಪ್ರವಾಸಗಳನ್ನು ಏರ್ಪಡಿಸಲಾಗುತ್ತದೆ. ಆಹಾರ, ಸಸ್ಯಾಹಾರಿ ಭೋಜನ […]

ನ್ಯಾಯ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಕರ್ನಾಟಕ ರಾಜ್ಯ ಪೊಲೀಸ್

ನವದೆಹಲಿ: ಕರ್ನಾಟಕ ರಾಜ್ಯ ಪೊಲೀಸ್ (KSP) ಭಾರತದಲ್ಲಿ ನ್ಯಾಯ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಇತ್ತೀಚಿನ ‘ಭಾರತ ನ್ಯಾಯ ವರದಿ’ ತೋರಿಸಿದೆ. ದಕ್ಷಿಣ ರಾಜ್ಯಗಳು ಪಟ್ಟಿಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿವೆ ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಕಾನ್‌ಸ್ಟಾಬ್ಯುಲರಿಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾಗಳನ್ನು ಪೂರೈಸಿದ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ವರದಿ ತಿಳಿಸಿದೆ. ಬೇರೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಎಲ್ಲಾ ಮೂರು ಕೋಟಾಗಳನ್ನು ಪೂರೈಸಿಲ್ಲ. […]