ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ, ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಸಂಪನ್ನ

ಉಡುಪಿ: ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ ಹಾಗೂ ಶ್ರೀ ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಹಾಗೂ ದ್ವಿತೀಯ ವರ್ಧಂತ್ಯೋತ್ಸವ ಪುತ್ತೂರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ನಡೆಯಿತು.

ನವಕಲಾ ಸಾನಿಧ್ಯ ಹೋಮ, ವಾಯುಸ್ತುತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಭಜನ ಸಂಕೀರ್ತನೆ, ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಜರಗಿತು.

ಸಂಸ್ಥೆಯ ಅಧ್ಯಕ್ಷ ಜಗದೀಶ ಕೋಟ್ಯಾನ್, ಮುಖ್ಯ ಶಿಕ್ಷಕ ನೋಣಯ್ಯ ಮಾಸ್ತರ್, ಶಿಕ್ಷಕ ಸಿರಿಲ್ ನೊರೊನ್ಹಾ, ಕೌರವ ಸಲಹೆಗಾರ ಕುಡ್ಟ ಪೂಜಾರಿ, ಗೌರವಾಧ್ಯಕ್ಷರಾದ ಕೆ. ಕೊಗ್ಗಪ್ಪ, ವಿಟ್ಠಲ ಕುಂದರ್, ಭಾಸ್ಕರ ಸುವರ್ಣ, ಅಪ್ಪಣ್ಣ ಸನಿಲ್, ಉಪಾಧ್ಯಕ್ಷ ಸುರೇಂದ್ರ ಜತ್ತನ್, ಕಾರ್ಯದರ್ಶಿ ಉಮೇಶ್ ಕುಂದರ್, ಜತೆ ಕಾರ್ಯದರ್ಶಿ ನಿತಿನ್ ಬಂಗೇರ, ಕೋಶಾಧಿಕಾರಿ ಉಮೇಶ ಜತ್ತನ್, ಜತೆ ಕೋಶಾಧಿಕಾರಿ ಅಶ್ವತ್ ಪೂಜಾರಿ, ಸಂಘಟನ ಕಾರ್ಯದರ್ಶಿ ಕೃಷ್ಣ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ರೋಹಿತ್, ಜತೆ ಕ್ರೀಡಾ ಕಾರ್ಯದರ್ಶಿಗಳಾದ ಶಶಾಂಕ್ ಕೋಟ್ಯಾನ್, ಸುಶಾಂತ್, ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಕೋಟ್ಯಾನ್, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ ಪೂಜಾರಿ ಉಪಸ್ಥಿತರಿದ್ದರು.