ಬೆಳ್ತಂಗಡಿ: ಸಾಯಿರಾಂ ಗ್ರೂಪ್ ವತಿಯಿಂದ ಆಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ

ಬೆಳ್ತಂಗಡಿ: ತುರ್ತು ಸಂದರ್ಭಗಳಲ್ಲಿ, 24×7 ಸೇವೆಯನ್ನು ನೀಡಲು ಬೆಳ್ತಂಗಡಿ ಸಾಯಿರಾಂ ಗ್ರೂಪ್ ವತಿಯಿಂದ ಆಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಬುಧವಾರ ಕುತ್ಯಾರು ಸೋಮನಾಥೇಶ್ವರ ದೇವರ ಆಶೀರ್ವಾದದೊಂದಿಗೆ ಆಂಬ್ಯುಲೆನ್ಸ್ ಸೇವೆಯು ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಸೀತಾರಾಮ್, ಪವನ್ ಬಂಗೇರ, ರಂಜಿತ್, ಚೇತನ್ ಆಚಾರ್ಯ, ಗಣೇಶ್ ಶೆಟ್ಟಿ, ತಾರಾನಾಥ್, ಮನೋಜ್, ಭುವನೇಶ್ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಿಂದಿಕ್ಕಿದ ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕನಾಗಿ 60 ಸಿಕ್ಸರ್‌ ಸಿಡಿಸಿ ದಾಖಲೆ

ಮಂಗಳವಾರ (ಆಗಸ್ಟ್ 2) ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ 60 ಸಿಕ್ಸರ್‌ ಸಿಡಿಸಿ ಹೊಸ ದಾಖಲೆಯನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೋವಿನ ಭಯದಿಂದ ನಿವೃತ್ತರಾಗಿ ಮೈದಾನದಿಂದ ಹೊರನಡೆಯುವ ಮೊದಲು ಅವರು ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಅನ್ನು ಸಿಡಿಸಿದ್ದರು. ಮಂಗಳವಾರದ ಪಂದ್ಯದಲ್ಲಿ ಅವರ ಏಕೈಕ ಸಿಕ್ಸರ್‌ನೊಂದಿಗೆ, ಭಾರತದ ನಾಯಕನಾಗಿ ಅವರ ಹೆಸರಿಗೆ ಒಟ್ಟು 60 ಸಿಕ್ಸರ್‌ಗಳು ದಾಖಲಾಗಿವೆ. ಶರ್ಮಾ ಈ ಮಾರ್ಕ್ ತಲುಪಲು 34 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, […]

ವರುಣನ ಅಬ್ಬರಕ್ಕೆ ತತ್ತರಿಸಿದ ದಕ್ಷಿಣ ಕನ್ನಡ ಜಿಲ್ಲೆ; ಮನೆ ಮಠ ಕಳೆದುಕೊಂಡು ಅಸ್ತವ್ಯಸ್ತವಾಯಿತು ಜನಜೀವನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ ಫಟ್ಟ ಪ್ರದೇಶದ ತಪ್ಪಲಿನಲ್ಲಿರುವ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು, ಬಾಳುಗೋಡು, ಹರಿಹರಪಳ್ಳತ್ತಡ್ಕ ಮೊದಲಾದ ಭಾಗದಲ್ಲಿ ಹಲವು ಅನಾಹುತಗಳಿಗೆ ಕಾರಣವಾಗಿದೆ. ಕಲ್ಮಕಾರು, ಕಡಮಕಲ್ಲು ಮೊದಲಾದ ಬೆಟ್ಟಗಳಲ್ಲಿ ಉಂಟಾದ ‌ ಮೇಘಸ್ಪೋಟದಿಂದಾಗಿ ಈ ಭಾಗದ ಹೆಚ್ಚಿನ ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಇಲ್ಲಿನ ನಾಗಕ್ಷೇತ್ರ […]

ಎನೋಕ್ ರೆನಾಲ್ಟ್ ನಲ್ಲಿ ಉದ್ಯೋಗಾವಕಾಶ

ಉಡುಪಿ: ಮಂಗಳೂರು, ಉಡುಪಿ, ಪುತ್ತೂರು ಹಾಗೂ ಕುಮುಟಾದ ಎನೋಕ್ ರೆನಾಲ್ಟ್ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳಿವೆ. ಉದ್ಯೋಗದ ವಿವರ: ಕಸ್ಟಮರ್ ರಿಲೇಶನ್ ಎಕ್ಸಿಕ್ಯೂಟಿವ್: ಕನಿಷ್ಠ ಒಂದು ವರ್ಷದ ಅನುಭವವಿರಬೇಕು ಸ್ಥಳ: ಉಡುಪಿ ಸೇಲ್ಸ್ ಆಡ್ಮಿನ್: ಮಂಗಳೂರಿನ ಶಾಖೆಗೆ ಸೇಲ್ಸ್ ಆಡ್ಮಿನ್ ಬೇಕಾಗಿದ್ದಾರೆ ಸೇಲ್ಸ್ ಕನ್ಸಲ್ಟಂಟ್: ಸೇಲ್ಸ್ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು ಸ್ಥಳ: ಮಂಗಳೂರು, ಉಡುಪಿ, ಪುತ್ತೂರು ಹಾಗೂ ಕುಮುಟಾ ಮಾರ್ಕೆಟಿಂಗ್ ಮ್ಯಾನೇಜರ್: ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವಿರಬೇಕು ಸ್ಥಳ: ಉಡುಪಿ ಮಾಹಿತಿಗಾಗಿ ಸಂಪರ್ಕಿಸಿ: 7022002555 ಸಿವಿಗಳನ್ನು […]

ಉಡುಪಿ ಅಂಚೆ ವಿಭಾಗದ ಅಂಚೆ ಕಚೇರಿಗಳಲ್ಲಿ ರೆವಿನ್ಯೂ ಸ್ಟ್ಯಾಂಪ್‌ಗಳು ಲಭ್ಯ

ಉಡುಪಿ: ಅಂಚೆ ಇಲಾಖೆಯ ವತಿಯಿಂದ ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿರುವ ರೆವಿನ್ಯೂ ಸ್ಟ್ಯಾಂಪ್‌ಗಳು ಉಡುಪಿ ಅಂಚೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಖರೀದಿಗೆ ಲಭ್ಯವಿರುವುದಾಗಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.